<p><strong>ನವದೆಹಲಿ</strong>: ವಿಜಯಪುರ ಜಿಲ್ಲೆಯ ಜಲಗೇರಿ ಗ್ರಾಮದ ಅಮೋಘಸಿದ್ಧ ದೇವಸ್ಥಾನದಲ್ಲಿ ಆನುವಂಶೀಯ ಪೂಜಾರಿ ಹಕ್ಕುಗಳ ಕುರಿತಾದ ಶತಮಾನಗಳಷ್ಟು ಹಳೆಯದಾದ ವಿವಾದದಲ್ಲಿ ವಿಶೇಷ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. </p>.<p>ಪ್ರತಿವಾದಿಗಳು ಪೂಜೆ ಸಲ್ಲಿಸಲು ಮತ್ತು ದೇವಾಲಯದ ಆಚರಣೆಗಳನ್ನು ನಡೆಸಲು ಅರ್ಹರಾದ ಆನುವಂಶಿಕ ವಹಿವತ್ದಾರ ಪೂಜಾರಿಗಳು ಎಂಬ ವಾದವನ್ನು ಪುರಸ್ಕರಿಸಿದೆ.</p>.<p>ಮಾಮಟ್ಟಿ ಗುಡ್ಡದಲ್ಲಿರುವ ಸಂತ ಅಮೋಘಸಿದ್ದ ಸಮಾಧಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಪ್ರತಿವಾದಿಗಳ ಆನುವಂಶಿಕ ಹಕ್ಕುಗಳನ್ನು ಗುರುತಿಸಿರುವ ಕರ್ನಾಟಕ ಹೈಕೋರ್ಟ್ನ 2012ರ ಅಕ್ಟೋಬರ್ 4ರ ತೀರ್ಪನ್ನು ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಕೆ. ವಿನೋದ್ ಚಂದ್ರನ್ ಅವರ ಪೀಠವು ಎತ್ತಿ ಹಿಡಿದಿದೆ.</p>.<p>ಪೂಜಾರಿ ಹಕ್ಕುಗಳು ಮತ್ತು ಭಕ್ತರಿಂದ ಸಂಗ್ರಹವಾಗುವ ಕಾಣಿಕೆಗಳ ಬಗ್ಗೆ ಓಗೆಪ್ಪ ಹಾಗೂ ಸಾಹೇಬಗೌಡ ಕುಟುಂಬಗಳ ನಡುವೆ ಶತಮಾನದಿಂದ ವಿವಾದ ಇದೆ. 1901 ಡಿಕ್ರಿಯ ಆಧಾರದಲ್ಲಿ ದೇವರ ಪೂಜೆ ಮಾಡುವ ಹಕ್ಕು ಪ್ರತಿಪಾದಿಸಿದ್ದ ಓಗೆಪ್ಪ ಕುಟುಂಬದವರ ಮೇಲ್ಮನವಿ ವಜಾಗೊಳಿಸಿತು. </p>.<p>ಮೇಲ್ಮನವಿದಾರರು ಶತಮಾನದಷ್ಟು ಹಳೆಯದಾದ ಡಿಕ್ರಿಯನ್ನು ಅವಲಂಬಿಸಿದ್ದರೂ, ಅವರ ಹೆಸರುಗಳು ಕಂದಾಯ ದಾಖಲೆಗಳಲ್ಲಿ ಇಲ್ಲ ಎಂಬುದನ್ನು ಪೀಠ ಗಮನಿಸಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ವಿಜಯಪುರ ಜಿಲ್ಲೆಯ ಜಲಗೇರಿ ಗ್ರಾಮದ ಅಮೋಘಸಿದ್ಧ ದೇವಸ್ಥಾನದಲ್ಲಿ ಆನುವಂಶೀಯ ಪೂಜಾರಿ ಹಕ್ಕುಗಳ ಕುರಿತಾದ ಶತಮಾನಗಳಷ್ಟು ಹಳೆಯದಾದ ವಿವಾದದಲ್ಲಿ ವಿಶೇಷ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. </p>.<p>ಪ್ರತಿವಾದಿಗಳು ಪೂಜೆ ಸಲ್ಲಿಸಲು ಮತ್ತು ದೇವಾಲಯದ ಆಚರಣೆಗಳನ್ನು ನಡೆಸಲು ಅರ್ಹರಾದ ಆನುವಂಶಿಕ ವಹಿವತ್ದಾರ ಪೂಜಾರಿಗಳು ಎಂಬ ವಾದವನ್ನು ಪುರಸ್ಕರಿಸಿದೆ.</p>.<p>ಮಾಮಟ್ಟಿ ಗುಡ್ಡದಲ್ಲಿರುವ ಸಂತ ಅಮೋಘಸಿದ್ದ ಸಮಾಧಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಪ್ರತಿವಾದಿಗಳ ಆನುವಂಶಿಕ ಹಕ್ಕುಗಳನ್ನು ಗುರುತಿಸಿರುವ ಕರ್ನಾಟಕ ಹೈಕೋರ್ಟ್ನ 2012ರ ಅಕ್ಟೋಬರ್ 4ರ ತೀರ್ಪನ್ನು ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಕೆ. ವಿನೋದ್ ಚಂದ್ರನ್ ಅವರ ಪೀಠವು ಎತ್ತಿ ಹಿಡಿದಿದೆ.</p>.<p>ಪೂಜಾರಿ ಹಕ್ಕುಗಳು ಮತ್ತು ಭಕ್ತರಿಂದ ಸಂಗ್ರಹವಾಗುವ ಕಾಣಿಕೆಗಳ ಬಗ್ಗೆ ಓಗೆಪ್ಪ ಹಾಗೂ ಸಾಹೇಬಗೌಡ ಕುಟುಂಬಗಳ ನಡುವೆ ಶತಮಾನದಿಂದ ವಿವಾದ ಇದೆ. 1901 ಡಿಕ್ರಿಯ ಆಧಾರದಲ್ಲಿ ದೇವರ ಪೂಜೆ ಮಾಡುವ ಹಕ್ಕು ಪ್ರತಿಪಾದಿಸಿದ್ದ ಓಗೆಪ್ಪ ಕುಟುಂಬದವರ ಮೇಲ್ಮನವಿ ವಜಾಗೊಳಿಸಿತು. </p>.<p>ಮೇಲ್ಮನವಿದಾರರು ಶತಮಾನದಷ್ಟು ಹಳೆಯದಾದ ಡಿಕ್ರಿಯನ್ನು ಅವಲಂಬಿಸಿದ್ದರೂ, ಅವರ ಹೆಸರುಗಳು ಕಂದಾಯ ದಾಖಲೆಗಳಲ್ಲಿ ಇಲ್ಲ ಎಂಬುದನ್ನು ಪೀಠ ಗಮನಿಸಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>