<p><strong>ಹುಬ್ಬಳ್ಳಿ: ‘</strong>ವೋಟಿಗಾಗಿ ಬಿಜೆಪಿ ಮುಖಂಡರು ಬಸವಣ್ಣನ ಹೆಸರು ಹೇಳಿಕೊಂಡು ಅಡ್ಡಾಡುತ್ತಿದ್ದಾರೆ. ತಾಕತ್ತಿದ್ದರೆ ಆರ್ಎಸ್ಎಸ್ ಕಚೇರಿಯಲ್ಲಿ ಬಸವಣ್ಣನ ಫೋಟೊ ಹಾಕಲಿ’ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಸವಾಲು ಹಾಕಿದರು.</p>.<p>ನಗರದಲ್ಲಿ ಬುಧವಾರ ಏರ್ಪಡಿಸಿದ್ದ ಲಿಂಗಾಯತ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.</p>.<p>ಕಳೆದ ಚುನಾವಣೆಯಲ್ಲಿ ರಾಜ್ಯದಿಂದ 9 ಮಂದಿ ಲಿಂಗಾಯತ ಸಂಸದರು ಆಯ್ಕೆಯಾಗಿದ್ದರು. ಆದರೆ, ಬಿಜೆಪಿಯು ಯಾರೊಬ್ಬನ್ನೂ ಸಚಿವರನ್ನಾಗಿ ಮಾಡಲಿಲ್ಲ. ಬದಲಿಗೆ ಬ್ರಾಹ್ಮಣ ಸಮಾಜದಿಂದ ಆಯ್ಕೆಯಾಗಿದ್ದ ಮೂವರ ಪೈಕಿ ಅನಂತಕುಮಾರ ಹೆಗಡೆ ಮತ್ತು ಅನಂತಕುಮಾರ್ ಸಚಿವರಾದರೆ, ಪ್ರಹ್ಲಾದ ಜೋಶಿ ಅವರು ಒಎನ್ಜಿಸಿಗೆ ಅಧ್ಯಕ್ಷರಾದರು. ಈ ಮೂಲಕ ಲಿಂಗಾಯತ ಸಮಾಜಕ್ಕೆ ಅನ್ಯಾಯ ಮಾಡಿದರು ಎಂದರು.</p>.<p>‘ಟಿವಿ, ಪತ್ರಿಕೆ ನೋಡಿ ವೋಟ್ ಹಾಕಬೇಡಿ. ಮಾಧ್ಯಮಗಳಲ್ಲಿ ಶೇ 70ರಷ್ಟು ಅದಾನಿ, ಅಂಬಾನಿ ಷೇರು ಹೂಡಿಕೆ ಮಾಡಿದ್ದಾರೆ. ಈ ಮಾಧ್ಯಮಗಳಲ್ಲಿ ಮೋದಿ, ಬಿಜೆಪಿ ಸುದ್ದಿಗಳೇ ಬರುತ್ತವೆ’ ಎಂದು ಆಪಾದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ: ‘</strong>ವೋಟಿಗಾಗಿ ಬಿಜೆಪಿ ಮುಖಂಡರು ಬಸವಣ್ಣನ ಹೆಸರು ಹೇಳಿಕೊಂಡು ಅಡ್ಡಾಡುತ್ತಿದ್ದಾರೆ. ತಾಕತ್ತಿದ್ದರೆ ಆರ್ಎಸ್ಎಸ್ ಕಚೇರಿಯಲ್ಲಿ ಬಸವಣ್ಣನ ಫೋಟೊ ಹಾಕಲಿ’ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಸವಾಲು ಹಾಕಿದರು.</p>.<p>ನಗರದಲ್ಲಿ ಬುಧವಾರ ಏರ್ಪಡಿಸಿದ್ದ ಲಿಂಗಾಯತ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.</p>.<p>ಕಳೆದ ಚುನಾವಣೆಯಲ್ಲಿ ರಾಜ್ಯದಿಂದ 9 ಮಂದಿ ಲಿಂಗಾಯತ ಸಂಸದರು ಆಯ್ಕೆಯಾಗಿದ್ದರು. ಆದರೆ, ಬಿಜೆಪಿಯು ಯಾರೊಬ್ಬನ್ನೂ ಸಚಿವರನ್ನಾಗಿ ಮಾಡಲಿಲ್ಲ. ಬದಲಿಗೆ ಬ್ರಾಹ್ಮಣ ಸಮಾಜದಿಂದ ಆಯ್ಕೆಯಾಗಿದ್ದ ಮೂವರ ಪೈಕಿ ಅನಂತಕುಮಾರ ಹೆಗಡೆ ಮತ್ತು ಅನಂತಕುಮಾರ್ ಸಚಿವರಾದರೆ, ಪ್ರಹ್ಲಾದ ಜೋಶಿ ಅವರು ಒಎನ್ಜಿಸಿಗೆ ಅಧ್ಯಕ್ಷರಾದರು. ಈ ಮೂಲಕ ಲಿಂಗಾಯತ ಸಮಾಜಕ್ಕೆ ಅನ್ಯಾಯ ಮಾಡಿದರು ಎಂದರು.</p>.<p>‘ಟಿವಿ, ಪತ್ರಿಕೆ ನೋಡಿ ವೋಟ್ ಹಾಕಬೇಡಿ. ಮಾಧ್ಯಮಗಳಲ್ಲಿ ಶೇ 70ರಷ್ಟು ಅದಾನಿ, ಅಂಬಾನಿ ಷೇರು ಹೂಡಿಕೆ ಮಾಡಿದ್ದಾರೆ. ಈ ಮಾಧ್ಯಮಗಳಲ್ಲಿ ಮೋದಿ, ಬಿಜೆಪಿ ಸುದ್ದಿಗಳೇ ಬರುತ್ತವೆ’ ಎಂದು ಆಪಾದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>