ವಿಜಯಪುರ: ಇಂಡಿ ತಾಲ್ಲೂಕಿನ ಭತಗುಣಕಿ ಗ್ರಾಮದ ಏಳು ವರ್ಷದ ಬಾಲಕಿ ಶ್ರೇಯಾ ದುದಗಿ ತಾನು ಕೂಡಿಟ್ಟಿದ್ದ ಹಣವನ್ನು ಕೋವಿಡ್ 19 ಪಿಎಂ ಕೇರ್ಸ್ಗೆ ನೀಡುವ ಮೂಲಕ ಗಮನ ಸೆಳೆದಿದ್ದಾಳೆ.
ತನ್ನ ತಂದೆ, ತಾಯಿ ಸೇರಿದಂತೆ ಅವರಿವರು ನೀಡಿದ್ದ ಚಿಲ್ಲರೆ ಹಣವನ್ನು ಸಂಗ್ರಹಿಸಿಟ್ಟಿದ್ದ ಶ್ರೇಯಾ ಕೊರೊನಾ ಸೋಂಕಿನಿಂದ ಸಂಕಷ್ಟರಾದವರಿಗೆ ನೀಡಬೇಕು ಎಂದು ತನ್ನ ಪಾಲಕರಿಗೆ ತಿಳಿಸಿದ್ದಾಳೆ.
ಒಂದು ವರ್ಷದಿಂದ ಅವಳು ಕೂಡಿಟ್ಟಿದ್ದ ₹ 1435 ಅನ್ನು ಮಂಗಳವಾರ ಪಿಎಂ ಕೇರ್ಸ್ಗೆ ಪೋಷಕರ ಸಮ್ಮುಖದಲ್ಲಿ ಭತಗುಣಕಿಯ ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕ್ ನಿಂದ ಹಣ ಜಮೆ ಮಾಡಿದಳು.
ಬಾಲಕಿಯ ಕಾಳಜಿ ಮತ್ತು ನಿಲುವಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.