ಪಠ್ಯಪುಸ್ತಕ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರು, ‘ನಮಗಿಂದು ಬೇಕಾಗಿರುವುದು ಬ್ರಾಹ್ಮಣವಾದವೂ ಅಲ್ಲ, ಬ್ರಾಹ್ಮಣ ದ್ವೇಷವೂ ಅಲ್ಲ. ದಲಿತ ಮತ್ತು ಮಾನವ ಪ್ರೀತಿ ಬೇಕಾಗಿದೆ. ಜಾತೀಯತೆ, ಅಸ್ಪೃಶ್ಯತೆ, ಮತಾಂಧತೆ, ಕೋಮುವಾದ, ಭಯೋತ್ಪಾದನೆ ಮೊದಲಾದವುಗಳನ್ನು ಮೆಟ್ಟಿ ನಿಂತು, ಸಮಾಜವನ್ನು ಸಹೃದಯಿಗೊಳಿಸುವ, ಮಕ್ಕಳನ್ನು ಜ್ಞಾನಮಯಿ ಮತ್ತುತೇಜೋಮಯಿಗಳನ್ನಾಗಿಸುವ ಪಠ್ಯ ಅಗತ್ಯ. ರಾಷ್ಟವನ್ನು ಮತ್ತು ರಾಷ್ಟ್ರಭಕ್ತಿಯನ್ನು ಬಲಗೊಳಿಸುವ ಶಕ್ತಿಚೈತನ್ಯದ ಪಠ್ಯ ಬೇಕಾಗಿದೆ. ಈಗಿರುವ ಪಠ್ಯ ಪುಸ್ತಕಗಳಲ್ಲಿ ಅದು ಇದೆಯೋ ಇಲ್ಲವೋ ಎಂಬುದರ ಬಗ್ಗೆ ವಸ್ತುನಿಷ್ಠ ಚರ್ಚೆಯಾಗಲಿ’ ಎಂದು ಹೇಳಿದ್ದಾರೆ.