‘ನಾವೆಲ್ಲ ಆಹಾರ, ನೀರು ಸಿಗದೇ ಪರಿತಪಿಸುತ್ತಿದ್ದೇವೆ. ಮಹಿಳೆಯರು, ಮಕ್ಕಳು ಜೊತೆಗಿದ್ದಾರೆ. ಮಂಗಳವಾರದಿಂದ ವಿದ್ಯುತ್ ಕಡಿತಗೊಂಡಿದ್ದು, ಕತ್ತಲ್ಲಲ್ಲಿ ಕಾಲ ದೂಡುವಂತಾಗಿದೆ. ನಮ್ಮವರನ್ನು ಸಂಪರ್ಕಿಸಲು ಮೊಬೈಲ್ ಬ್ಯಾಟರಿ ಚಾರ್ಚ್ ಮಾಡಿಕೊಳ್ಳಲೂ ವಿದ್ಯುತ್ ಇಲ್ಲದಂತಾಗಿದೆ’ ಎಂದು ಗೋಪನಾಳ್ ಗ್ರಾಮದ ಶಿವಾನಂದ್ ಅಲ್ಲಿನ ಸ್ಥಿತಿಗತಿ ಕುರಿತು ವಿವರಿಸಿದರು.