ಪುಣಚ - ತೋರಣಕಟ್ಟೆ ರಸ್ತೆಯ ಮನೆಲ ಕ್ರಿಸ್ತರಾಜ ಚರ್ಚ್ಗೆ ಸೇರಿದ ಗ್ರೊಟ್ಟೊ ಇದಾಗಿದ್ದು, ಹಾನಿಯಾಗಿರುವುದು ಬೆಳಿಗ್ಗೆ ಗೊತ್ತಾಗಿದೆ.‘ಕಲ್ಲು ಎಸೆತದಿಂದ ಗ್ರೊಟ್ಟೊದ ಗಾಜು ಪುಡಿಯಾಗಿದ್ದು, ತನಿಖೆ ನಡೆಸಿ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಚರ್ಚ್ನ ಧರ್ಮಗುರು ಪ್ರಕಾಶ್ ಡಿಸೋಜ ವಿಟ್ಲ ಠಾಣೆಗೆ ನೀಡಿದ ದೂರಿನಲ್ಲಿ ಆಗ್ರಹಿಸಿದ್ದಾರೆ. ಪ್ರಕರಣ ದಾಖಲಾಗಿದೆ.