<p><strong>ಬೆಂಗಳೂರು</strong>: ಮೈಸೂರ್ ಸ್ಯಾಂಡಲ್ ಸೋಪ್ ರಾಯಭಾರಿಯನ್ನಾಗಿ ಕನ್ನಡ ನಟಿ ಬದಲು ತೆಲುಗು ನಟಿ ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಿದ್ದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.</p><p>‘ಇವತ್ತಿನಿಂದ ಮೈಸೂರು ಸ್ಯಾಂಡಲ್ ಸೋಪ್ ಅನ್ನು ಖರೀದಿಸುವುದನ್ನು ನಿಲ್ಲಿಸುತ್ತೇನೆ. ನಮ್ಮ ತೆರಿಗೆ ಹಣ ಹೀಗೆ ಹಾಳು ಮಾಡಲು ನಾವು ಬಿಡುವುದಿಲ್ಲ’ ಎಂದು ನೆಟ್ಟಿಗರೊಬ್ಬರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.</p><p>ತಮನ್ನಾ ಭಾಟಿಯ ಅವರನ್ನು ಮೈಸೂರು ಸ್ಯಾಂಡಲ್ ಸೋಪಿನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಲಾಗಿದೆ. ಆ ಸ್ಥಾನಕ್ಕೆ ಕನ್ನಡ ನಟಿಯರನ್ನು ನೇಮಕ ಮಾಡಿಲ್ಲ ಏಕೆ? ನಮ್ಮ ರಾಜ್ಯದ ನಟಿ ರುಕ್ಮಿಣಿ ವಸಂತ್ ಅವರನ್ನು ನೇಮಕ ಮಾಡಬಾರದೇಕೆ’ ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ.</p>. <p>‘ಕರ್ನಾಟಕದ ಜನಸಂಖ್ಯೆ 6.5 ಕೋಟಿ ಇದೆ ಎಂದುಕೊಂಡರೂ ಅದರಲ್ಲಿ 2 ಕೋಟಿ ಮಹಿಳೆಯರಿದ್ದಾರೆ. ಆದರೂ ಮೈಸೂರು ಸ್ಯಾಂಡಲ್ ಸೋಪಿಗೆ ಬ್ರಾಂಡ್ ಅಂಬಾಸಿಡರ್ ಆಗಲು ಕರ್ನಾಟದಿಂದ ಒಬ್ಬ ಮಹಿಳಾ ಮುಖ ಸಿಗಲಿಲ್ಲ. ಅದಕ್ಕೂ ಹಿಂದಿ ನಟಿಯೇ ಬೇಕಾಯಿತು’ ಎಂದು ಲೇವಡಿ ಮಾಡಿದ್ದಾರೆ.</p>. <p>‘ನಂದಿನಿ, ಮೈಸೂರು ಸ್ಯಾಂಡಲ್ ಸೋಪ್ ಮತ್ತು ಮೈಸೂರು ಸಿಲ್ಕ್ನಂತಹ ಉತ್ಪನ್ನಗಳಿಗೆ ಜನಪ್ರಿಯ ಮುಖದ ಅಗತ್ಯವಿಲ್ಲ. ಅವಷ್ಟಕ್ಕೆ ಅವು ಮಾರಟವಾಗುತ್ತವೆ. ನೀವು ಮಾಡಬೇಕಾಗಿರುವುದು ಗುಣಮಟ್ಟ ಕಾಪಾಡಿಕೊಳ್ಳುವುದು, ಪೂರೈಕೆ ಸರಪಳಿಯನ್ನು ಅತ್ಯುತ್ತಮವಾಗಿಸುವುದು ಮತ್ತು ಭ್ರಷ್ಟಾಚಾರವನ್ನು ತಡೆಯುವುದು’ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.</p>. <p>ಏನತ್ಮಧ್ಯೆ, ತಮನ್ನಾ ಅವರನ್ನು ರಾಯಭಾರಿಯನ್ನಾಗಿ ನೇಮಿಸಿರುವ ಸರ್ಕಾರದ ನಿರ್ಧಾರವನ್ನು ಬೆಂಬಲಿಸಿರುವ ಕೆಲವರು, 'ಕರ್ನಾಟಕದ ಹೊರಗೆ ಮೈಸೂರು ಸ್ಯಾಂಡಲ್ ಮಾರಾಟ ಮಾಡಲು ನಮಗೆ ಜನಪ್ರಿಯ ಮುಖ ಬೇಕಿದೆ. ಅದಕ್ಕೆ ತಮನ್ನಾ ಅವರನ್ನು ಆಯ್ಕೆ ಮಾಡಿರುವುದು ಸರಿ' ಎಂದು ಹೇಳಿದ್ದಾರೆ.</p>.ಮೈಸೂರು ಸ್ಯಾಂಡಲ್ ಸೋಪ್: ‘ಮಿಲ್ಕಿ ಬ್ಯೂಟಿ' ತಮನ್ನಾ ರಾಯಭಾರಿ; ₹6 ಕೋಟಿ ಸಂಭಾವನೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಮೈಸೂರ್ ಸ್ಯಾಂಡಲ್ ಸೋಪ್ ರಾಯಭಾರಿಯನ್ನಾಗಿ ಕನ್ನಡ ನಟಿ ಬದಲು ತೆಲುಗು ನಟಿ ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಿದ್ದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.</p><p>‘ಇವತ್ತಿನಿಂದ ಮೈಸೂರು ಸ್ಯಾಂಡಲ್ ಸೋಪ್ ಅನ್ನು ಖರೀದಿಸುವುದನ್ನು ನಿಲ್ಲಿಸುತ್ತೇನೆ. ನಮ್ಮ ತೆರಿಗೆ ಹಣ ಹೀಗೆ ಹಾಳು ಮಾಡಲು ನಾವು ಬಿಡುವುದಿಲ್ಲ’ ಎಂದು ನೆಟ್ಟಿಗರೊಬ್ಬರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.</p><p>ತಮನ್ನಾ ಭಾಟಿಯ ಅವರನ್ನು ಮೈಸೂರು ಸ್ಯಾಂಡಲ್ ಸೋಪಿನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಲಾಗಿದೆ. ಆ ಸ್ಥಾನಕ್ಕೆ ಕನ್ನಡ ನಟಿಯರನ್ನು ನೇಮಕ ಮಾಡಿಲ್ಲ ಏಕೆ? ನಮ್ಮ ರಾಜ್ಯದ ನಟಿ ರುಕ್ಮಿಣಿ ವಸಂತ್ ಅವರನ್ನು ನೇಮಕ ಮಾಡಬಾರದೇಕೆ’ ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ.</p>. <p>‘ಕರ್ನಾಟಕದ ಜನಸಂಖ್ಯೆ 6.5 ಕೋಟಿ ಇದೆ ಎಂದುಕೊಂಡರೂ ಅದರಲ್ಲಿ 2 ಕೋಟಿ ಮಹಿಳೆಯರಿದ್ದಾರೆ. ಆದರೂ ಮೈಸೂರು ಸ್ಯಾಂಡಲ್ ಸೋಪಿಗೆ ಬ್ರಾಂಡ್ ಅಂಬಾಸಿಡರ್ ಆಗಲು ಕರ್ನಾಟದಿಂದ ಒಬ್ಬ ಮಹಿಳಾ ಮುಖ ಸಿಗಲಿಲ್ಲ. ಅದಕ್ಕೂ ಹಿಂದಿ ನಟಿಯೇ ಬೇಕಾಯಿತು’ ಎಂದು ಲೇವಡಿ ಮಾಡಿದ್ದಾರೆ.</p>. <p>‘ನಂದಿನಿ, ಮೈಸೂರು ಸ್ಯಾಂಡಲ್ ಸೋಪ್ ಮತ್ತು ಮೈಸೂರು ಸಿಲ್ಕ್ನಂತಹ ಉತ್ಪನ್ನಗಳಿಗೆ ಜನಪ್ರಿಯ ಮುಖದ ಅಗತ್ಯವಿಲ್ಲ. ಅವಷ್ಟಕ್ಕೆ ಅವು ಮಾರಟವಾಗುತ್ತವೆ. ನೀವು ಮಾಡಬೇಕಾಗಿರುವುದು ಗುಣಮಟ್ಟ ಕಾಪಾಡಿಕೊಳ್ಳುವುದು, ಪೂರೈಕೆ ಸರಪಳಿಯನ್ನು ಅತ್ಯುತ್ತಮವಾಗಿಸುವುದು ಮತ್ತು ಭ್ರಷ್ಟಾಚಾರವನ್ನು ತಡೆಯುವುದು’ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.</p>. <p>ಏನತ್ಮಧ್ಯೆ, ತಮನ್ನಾ ಅವರನ್ನು ರಾಯಭಾರಿಯನ್ನಾಗಿ ನೇಮಿಸಿರುವ ಸರ್ಕಾರದ ನಿರ್ಧಾರವನ್ನು ಬೆಂಬಲಿಸಿರುವ ಕೆಲವರು, 'ಕರ್ನಾಟಕದ ಹೊರಗೆ ಮೈಸೂರು ಸ್ಯಾಂಡಲ್ ಮಾರಾಟ ಮಾಡಲು ನಮಗೆ ಜನಪ್ರಿಯ ಮುಖ ಬೇಕಿದೆ. ಅದಕ್ಕೆ ತಮನ್ನಾ ಅವರನ್ನು ಆಯ್ಕೆ ಮಾಡಿರುವುದು ಸರಿ' ಎಂದು ಹೇಳಿದ್ದಾರೆ.</p>.ಮೈಸೂರು ಸ್ಯಾಂಡಲ್ ಸೋಪ್: ‘ಮಿಲ್ಕಿ ಬ್ಯೂಟಿ' ತಮನ್ನಾ ರಾಯಭಾರಿ; ₹6 ಕೋಟಿ ಸಂಭಾವನೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>