‘ಅಪಹರಣ, ದುಷ್ಕರ್ಮಿಗಳ ಜಾಲದ ಜೊತೆಗೆ ಮನೆಯಲ್ಲಿ ಗಲಾಟೆ, ಮನಸ್ತಾಪ, ಓದಲು-ಬರೆಯಲು ಪೋಷಕರ ಒತ್ತಡ, ನಗರಗಳಲ್ಲಿ ಪೋಷಕರ ನಿರ್ಲಕ್ಷ್ಯದಿಂದ ತಪ್ಪಿಸಿಕೊಂಡವರು, ಯಾರದೋ ಆಮಿಷ, ದುಡಿಮೆ, ಗೆಳೆಯರ ಸಹವಾಸ, ದುಶ್ಚಟ, ಪ್ರೇಮಪಾಶಕ್ಕೆ ಬಿದ್ದು ಕಾಣೆಯಾಗುತ್ತಿರುವ ಪ್ರಕರಣಗಳು ಸೇರಿವೆ’ ಎಂದು ಬ್ಯೂರೊ ನಿರ್ದೇಶಕ ಸುರೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.ಕಾಣೆಯಾದ ಮಕ್ಕಳನ್ನು ಪತ್ತೆ ಮಾಡಲು ಅನುಕೂಲವಾಗುವಂತೆ ಅಂತರ್ಜಾಲ ಆಧಾರಿತ ಮಾಹಿತಿ ವ್ಯವಸ್ಥೆ ರೂಪಿಸಲಾಗಿದೆ.