ಮಹಿಳೆಯೊಬ್ಬರ ಮೃತದೇಹ ತೆಗೆದುಕೊಂಡು ಬಂದಿದ್ದ ಅಂಬ್ಯುಲೆನ್ಸ್ ಹಿರೇರಾಯಕುಂಪಿ ಬಳಿಯ ಸೇತುವೆ ದಾಟಿಕೊಂಡು ಯಾದಗಿರಿ ಜಿಲ್ಲೆಯ ಮಾಚನೂರು ಗ್ರಾಮಕ್ಕೆ ತಲುಪಬೇಕಿತ್ತು. ಆದರೆ, ಸೇತುವೆಯು ಜಲಾವೃತವಾಗಿದ್ದನ್ನು ನೋಡಿ ಮಾರ್ಗ ಕಾಣದೆ ಅಂಬ್ಯುಲೆನ್ಸ್ ನಿಂತುಕೊಂಡಿತ್ತು. ಸ್ನೇಹಿತರೊಂದಿಗೆ ಆಟವಾಡುತ್ತಿದ್ದ ವೆಂಕಟೇಶ ಕೂಡಲೇ ಸೇತುವೆ ಮಾರ್ಗದುದ್ದಕ್ಕೂ ನೀರಿನಲ್ಲಿ ನಡೆಯುತ್ತಾ ಹೋಗಿ, ಅಂಬ್ಯುಲೆನ್ಸ್ ಸಂಚರಿಸಿ ಮುಂದೆ ಹೋಗುವುದಕ್ಕೆ ನೆರವಾಗಿದ್ದ.