‘ಪೋಷಕರೊಬ್ಬರು ಎಸ್.ಎಸ್.ಎಲ್.ಸಿ. ಓದುತ್ತಿದ್ದ ಮಗಳನ್ನು ಒಂದು ದಿನ ಕರೆತಂದಿದ್ದರು. ಯಾರನ್ನೋ ಪ್ರೀತಿಸುತ್ತಿರುವುದಾಗಿ, ಅವನನ್ನೆ ಮದುವೆ ಆಗುವುದಾಗಿ ಹಠ ಮಾಡುತ್ತಿದ್ದಳು. ಆಗ ಹುಡುಗಿಯ ತಂದೆ, ‘ಇವಳು ಹೀಗೆಯೇ ಹಠ ಮಾಡಿದರೆ ಕೈ–ಕಾಲು ಮುರಿದು ಕೂರಿಸ್ತೆವೆ, ಇಲ್ಲವೇ ನಾವೇ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’ ಎಂದು ನಮ್ಮ ಬಳಿ ಹೇಳಿದರು. ತಂದೆಯ ಮಾತನ್ನೆ ಹುಡುಗಿಗೆ ಹೇಳಿದ್ದೆವು. ಅದಕ್ಕೂ ಆಕೆ ಜಗ್ಗಲಿಲ್ಲ. ಮಗಳನ್ನು ದಂಡಿಸಬೇಡಿ ಎಂದು ಪೋಷಕರನ್ನು ಸಮಾಧಾನ ಪಡಿಸಿ, ವಯಸ್ಸಿಗೆ ಬಂದಾಗ ಮದುವೆ ಮಾಡಿಕೊಡಿ ಎಂದು ಹೇಳಿ ಕಳುಹಿಸಿದ್ದೆವು. ಅದು ಹಾಗೆಯೇ ಆಯಿತು’ ಎಂದು ಪ್ರಕಟಣೆಯಲ್ಲಿ ವಿವರ ನೀಡಿದ್ದಾರೆ.