<p><strong>ಉಡುಪಿ:</strong> ಕೇರಳದ ಕೊಚ್ಚಿಮೂಲದ ನಾಲ್ವರು ಪ್ರವಾಸಿಗರು ಶನಿವಾರ ರಾತ್ರಿ ಪೂರ್ತಿ ಮಲ್ಪೆಯ ಸೇಂಟ್ ಮೇರಿಸ್ ಐಲ್ಯಾಂಡ್ನಲ್ಲಿ ಕಳೆದಿದ್ದಾರೆ. ಸಂಜೆ ದ್ವೀಪದಿಂದ ಪ್ರವಾಸಿಗರನ್ನು ತೀರಕ್ಕೆ ಕರೆತರುವ ಕೊನೆಯ ಬೋಟ್ ತಪ್ಪಿದ ಪರಿಣಾಮ ಪ್ರವಾಸಿಗರು ರಾತ್ರಿ ದ್ವೀಪದಲ್ಲಿಯೇ ಉಳಿಯಬೇಕಾಯಿತು.</p>.<p>ಭಾನುವಾರ ಬೆಳಿಗ್ಗೆ ಐಲ್ಯಾಂಡ್ಗೆ ಪ್ರವಾಸಿಗರನ್ನು ಕರೆದೊಯ್ದ ಬೋಟ್ ಸಿಬ್ಬಂದಿಗೆ ಅಲ್ಲಿದ್ದ ಕೇರಳ ಪ್ರವಾಸಿಗರು ಕಂಡಿದ್ದಾರೆ. ಬಳಿಕ ಅವರನ್ನು ತೀರಕ್ಕೆ ಕರೆತಂದು ಮಲ್ಪೆ ಠಾಣೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ವಿಚಾರಣೆ ನಡೆಸಿದ ಪೊಲೀಸರು ಪ್ರವಾಸಿಗರನ್ನು ಕೇರಳಕ್ಕೆ ಕಳುಹಿಸಿದ್ದಾರೆ.</p>.<p><strong>ಘಟನೆಯ ವಿವರ:</strong>ಜಸ್ಟಿನ್ (34), ಶೀಜಾ (33), ಜೋಶ್ (28) ಹಾಗೂ ಹರೀಶ್ (17) ನ.23ರಂದು ಮಧ್ಯಾಹ್ನ ಮಲ್ಪೆ ಬೀಚ್ನಿಂದ ಸೇಂಟ್ ಮೇರಿಸ್ ಐಲ್ಯಾಂಡ್ಗೆ ತೆರಳಿದ್ದರು. ದ್ವೀಪದಲ್ಲೆಲ್ಲ ಸುತ್ತಾಡಿದ ಬಳಿಕ ಸಮೀಪದಲ್ಲಿದ್ದ ಚಿಕ್ಕ ದ್ವೀಪಕ್ಕೆ ಹೋಗಿದ್ದರು.</p>.<p>ಸಂಜೆ ಅಲ್ಲಿ ನೀರಿನಮಟ್ಟ ಏರಿಕೆಯಾಗಿದ್ದರಿಂದ ದ್ವೀಪ ದಾಟಲು ಸಾಧ್ಯವಾಗದೆ ಅಲ್ಲಿಯೇ ಉಳಿದುಕೊಂಡಿದ್ದರು. ಇದರ ಮಧ್ಯೆ ಪ್ರವಾಸಿಗರನ್ನು ವಾಪಸ್ ಕರೆತರುವ ಕೊನೆಯ ಬೋಟ್ ಸಂಜೆ 6:45ಕ್ಕೆ ದ್ವೀಪದಿಂದ ತೀರಕ್ಕೆ ಮರಳಿದ ಪರಿಣಾಮ ಪ್ರವಾಸಿಗರು ರಾತ್ರಿ ಅಲ್ಲಿಯೇ ಉಳಿಯಬೇಕಾಯಿತು ಎಂದು ಪೊಲೀಸರು ಮಾಹಿತಿ ನೀಡಿದರು.</p>.<p>ದ್ವೀಪದಲ್ಲಿ ರಾತ್ರಿಯ ಹೊತ್ತು ಪ್ರವಾಸಿಗರು ತಂಗಲು ಅವಕಾಶವಿಲ್ಲ. ಹಾಗಾಗಿ, ಯಾವ ಉದ್ದೇಶಕ್ಕೆ ಉಳಿದುಕೊಂಡಿದ್ದರು ಎಂದು ವಿಚಾರಣೆ ನಡೆಸಲಾಯಿತು. ಬೋಟ್ ಟಿಕೆಟ್, ರೈಲು ಟಿಕೆಟ್, ಗುರುತಿನ ಚೀಟಿಗಳನ್ನು ಪರಿಶೀಲಿಸಿ, ಕೇರಳಕ್ಕೆ ಕಳುಹಿಸಲಾಯಿತು ಎಂದು ಪೊಲೀಸರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ:</strong> ಕೇರಳದ ಕೊಚ್ಚಿಮೂಲದ ನಾಲ್ವರು ಪ್ರವಾಸಿಗರು ಶನಿವಾರ ರಾತ್ರಿ ಪೂರ್ತಿ ಮಲ್ಪೆಯ ಸೇಂಟ್ ಮೇರಿಸ್ ಐಲ್ಯಾಂಡ್ನಲ್ಲಿ ಕಳೆದಿದ್ದಾರೆ. ಸಂಜೆ ದ್ವೀಪದಿಂದ ಪ್ರವಾಸಿಗರನ್ನು ತೀರಕ್ಕೆ ಕರೆತರುವ ಕೊನೆಯ ಬೋಟ್ ತಪ್ಪಿದ ಪರಿಣಾಮ ಪ್ರವಾಸಿಗರು ರಾತ್ರಿ ದ್ವೀಪದಲ್ಲಿಯೇ ಉಳಿಯಬೇಕಾಯಿತು.</p>.<p>ಭಾನುವಾರ ಬೆಳಿಗ್ಗೆ ಐಲ್ಯಾಂಡ್ಗೆ ಪ್ರವಾಸಿಗರನ್ನು ಕರೆದೊಯ್ದ ಬೋಟ್ ಸಿಬ್ಬಂದಿಗೆ ಅಲ್ಲಿದ್ದ ಕೇರಳ ಪ್ರವಾಸಿಗರು ಕಂಡಿದ್ದಾರೆ. ಬಳಿಕ ಅವರನ್ನು ತೀರಕ್ಕೆ ಕರೆತಂದು ಮಲ್ಪೆ ಠಾಣೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ವಿಚಾರಣೆ ನಡೆಸಿದ ಪೊಲೀಸರು ಪ್ರವಾಸಿಗರನ್ನು ಕೇರಳಕ್ಕೆ ಕಳುಹಿಸಿದ್ದಾರೆ.</p>.<p><strong>ಘಟನೆಯ ವಿವರ:</strong>ಜಸ್ಟಿನ್ (34), ಶೀಜಾ (33), ಜೋಶ್ (28) ಹಾಗೂ ಹರೀಶ್ (17) ನ.23ರಂದು ಮಧ್ಯಾಹ್ನ ಮಲ್ಪೆ ಬೀಚ್ನಿಂದ ಸೇಂಟ್ ಮೇರಿಸ್ ಐಲ್ಯಾಂಡ್ಗೆ ತೆರಳಿದ್ದರು. ದ್ವೀಪದಲ್ಲೆಲ್ಲ ಸುತ್ತಾಡಿದ ಬಳಿಕ ಸಮೀಪದಲ್ಲಿದ್ದ ಚಿಕ್ಕ ದ್ವೀಪಕ್ಕೆ ಹೋಗಿದ್ದರು.</p>.<p>ಸಂಜೆ ಅಲ್ಲಿ ನೀರಿನಮಟ್ಟ ಏರಿಕೆಯಾಗಿದ್ದರಿಂದ ದ್ವೀಪ ದಾಟಲು ಸಾಧ್ಯವಾಗದೆ ಅಲ್ಲಿಯೇ ಉಳಿದುಕೊಂಡಿದ್ದರು. ಇದರ ಮಧ್ಯೆ ಪ್ರವಾಸಿಗರನ್ನು ವಾಪಸ್ ಕರೆತರುವ ಕೊನೆಯ ಬೋಟ್ ಸಂಜೆ 6:45ಕ್ಕೆ ದ್ವೀಪದಿಂದ ತೀರಕ್ಕೆ ಮರಳಿದ ಪರಿಣಾಮ ಪ್ರವಾಸಿಗರು ರಾತ್ರಿ ಅಲ್ಲಿಯೇ ಉಳಿಯಬೇಕಾಯಿತು ಎಂದು ಪೊಲೀಸರು ಮಾಹಿತಿ ನೀಡಿದರು.</p>.<p>ದ್ವೀಪದಲ್ಲಿ ರಾತ್ರಿಯ ಹೊತ್ತು ಪ್ರವಾಸಿಗರು ತಂಗಲು ಅವಕಾಶವಿಲ್ಲ. ಹಾಗಾಗಿ, ಯಾವ ಉದ್ದೇಶಕ್ಕೆ ಉಳಿದುಕೊಂಡಿದ್ದರು ಎಂದು ವಿಚಾರಣೆ ನಡೆಸಲಾಯಿತು. ಬೋಟ್ ಟಿಕೆಟ್, ರೈಲು ಟಿಕೆಟ್, ಗುರುತಿನ ಚೀಟಿಗಳನ್ನು ಪರಿಶೀಲಿಸಿ, ಕೇರಳಕ್ಕೆ ಕಳುಹಿಸಲಾಯಿತು ಎಂದು ಪೊಲೀಸರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>