‘ಸಿದ್ದರಾಮಯ್ಯ ಅವರ ಮಾತು ಶಾಸನಸಭೆಗೆ ತೋರಿದ ಅಗೌರವವಷ್ಟೇ ಅಲ್ಲ, ಸಮಸ್ತ ಜನಪ್ರತಿನಿಧಿಗಳಿಗೆ ಮಾಡಿದ ಅವಮಾನ. ಅವರಿಗೆ ಇಂತಹ ಅಹಂಕಾರ ಶೋಭೆ ತರುವುದಿಲ್ಲ. ಸದನದಲ್ಲಿ ಸದಸ್ಯರನ್ನು ನಿಯಂತ್ರಿಸುವ ಕಾರ್ಯಕ್ಕಾಗಿಯೇ ಸ್ಪೀಕರ್ ಹುದ್ದೆಯನ್ನು ಸೃಷ್ಟಿಸಲಾಗಿದೆಯೇ ಹೊರತು, ಎಷ್ಟಾದರೂ ಹೊತ್ತು ಮಾತನಾಡಲು ಅವಕಾಶ ನೀಡುವುದಕ್ಕಲ್ಲ. ಸದನದ ವಿಷಯದಲ್ಲೂ ರಾಜಕೀಯವಾಗಿ ಟೀಕೆ ಮುಂದುವರಿಸಿದರೆ ಸಿದ್ದರಾಮಯ್ಯ ವಿರುದ್ಧ ಎಲ್ಲೆಡೆ ಪ್ರತಿಭಟನೆ ನಡೆಸಬೇಕಾದೀತು’ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕಮಾರ್ ಎಚ್ಚರಿಸಿದ್ದಾರೆ.