ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಪ್ರಜಾಧ್ವನಿ ಯಾತ್ರೆ ಸಂದರ್ಭದಲ್ಲಿ ಜನರ ಹೃದಯ ತಲುಪುವ ಯೋಜನೆಗಳನ್ನು ಪಕ್ಷ ಘೋಷಿಸಿರುವುದರ ಬಗ್ಗೆ ಬಿಜೆಪಿಯವರು ಸಂಕಟದಿಂದ ಅಪಸ್ವರ ಎತ್ತಿದ್ದಾರೆ. ಸರ್ಕಾರದ ಆಯಸ್ಸು ಇನ್ನು 40 ದಿನ ಮಾತ್ರ. ಯಾರಿಂದ ವಸೂಲಿ ಮಾಡುವುದು ಬಾಕಿ ಇದೆಯೊ ಅದನ್ನು ಮಾಡಿಕೊಂಡು ಟೆಂಟ್ ಖಾಲಿ ಮಾಡಿ’ ಎಂದು ಬಿಜೆಪಿಯವರನ್ನು ಉದ್ದೇಶಿಸಿ ಹೇಳಿದರು.