ದಾವಣಗೆರೆ: ‘ಸೆಗಣಿ ತಿಂದು ಮುಂಬೈಗೆ ಹೋಗಿದ್ದಾರೆ. ಹಾಗಾಗಿ ಅವರು ವಾಪಸ್ ಬರುವುದಿಲ್ಲ. ಅವರೇನು ಸಾಮೂಹಿಕವಾಗಿ ಹೋಗಿಲ್ಲ. ಬಿಜೆಪಿಯವರೇ ಕರೆದುಕೊಂಡು ಹೋಗಿದ್ದಾರೆ’ ಎಂದು ಕಾಂಗ್ರೆಸ್ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಕಿಡಿಕಾರಿದರು.
‘ಎಲ್ಲರನ್ನೂ ತೃಪ್ತಿ ಪಡಿಸಲು ಸಾಧ್ಯವಿಲ್ಲ. 16 ಮಂದಿಗೂ ಮಂತ್ರಿಗಿರಿ ನೀಡಲು ಆಗುವುದಿಲ್ಲ. ಸೋಮವಾರ ಮುಖ್ಯಮಂತ್ರಿ ಕುಮಾರಸ್ವಾಮಿ ಮತಯಾಚಿಸಲಿದ್ದಾರೆ. ಅತೃಪ್ತರು ಬಂದರೆ ನಾವು ಗೆಲ್ಲುತ್ತೇವೆ; ಬಾರದಿದ್ದರೆ ಸೋಲುತ್ತೇವೆ’ ಎಂದು ತಿಳಿಸಿದರು.
‘ಶಾಸಕರು ಓಡಿ ಹೋಗುತ್ತಾರೆ ಎಂದು ಬಿಜೆಪಿ ಕೂಡಿ ಹಾಕಿದೆ. ಮುಂದೆ ಬಿಜೆಪಿ ಸರ್ಕಾರ ರಚನೆಯಾದರೆ ಬಹಳ ದಿನ ಉಳಿಯುವುದಿಲ್ಲ. ಕುದುರೆ ವ್ಯಾಪಾರ ಹೀಗೆಯೇ ಮುಂದುವರಿಯಲಿದೆ. ಈಗ ಬಿಜೆಪಿಯವರು ಕುದುರೆ ವ್ಯಾಪಾರ ಮಾಡಿದ್ದಾರೆ. ಮುಂದೆ ಇವರು ಮಾಡಲಿದ್ದಾರೆ’ ಎಂದು ಭವಿಷ್ಯ ನುಡಿದರು.
‘ಸರ್ಕಾರ ಉಳಿದರೆ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಹೇಳಿದರು.