ತೇವಾಂಶದಿಂದ ಕೂಡಿದ ಚಳಿಯ ವಾತಾವರಣ ಹಲವು ಬೆಳೆಗಳಿಗೆ ಅದರಲ್ಲೂ ತೊಗರಿ, ಜೋಳ, ಕಡಲೆಗೆ ಅತ್ಯಗತ್ಯ. ಆದರೆ, ವಾತಾವರಣವೇ ಪ್ರತಿಕೂಲವಾಗಿರುವುದರಿಂದ ಬೆಳೆ ರೈತರ ಕೈಗೆ ಸಿಗುವುದು ಕಷ್ಟವಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿ ಪ್ರಭುಲಿಂಗಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.