<p><strong>ಜಗಳೂರು:</strong> ತಾಲ್ಲೂಕಿನ ಹಾಲೇಹಳ್ಳಿ, ಹುಚ್ಚವ್ವನಹಳ್ಳಿ, ಕೊರಚರಹಟ್ಟಿ ಆಸುಪಾಸಿನ ರೈತರು ತೈವಾನ್ ಕೊಹಿನೂರ್ ತಳಿಯ ಕರಬೂಜ ಬೆಳೆದಿದ್ದು, ದೆಹಲಿ, ಮುಂಬೈ ಮಾರುಕಟ್ಟೆಗೆ ಸಾಗಿಸಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.</p>.<p>ತಾಲ್ಲೂಕಿನ ಹಾಲೇಹಳ್ಳಿ ಗ್ರಾಮದ ಅಮರೇಂದ್ರಪ್ಪ ಎರಡೂವರೆ ಎಕರೆಯಲ್ಲಿ ಹಾಗೂ ಕೇಶವರೆಡ್ಡಿ ಮೂರೂವರೆ ಎಕರೆಯಲ್ಲಿ ಈ ತಳಿಯ ಕರಬೂಜ ಬೆಳೆದಿದ್ದಾರೆ.</p>.<p>ಪೌಜಾ ಮತ್ತು ಸನ್ ರೈಸ್ ತಳಿಯ ಕರಬೂಜ ಬೀಜಕ್ಕೆ ಪ್ರತಿ ಕೆ.ಜಿಗೆ ಕೇವಲ ₹ 5 ಸಾವಿರದಿಂದ ₹ 6 ಸಾವಿರ ದರವಿದೆ. ಆದರೆ ತೈವಾನ್ ಕೊಹಿನೂರ್ ತಳಿಯ ಬೀಜಕ್ಕೇ ಪ್ರತಿ ಕೆ.ಜಿಗೆ ₹ 80 ಸಾವಿರ ದರ ಇದೆ.</p>.<p>‘ಸುಮಾರು ಮೂರು ಲಕ್ಷ ವೆಚ್ಚವಾಗಿದೆ. 40 ಟನ್ ಇಳುವರಿ ನಿರೀಕ್ಷೆ ಇದ್ದು, ಮುಂಬೈ ಮಾರುಕಟ್ಟೆಯಲ್ಲಿ ಕನಿಷ್ಠ ₹ 12 ಲಕ್ಷ ಆದಾಯದ ನಿರೀಕ್ಷೆ ಇತ್ತು’ ಎಂದು ಅಮರೇಂದ್ರಪ್ಪ ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡರು.</p>.<p>‘ಐದು ಎಕೆರೆಯಲ್ಲಿ ಬೆಳೆದಿದ್ದ ತೈವಾನ್ ಪಪ್ಪಾಯಿ ಖರೀದಿಸುವವರಿಲ್ಲದೇ ತಿಂಗಳ ಹಿಂದಷ್ಟೇ ಲಕ್ಷಗಟ್ಟಲೆ ನಷ್ಟವಾಗಿದೆ. ಡಿಡಿಸಿಸಿ ಬ್ಯಾಂಕ್ನಲ್ಲಿ ₹ 6 ಲಕ್ಷ ಸಾಲ ಮಾಡಿ ಕರಬೂಜ ಹಾಗೂ ಪಪ್ಪಾಯಿ ಬೆಳೆದಿದ್ದೆ’ ಎಂದು ಹೇಳಿದರು.</p>.<p>‘ಮುಂಬೈಗೆ ಲಾರಿಯಲ್ಲಿ ಸಾಗಿಸಲು ಪಾಸ್ ನೀಡುವ ಕುರಿತು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಖಚಿತವಾಗಿ ಹೇಳುತ್ತಿಲ್ಲ’ ಎಂದು ಕರಬೂಜ ಬೆಳೆಗಾರ ಕೇಶವರೆಡ್ಡಿ ಹೇಳಿದರು.</p>.<p>**</p>.<p>ಅಮರೇಂದ್ರಪ್ಪ ಅವರ ಹೊಲಕ್ಕೆ ಭೇಟಿ ನೀಡಿದ್ದೇನೆ. ಬೆಳೆಯನ್ನು ಮುಂಬೈಗೆ ಸಾಗಿಸಲು ಜಿಲ್ಲಾಡಳಿತದಿಂದ ಪಾಸ್ ನೀಡಲಾಗುವುದು.<br /><em><strong>-ವೆಂಕಟೇಶ್, ಸಹಾಯಕ ನಿರ್ದೇಶಕ, ತೋಟಗಾರಿಕಾ ಇಲಾಖೆ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಗಳೂರು:</strong> ತಾಲ್ಲೂಕಿನ ಹಾಲೇಹಳ್ಳಿ, ಹುಚ್ಚವ್ವನಹಳ್ಳಿ, ಕೊರಚರಹಟ್ಟಿ ಆಸುಪಾಸಿನ ರೈತರು ತೈವಾನ್ ಕೊಹಿನೂರ್ ತಳಿಯ ಕರಬೂಜ ಬೆಳೆದಿದ್ದು, ದೆಹಲಿ, ಮುಂಬೈ ಮಾರುಕಟ್ಟೆಗೆ ಸಾಗಿಸಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.</p>.<p>ತಾಲ್ಲೂಕಿನ ಹಾಲೇಹಳ್ಳಿ ಗ್ರಾಮದ ಅಮರೇಂದ್ರಪ್ಪ ಎರಡೂವರೆ ಎಕರೆಯಲ್ಲಿ ಹಾಗೂ ಕೇಶವರೆಡ್ಡಿ ಮೂರೂವರೆ ಎಕರೆಯಲ್ಲಿ ಈ ತಳಿಯ ಕರಬೂಜ ಬೆಳೆದಿದ್ದಾರೆ.</p>.<p>ಪೌಜಾ ಮತ್ತು ಸನ್ ರೈಸ್ ತಳಿಯ ಕರಬೂಜ ಬೀಜಕ್ಕೆ ಪ್ರತಿ ಕೆ.ಜಿಗೆ ಕೇವಲ ₹ 5 ಸಾವಿರದಿಂದ ₹ 6 ಸಾವಿರ ದರವಿದೆ. ಆದರೆ ತೈವಾನ್ ಕೊಹಿನೂರ್ ತಳಿಯ ಬೀಜಕ್ಕೇ ಪ್ರತಿ ಕೆ.ಜಿಗೆ ₹ 80 ಸಾವಿರ ದರ ಇದೆ.</p>.<p>‘ಸುಮಾರು ಮೂರು ಲಕ್ಷ ವೆಚ್ಚವಾಗಿದೆ. 40 ಟನ್ ಇಳುವರಿ ನಿರೀಕ್ಷೆ ಇದ್ದು, ಮುಂಬೈ ಮಾರುಕಟ್ಟೆಯಲ್ಲಿ ಕನಿಷ್ಠ ₹ 12 ಲಕ್ಷ ಆದಾಯದ ನಿರೀಕ್ಷೆ ಇತ್ತು’ ಎಂದು ಅಮರೇಂದ್ರಪ್ಪ ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡರು.</p>.<p>‘ಐದು ಎಕೆರೆಯಲ್ಲಿ ಬೆಳೆದಿದ್ದ ತೈವಾನ್ ಪಪ್ಪಾಯಿ ಖರೀದಿಸುವವರಿಲ್ಲದೇ ತಿಂಗಳ ಹಿಂದಷ್ಟೇ ಲಕ್ಷಗಟ್ಟಲೆ ನಷ್ಟವಾಗಿದೆ. ಡಿಡಿಸಿಸಿ ಬ್ಯಾಂಕ್ನಲ್ಲಿ ₹ 6 ಲಕ್ಷ ಸಾಲ ಮಾಡಿ ಕರಬೂಜ ಹಾಗೂ ಪಪ್ಪಾಯಿ ಬೆಳೆದಿದ್ದೆ’ ಎಂದು ಹೇಳಿದರು.</p>.<p>‘ಮುಂಬೈಗೆ ಲಾರಿಯಲ್ಲಿ ಸಾಗಿಸಲು ಪಾಸ್ ನೀಡುವ ಕುರಿತು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಖಚಿತವಾಗಿ ಹೇಳುತ್ತಿಲ್ಲ’ ಎಂದು ಕರಬೂಜ ಬೆಳೆಗಾರ ಕೇಶವರೆಡ್ಡಿ ಹೇಳಿದರು.</p>.<p>**</p>.<p>ಅಮರೇಂದ್ರಪ್ಪ ಅವರ ಹೊಲಕ್ಕೆ ಭೇಟಿ ನೀಡಿದ್ದೇನೆ. ಬೆಳೆಯನ್ನು ಮುಂಬೈಗೆ ಸಾಗಿಸಲು ಜಿಲ್ಲಾಡಳಿತದಿಂದ ಪಾಸ್ ನೀಡಲಾಗುವುದು.<br /><em><strong>-ವೆಂಕಟೇಶ್, ಸಹಾಯಕ ನಿರ್ದೇಶಕ, ತೋಟಗಾರಿಕಾ ಇಲಾಖೆ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>