ಸಭೆಯಲ್ಲಿ ಹಲವು ಕಾರ್ಯಕರ್ತರು ಅಸಮಾಧಾನ ಹೊರಹಾಕಿ ಸಂಸದರಿಗೆ ಸರಣಿ ಪ್ರಶ್ನೆಗಳನ್ನು ಹಾಕಿದರು. ನಗರ ಘಟಕದ ಅಧ್ಯಕ್ಷ ಸಿದ್ದಾಜಿ ಪಾಟೀಲ, ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಮುಖಂಡ ಚಂದು ಪಾಟೀಲ ಅವರು ಮಧ್ಯ ಪ್ರವೇಶಿಸಿ, 'ಸಂಸದರ ಭಾಷಣದ ನಡುವೆ ಈ ರೀತಿ ವರ್ತಿಸಬಾರದು. ಬಿಜೆಪಿ ಶಿಸ್ತಿನ ಪಕ್ಷ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಏನೆ ಅಸಮಾಧಾನ ಇದ್ದರು ಪಕ್ಷದ ಒಳಗೆ ಅದನ್ನು ಬಗೆ ಹರಿಸಿಕೊಳ್ಳೋಣ' ಎಂದು ಸಮಾಧಾನ ಮಾಡಿದರು. ಆಗಲು ಕಾರ್ಯಕರ್ತರು ಸುಮ್ಮನಾಗಲಿಲ್ಲ.
ಎನ್. ರವಿಕುಮಾರ್ ಅವರು ಎದ್ದು ನಿಂತು, 'ಸಂಸದ ಉಮೇಶ ಜಾಧವ ಅವರು ಕಾರ್ಯಕರ್ತರ ಶ್ರಮದಿಂದ ಗೆದ್ದಿದ್ದಾರೆ. ಅವರ ಗೆಲುವು ಪಕ್ಷದ ಕಾರ್ಯಕರ್ತರ ಗೆಲುವು' ಎಂದು ಹೇಳಿ, ಕಾರ್ಯಕರ್ತರನ್ನು ಸಮಾಧಾನ ಪಡಿಸಿದರು.
ಎಲ್ಲರೂ ಶಾಂತವಾಗಿ ಕುಳಿತ ಬಳಿಕ ಭಾಷಣ ಮುಂದುವರಿಸಿದ ಸಂಸದ ಜಾಧವ ಅವರು, 'ನಾನು ಕಾರ್ಯಕರ್ತರಿಂದ ಗೆದ್ದಿದ್ದೇನೆ. ನಿಮ್ಮ ಎಲ್ಲ ಪ್ರಶ್ನೆಗಳಿಗೆ ನಾನು ಉತ್ತರಿಸಲು ಸಿದ್ಧ ಇದ್ದೇನೆ. ಎರಡು ಗಂಟೆ ಇಲ್ಲಿಯೇ ಕುಳಿತು ಉತ್ತರಿಸುತ್ತೇನೆ' ಎಂದರು.