<p><strong>ಬೆಂಗಳೂರು</strong>: ‘ಕೇಂದ್ರ ಸರ್ಕಾರದ ದಬ್ಬಾಳಿಕೆ ವಿರುದ್ಧ ಹೋರಾಟ ರೂಪಿಸಲು ದಕ್ಷಿಣದ ರಾಜ್ಯಗಳ ಮುಖ್ಯಮಂತ್ರಿಗಳ ಸಮ್ಮೇಳನ ಆಯೋಜಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.</p><p>ಸಮಾಜವಾದಿ ಅಧ್ಯಯನ ಕೇಂದ್ರ, ಸಮಾಜವಾದಿ ಸಂಗಮವು ಮಂಗಳವಾರ ಆಯೋಜಿಸಿದ್ದ ದಕ್ಷಿಣ ಭಾರತ ಸಮಾಜವಾದಿಗಳ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.</p><p>‘ಆರ್ಥಿಕ ನಿಯಂತ್ರಣ, ರಾಜಕೀಯ ಒತ್ತಡ, ಸಾಂವಿಧಾನಿಕ ಹಕ್ಕುಗಳ ದುರುಪಯೋಗದ ಮೂಲಕ ಕೇಂದ್ರ ಸರ್ಕಾರವು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತಿದೆ’ ಎಂದು ಟೀಕಿಸಿದರು.</p><p>‘ಭಾರತದಲ್ಲಿ ಪ್ರಜಾಪ್ರಭುತ್ವದ ಹಾದಿಯು ಈಗ ಮತ್ತೆ ನಿರಂಕುಶತೆಯ ಕಡೆಗೆ ಹೊರಳುತ್ತಿರುವುದನ್ನು ಗಮನಿಸುತ್ತಿದ್ದೇವೆ. ಜನ ಸೇವೆ ಮಾಡಲು ರಾಜ್ಯಗಳಿಗೆ ಅಧಿಕಾರ ಬೇಕು ಎನ್ನುವುದರ ಬದಲಾಗಿ, ರಾಜ್ಯಗಳ ಅಧಿಕಾರ ಕಸಿದು ಕೇಂದ್ರದ ಏಜೆಂಟ ರನ್ನಾಗಿ ಮಾಡಿಕೊಳ್ಳುವ ಪ್ರಯತ್ನ ನಡೆದಿದೆ’ ಎಂದು ದೂರಿದರು.</p><p><strong>ಕಾಂಗ್ರೆಸ್ನಿಂದ ಬಲ:</strong> ‘ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹಣಕಾಸು ಆಯೋಗಕ್ಕೆ ಆರ್ಥಿಕ ನ್ಯಾಯ ನೀಡುವ ಸ್ವತಂತ್ರ ಮಧ್ಯವರ್ತಿ ಸಂಸ್ಥೆಯಂತೆಯೇ ಬಲ ತುಂಬಿದೆ. ಯುಪಿಎ ಸರ್ಕಾರ ಉದ್ಯೋಗ, ಶಿಕ್ಷಣ, ಆಹಾರ, ಮಾಹಿತಿ ಹಕ್ಕು ನೀಡುವ ರೂಪದಲ್ಲಿ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಿತ್ತು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಈಗ ಎಲ್ಲ ಆಶಯಗಳನ್ನು ಬುಡಮೇಲು ಮಾಡಿದ್ದು, ನಿಯಂತ್ರಣ ಹಾಗೂ ಪಾಲುದಾರಿಕೆ ಎನ್ನುವುದನ್ನು ದಂಡನೆ ಎನ್ನುವ ಹಂತಕ್ಕೆ ತಂದಿಟ್ಟಿದೆ’ ಎಂದು ಆಪಾದಿಸಿದರು.</p><p>‘ಕರ್ನಾಟಕದ ಆಡಳಿತಕ್ಕೆ ಸಮಾಜವಾದದ ಅಡಿಪಾಯವನ್ನು ಹಲವು ನಾಯಕರು ಹಾಕಿಕೊಟ್ಟಿದ್ದಾರೆ. ಅದು ಈಗಲೂ ದಾರಿದೀಪವಾಗಿ ಕೆಲಸ ಮಾಡುತ್ತಿದೆ. ಸಮಸಮಾಜ ನಿರ್ಮಾಣವೇ ಸಮಾಜವಾದದ ಮೂಲ ಆಶಯವಾಗಿದ್ದರೂ ಈಗ ಇದನ್ನು ಪಟ್ಟಭದ್ರ ಹಿತಾಸಕ್ತಿಗಳು ದುರ್ಬಲಗೊಳಿಸುತ್ತಿವೆ. ಏಕಸ್ವಾಮ್ಯ ವನ್ನು ತಪ್ಪಿಸುವುದೇ ಸಮಾಜವಾದದ ಗುರಿ ಆಗಬೇಕು’ ಎಂದು ಹೇಳಿದರು.</p><p><strong>ಅನುದಾನ ಬಿಡುಗಡೆ ಮಾಡಿ:</strong> ‘ಕೇಂದ್ರದ ತೆರಿಗೆ ಪಾಲಿನಲ್ಲಿ ಕನಿಷ್ಠ ಶೇ 50ರಷ್ಟನ್ನಾದರೂ ರಾಜ್ಯಗಳಿಗೆ ಮೀಸಲಿಡಬೇಕು. ಇದಕ್ಕೆ 1971ರ ಜನಗಣತಿ ಮಾನದಂಡವಾಗಬೇಕು. ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯಲ್ಲಿ ದಕ್ಷಿಣ ರಾಜ್ಯಗಳ ಹಿತವನ್ನು ಕಾಪಾಡಬೇಕು. ಅಂತರರಾಜ್ಯ ಮಂಡಳಿ ಯನ್ನು ಪುನರ್ ರಚಿಸಬೇಕು. ಹಣಕಾಸು ಆಯೋಗದ ಅನುದಾನ ಗಳನ್ನು ವಿಳಂಬ ಮಾಡದೇ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದರು.</p><p>ರಾಜ್ಯಸಭೆಯ ಮಾಜಿ ಸದಸ್ಯ ಎಲ್.ಹನುಮಂತಯ್ಯ, ಕೇರಳದ ಮಾಜಿ ಹಣಕಾಸು ಸಚಿವ ಐಸಾಕ್ ಥಾಮಸ್, ತೆಲಂಗಾಣ ಶಾಸಕ ಯಾದವ ರೆಡ್ಡಿ, ಲೋಕಸಭೆಯ ಮಾಜಿ ಸದಸ್ಯ ಥಂಪನ್ ಥಾಮಸ್. ಗೀತಾ ರಾಮಕಿಶನ್ ಉಪಸ್ಥಿತರಿದ್ದರು.</p>.<h2>ಕೇಂದ್ರದ ವಿರುದ್ಧ ಸಿ.ಎಂ ಕಿಡಿ</h2><p>‘ಪ್ರತಿ ವರ್ಷ ಕೇಂದ್ರ ಸರ್ಕಾರಕ್ಕೆ ₹5 ಲಕ್ಷ ಕೋಟಿಯನ್ನು ತೆರಿಗೆ ಹಾಗೂ ವಿವಿಧ ರೂಪದಲ್ಲಿ ನೀಡುತ್ತಿದ್ದೇವೆ. ದೇಶದ ಜನಸಂಖ್ಯೆಯ ಶೇ 5ರಷ್ಟಿದ್ದರೂ ಜಿಡಿಪಿಗೆ ನಮ್ಮ ಕೊಡುಗೆ ಶೇ 8.4ರಷ್ಟಿದೆ. ಅಲ್ಲದೇ ಜಿಎಸ್ಟಿಗೆ ಅತಿ ಹೆಚ್ಚು ಕೊಡುಗೆ ನೀಡುತ್ತಿದ್ದೇವೆ. ದೆಹಲಿಯಿಂದ ಕರ್ನಾಟಕಕ್ಕೆ ಬರೀ 13 ಪೈಸೆ ಮಾತ್ರ ಹಿಂದಿರುಗಿ ಬರುತ್ತಿದೆ.ಒಕ್ಕೂಟ ವ್ಯವಸ್ಥೆ ಎಂದರೆ ಇದೇನಾ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.</p><p>ಯುಪಿಎ ಸರ್ಕಾರವು ಕರ್ನಾಟಕದ ಕೊಡುಗೆ ಗುರುತಿಸಿ 14ನೇ ಹಣಕಾಸು ಆಯೋಗದಡಿ ಶೇ 4.74ರಷ್ಟು ಪಾಲು ಮೀಸಲಿಟ್ಟಿತ್ತು. ಬಿಜೆಪಿ ಸರ್ಕಾರವು 15ನೇ ಹಣಕಾಸು ಆಯೋಗದಡಿ ಇದನ್ನು ಶೇ 3.64ಕ್ಕೆ ಇಳಿಸಿದ್ದು, ಇದರಿಂದ ₹1.25 ಲಕ್ಷ ಕೋಟಿ ದರೋಡೆ ಮಾಡಿದಂತಾಗಿದೆ ಎಂದು ದೂರಿದರು.</p>.<h2>‘ಸಾಂವಿಧಾನಿಕ ಬಿಕ್ಕಟ್ಟು ಬಗೆಹರಿಸಿ’</h2><p>‘ಚುನಾಯಿತ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ರಾಜಭವನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಒಕ್ಕೂಟ ವ್ಯವಸ್ಥೆ ಹಾಗೂ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಸಾಂವಿಧಾನಿಕ ಬಿಕ್ಕಟ್ಟು ಬಗೆಹರಿಸಬೇಕಿದೆ’ ಎಂದು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಸುದರ್ಶನ್ ರೆಡ್ಡಿ ಸಲಹೆ ನೀಡಿದರು.</p><p>ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ನರೇಗಾ ಯೋಜನೆಯಲ್ಲಿ ಗಾಂಧಿ ಹೆಸರು ಬದಲಿಸಿ ರಾಮನ ಹೆಸರಿಡುವ ಪ್ರಯತ್ನ, ಅನುದಾನ ಕಡಿತ, ತೆರಿಗೆ ಹಂಚಿಕೆಯಲ್ಲಿನ ಅಸಮಾನತೆ ರಾಜ್ಯಗಳನ್ನೇ ಶಕ್ತಿಹೀನವಾಗಿಸುತ್ತಿದೆ. ರಾಜ್ಯ ಸರ್ಕಾರಗಳು ಕೇಂದ್ರದ ಏಜೆಂಟರಲ್ಲ ಎನ್ನುವುದನ್ನು ತೋರಿಸಬೇಕಿದೆ’ ಎಂದು ಹೇಳಿದರು.</p>.<div><blockquote>ದಕ್ಷಿಣ ರಾಜ್ಯಗಳಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ, ಒಕ್ಕೂಟ ವ್ಯವಸ್ಥೆ ಮೇಲಿನ ಗದಾಪ್ರಹಾರದ ವಿರುದ್ಧ ಸಮಾಜವಾದಿಗಳ ಸಮ್ಮೇಳನ ಧ್ವನಿ ಎತ್ತಿದೆ. </blockquote><span class="attribution">-ಬಿ.ಆರ್.ಪಾಟೀಲ, ಉಪಾಧ್ಯಕ್ಷ, ಕರ್ನಾಟಕ ರಾಜ್ಯ ನೀತಿ ಹಾಗೂ ಯೋಜನಾ ಆಯೋಗ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಕೇಂದ್ರ ಸರ್ಕಾರದ ದಬ್ಬಾಳಿಕೆ ವಿರುದ್ಧ ಹೋರಾಟ ರೂಪಿಸಲು ದಕ್ಷಿಣದ ರಾಜ್ಯಗಳ ಮುಖ್ಯಮಂತ್ರಿಗಳ ಸಮ್ಮೇಳನ ಆಯೋಜಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.</p><p>ಸಮಾಜವಾದಿ ಅಧ್ಯಯನ ಕೇಂದ್ರ, ಸಮಾಜವಾದಿ ಸಂಗಮವು ಮಂಗಳವಾರ ಆಯೋಜಿಸಿದ್ದ ದಕ್ಷಿಣ ಭಾರತ ಸಮಾಜವಾದಿಗಳ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.</p><p>‘ಆರ್ಥಿಕ ನಿಯಂತ್ರಣ, ರಾಜಕೀಯ ಒತ್ತಡ, ಸಾಂವಿಧಾನಿಕ ಹಕ್ಕುಗಳ ದುರುಪಯೋಗದ ಮೂಲಕ ಕೇಂದ್ರ ಸರ್ಕಾರವು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತಿದೆ’ ಎಂದು ಟೀಕಿಸಿದರು.</p><p>‘ಭಾರತದಲ್ಲಿ ಪ್ರಜಾಪ್ರಭುತ್ವದ ಹಾದಿಯು ಈಗ ಮತ್ತೆ ನಿರಂಕುಶತೆಯ ಕಡೆಗೆ ಹೊರಳುತ್ತಿರುವುದನ್ನು ಗಮನಿಸುತ್ತಿದ್ದೇವೆ. ಜನ ಸೇವೆ ಮಾಡಲು ರಾಜ್ಯಗಳಿಗೆ ಅಧಿಕಾರ ಬೇಕು ಎನ್ನುವುದರ ಬದಲಾಗಿ, ರಾಜ್ಯಗಳ ಅಧಿಕಾರ ಕಸಿದು ಕೇಂದ್ರದ ಏಜೆಂಟ ರನ್ನಾಗಿ ಮಾಡಿಕೊಳ್ಳುವ ಪ್ರಯತ್ನ ನಡೆದಿದೆ’ ಎಂದು ದೂರಿದರು.</p><p><strong>ಕಾಂಗ್ರೆಸ್ನಿಂದ ಬಲ:</strong> ‘ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹಣಕಾಸು ಆಯೋಗಕ್ಕೆ ಆರ್ಥಿಕ ನ್ಯಾಯ ನೀಡುವ ಸ್ವತಂತ್ರ ಮಧ್ಯವರ್ತಿ ಸಂಸ್ಥೆಯಂತೆಯೇ ಬಲ ತುಂಬಿದೆ. ಯುಪಿಎ ಸರ್ಕಾರ ಉದ್ಯೋಗ, ಶಿಕ್ಷಣ, ಆಹಾರ, ಮಾಹಿತಿ ಹಕ್ಕು ನೀಡುವ ರೂಪದಲ್ಲಿ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಿತ್ತು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಈಗ ಎಲ್ಲ ಆಶಯಗಳನ್ನು ಬುಡಮೇಲು ಮಾಡಿದ್ದು, ನಿಯಂತ್ರಣ ಹಾಗೂ ಪಾಲುದಾರಿಕೆ ಎನ್ನುವುದನ್ನು ದಂಡನೆ ಎನ್ನುವ ಹಂತಕ್ಕೆ ತಂದಿಟ್ಟಿದೆ’ ಎಂದು ಆಪಾದಿಸಿದರು.</p><p>‘ಕರ್ನಾಟಕದ ಆಡಳಿತಕ್ಕೆ ಸಮಾಜವಾದದ ಅಡಿಪಾಯವನ್ನು ಹಲವು ನಾಯಕರು ಹಾಕಿಕೊಟ್ಟಿದ್ದಾರೆ. ಅದು ಈಗಲೂ ದಾರಿದೀಪವಾಗಿ ಕೆಲಸ ಮಾಡುತ್ತಿದೆ. ಸಮಸಮಾಜ ನಿರ್ಮಾಣವೇ ಸಮಾಜವಾದದ ಮೂಲ ಆಶಯವಾಗಿದ್ದರೂ ಈಗ ಇದನ್ನು ಪಟ್ಟಭದ್ರ ಹಿತಾಸಕ್ತಿಗಳು ದುರ್ಬಲಗೊಳಿಸುತ್ತಿವೆ. ಏಕಸ್ವಾಮ್ಯ ವನ್ನು ತಪ್ಪಿಸುವುದೇ ಸಮಾಜವಾದದ ಗುರಿ ಆಗಬೇಕು’ ಎಂದು ಹೇಳಿದರು.</p><p><strong>ಅನುದಾನ ಬಿಡುಗಡೆ ಮಾಡಿ:</strong> ‘ಕೇಂದ್ರದ ತೆರಿಗೆ ಪಾಲಿನಲ್ಲಿ ಕನಿಷ್ಠ ಶೇ 50ರಷ್ಟನ್ನಾದರೂ ರಾಜ್ಯಗಳಿಗೆ ಮೀಸಲಿಡಬೇಕು. ಇದಕ್ಕೆ 1971ರ ಜನಗಣತಿ ಮಾನದಂಡವಾಗಬೇಕು. ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯಲ್ಲಿ ದಕ್ಷಿಣ ರಾಜ್ಯಗಳ ಹಿತವನ್ನು ಕಾಪಾಡಬೇಕು. ಅಂತರರಾಜ್ಯ ಮಂಡಳಿ ಯನ್ನು ಪುನರ್ ರಚಿಸಬೇಕು. ಹಣಕಾಸು ಆಯೋಗದ ಅನುದಾನ ಗಳನ್ನು ವಿಳಂಬ ಮಾಡದೇ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದರು.</p><p>ರಾಜ್ಯಸಭೆಯ ಮಾಜಿ ಸದಸ್ಯ ಎಲ್.ಹನುಮಂತಯ್ಯ, ಕೇರಳದ ಮಾಜಿ ಹಣಕಾಸು ಸಚಿವ ಐಸಾಕ್ ಥಾಮಸ್, ತೆಲಂಗಾಣ ಶಾಸಕ ಯಾದವ ರೆಡ್ಡಿ, ಲೋಕಸಭೆಯ ಮಾಜಿ ಸದಸ್ಯ ಥಂಪನ್ ಥಾಮಸ್. ಗೀತಾ ರಾಮಕಿಶನ್ ಉಪಸ್ಥಿತರಿದ್ದರು.</p>.<h2>ಕೇಂದ್ರದ ವಿರುದ್ಧ ಸಿ.ಎಂ ಕಿಡಿ</h2><p>‘ಪ್ರತಿ ವರ್ಷ ಕೇಂದ್ರ ಸರ್ಕಾರಕ್ಕೆ ₹5 ಲಕ್ಷ ಕೋಟಿಯನ್ನು ತೆರಿಗೆ ಹಾಗೂ ವಿವಿಧ ರೂಪದಲ್ಲಿ ನೀಡುತ್ತಿದ್ದೇವೆ. ದೇಶದ ಜನಸಂಖ್ಯೆಯ ಶೇ 5ರಷ್ಟಿದ್ದರೂ ಜಿಡಿಪಿಗೆ ನಮ್ಮ ಕೊಡುಗೆ ಶೇ 8.4ರಷ್ಟಿದೆ. ಅಲ್ಲದೇ ಜಿಎಸ್ಟಿಗೆ ಅತಿ ಹೆಚ್ಚು ಕೊಡುಗೆ ನೀಡುತ್ತಿದ್ದೇವೆ. ದೆಹಲಿಯಿಂದ ಕರ್ನಾಟಕಕ್ಕೆ ಬರೀ 13 ಪೈಸೆ ಮಾತ್ರ ಹಿಂದಿರುಗಿ ಬರುತ್ತಿದೆ.ಒಕ್ಕೂಟ ವ್ಯವಸ್ಥೆ ಎಂದರೆ ಇದೇನಾ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.</p><p>ಯುಪಿಎ ಸರ್ಕಾರವು ಕರ್ನಾಟಕದ ಕೊಡುಗೆ ಗುರುತಿಸಿ 14ನೇ ಹಣಕಾಸು ಆಯೋಗದಡಿ ಶೇ 4.74ರಷ್ಟು ಪಾಲು ಮೀಸಲಿಟ್ಟಿತ್ತು. ಬಿಜೆಪಿ ಸರ್ಕಾರವು 15ನೇ ಹಣಕಾಸು ಆಯೋಗದಡಿ ಇದನ್ನು ಶೇ 3.64ಕ್ಕೆ ಇಳಿಸಿದ್ದು, ಇದರಿಂದ ₹1.25 ಲಕ್ಷ ಕೋಟಿ ದರೋಡೆ ಮಾಡಿದಂತಾಗಿದೆ ಎಂದು ದೂರಿದರು.</p>.<h2>‘ಸಾಂವಿಧಾನಿಕ ಬಿಕ್ಕಟ್ಟು ಬಗೆಹರಿಸಿ’</h2><p>‘ಚುನಾಯಿತ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ರಾಜಭವನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಒಕ್ಕೂಟ ವ್ಯವಸ್ಥೆ ಹಾಗೂ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಸಾಂವಿಧಾನಿಕ ಬಿಕ್ಕಟ್ಟು ಬಗೆಹರಿಸಬೇಕಿದೆ’ ಎಂದು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಸುದರ್ಶನ್ ರೆಡ್ಡಿ ಸಲಹೆ ನೀಡಿದರು.</p><p>ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ನರೇಗಾ ಯೋಜನೆಯಲ್ಲಿ ಗಾಂಧಿ ಹೆಸರು ಬದಲಿಸಿ ರಾಮನ ಹೆಸರಿಡುವ ಪ್ರಯತ್ನ, ಅನುದಾನ ಕಡಿತ, ತೆರಿಗೆ ಹಂಚಿಕೆಯಲ್ಲಿನ ಅಸಮಾನತೆ ರಾಜ್ಯಗಳನ್ನೇ ಶಕ್ತಿಹೀನವಾಗಿಸುತ್ತಿದೆ. ರಾಜ್ಯ ಸರ್ಕಾರಗಳು ಕೇಂದ್ರದ ಏಜೆಂಟರಲ್ಲ ಎನ್ನುವುದನ್ನು ತೋರಿಸಬೇಕಿದೆ’ ಎಂದು ಹೇಳಿದರು.</p>.<div><blockquote>ದಕ್ಷಿಣ ರಾಜ್ಯಗಳಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ, ಒಕ್ಕೂಟ ವ್ಯವಸ್ಥೆ ಮೇಲಿನ ಗದಾಪ್ರಹಾರದ ವಿರುದ್ಧ ಸಮಾಜವಾದಿಗಳ ಸಮ್ಮೇಳನ ಧ್ವನಿ ಎತ್ತಿದೆ. </blockquote><span class="attribution">-ಬಿ.ಆರ್.ಪಾಟೀಲ, ಉಪಾಧ್ಯಕ್ಷ, ಕರ್ನಾಟಕ ರಾಜ್ಯ ನೀತಿ ಹಾಗೂ ಯೋಜನಾ ಆಯೋಗ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>