ರಾಜ್ಯ ಸರ್ಕಾರ ವಿಕೋಪ ಪರಿಹಾರ ನಿಧಿಯಿಂದ₹ 500 ಕೋಟಿ ಅನುದಾನ ಒದಗಿಸಿದೆ. ಶಿಕ್ಷಣ ಇಲಾಖೆ ಈ ಸಾಲಿಗೆ ಒದಗಿಸಿರುವ ಹಾಗೂ ಈಗಾಗಲೇ ಜಿಲ್ಲಾ ಪಂಚಾಯತ್ಗಳ ಖಾತೆಗಳಲ್ಲಿ ಇರುವ ₹250 ಕೋಟಿ ಅನುದಾನ ಸೇರಿ ಒಟ್ಟು ₹750 ಕೋಟಿಯನ್ನು ಈ ಕಾರ್ಯಕ್ಕೆ ಬಳಕೆ ಮಾಡಿ. ಶಾಲಾ ಕೊಠಡಿಗಳ, ಅಂಗನವಾಡಿಗಳ ನಿರ್ಮಾಣಕ್ಕೆ ಪ್ರಥಮ ಆದ್ಯತೆ ನೀಡಬೇಕು ಎಂದು ಸೂಚಿಸಿದರು. ಇದೇ 22 ಮತ್ತು 23 ರಂದು ಬೆಳಗಾವಿ, ಚಿಕ್ಕೋಡಿ, ವಿಜಯಪುರ ಜಿಲ್ಲೆಗಳಿಗೆ ಭೇಟಿ ನೀಡಿ ಅಲ್ಲಿನ ಶಾಲೆಗಳನ್ನು ವೀಕ್ಷಿಸುವುದಾಗಿಯೂ ಅವರು ತಿಳಿಸಿದರು.