‘12 ವರ್ಷಗಳಿಂದ ವಿಧಾನ ಪರಿಷತ್ ಸದಸ್ಯ, ಶಾಸಕರಾಗಿ ಬದ್ಧತೆ ಮತ್ತು ಜನನಿಷ್ಠೆಯುಳ್ಳ ಜವಾಬ್ದಾರಿ ನಿರ್ವಹಿಸುವ ಭರದಲ್ಲಿ ತಮ್ಮ ಇಷ್ಟದ ವೃತ್ತಿ, ಹವ್ಯಾಸ, ಅಭಿರುಚಿಗಳು, ಚಟುವಟಿಕೆಗಳಿಂದ ದೂರವಾಗಿ ನನ್ನತನವನ್ನೇ ಕಳೆದುಕೊಂಡಿದ್ದೆ. ಆದರೆ ಇದೀಗ ನಿರುಮ್ಮಳನಾಗಿದ್ದೇನೆ ಎನಿಸುತ್ತಿದೆ. ಇಷ್ಟರ ಮಟ್ಟಿಗೆ ನನ್ನನ್ನು ಒತ್ತಡ ಮುಕ್ತನನ್ನಾಗಿ ಮಾಡಿರುವುದಕ್ಕೆ ಕಡೂರಿನ ಜನತೆಗೆ ಅಭಾರಿಯಾಗಿದ್ದೇನೆ’ ಎಂದು ದತ್ತ ಅವರು ಪತ್ರದಲ್ಲಿ ಬರೆದುಕೊಂಡಿದ್ದಾರೆ.