<p><strong>ಬೆಂಗಳೂರು</strong>: ರಾಜ್ಯ ನಾಟಕ ಅಕಾಡೆಮಿ ಆಯೋಜಿಸಲು ಉದ್ದೇಶಿಸಿರುವ, ಸಾಹಿತಿ ಡಾ. ಚಂದ್ರಶೇಖರ ಕಂಬಾರರ ಸರಣಿ ನಾಟಕ ಕಾರ್ಯಕ್ರಮ ವೀಕ್ಷಿಸಲು ರಂಗಾಸಕ್ತರು ಇನ್ನೂ ಕೆಲವು ಕಾಲ ಕಾಯಬೇಕು. ಈ ಕಾರ್ಯಕ್ರಮಕ್ಕೆ ಅಗತ್ಯವಿರುವ ಹಣವನ್ನು ರಾಜ್ಯ ಬಜೆಟ್ ಮಂಡನೆಯಾದ ನಂತರ ಬಿಡುಗಡೆ ಮಾಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಾಟಕ ಅಕಾಡೆಮಿಗೆ ತಿಳಿಸಿದೆ.<br /> <br /> `ಬಜೆಟ್ ಮಂಡನೆ ಆಗುವವರೆಗೆ ನಾಟಕೋತ್ಸವಕ್ಕೆ ಅಗತ್ಯ ಹಣ ನೀಡಲು ಆಗದು ಎಂದು ಇಲಾಖೆ ಹೇಳಿದೆ. ಅಲ್ಲದೆ, ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಕಾರ್ಯಕ್ರಮ ಆಯೋಜಿಸಬೇಕು ಎಂಬ ಸೂಚನೆಯೂ ಇಲಾಖೆಯಿಂದ ಬಂದಿದೆ~ ಎಂದು ಅಕಾಡೆಮಿ ಅಧ್ಯಕ್ಷೆ ಮಾಲತಿ ಸುಧೀರ್ `ಪ್ರಜಾವಾಣಿ~ಗೆ ಮಾಹಿತಿ ನೀಡಿದರು. ಕಂಬಾರರ ಒಟ್ಟು 17 ನಾಟಕಗಳ ಪೈಕಿ 8 ನಾಟಕಗಳನ್ನು ಈ ಉತ್ಸವಕ್ಕೆ ಆಯ್ಕೆ ಮಾಡಲಾಗಿದೆ. ರಾಜ್ಯದಾದ್ಯಂತ ಒಟ್ಟು 15 ನಾಟಕ ತಂಡಗಳನ್ನು ಗುರುತಿಸಿ, ಜಿಲ್ಲಾ ಕೇಂದ್ರಗಳಲ್ಲಿ ಒಂದು ಅಥವಾ ಎರಡು ದಿನ ಪ್ರದರ್ಶನ ನೀಡುವುದು ಅಕಾಡೆಮಿಯ ಉದ್ದೇಶ. ಯೋಜನೆಗೆ ರೂ 55 ಲಕ್ಷ ಹಣ ಬೇಕು ಎಂದು ಅಕಾಡೆಮಿ ಅಂದಾಜಿಸಿದೆ.<br /> <br /> `ಮೊದಲು ಆಯ್ಕೆ ಮಾಡಲಾಗಿದ್ದ 8 ನಾಟಕಗಳ ಪೈಕಿ ಒಂದೆರಡು ನಾಟಕಗಳನ್ನು ಕೈಬಿಡಬೇಕಾಗಿ ಬರಬಹುದು. ಅಲ್ಲದೆ, ಬಜೆಟ್ ಮಂಡನೆಯ ಬಳಿಕ ಅಕಾಡೆಮಿಗೆ ಸದಸ್ಯರ ನೇಮಕಾತಿಯೂ ಆಗಬಹುದು ಎಂಬ ವಿಶ್ವಾಸವಿದೆ. ಆಗ ಸದಸ್ಯರಿಗೆ ನಾಟಕೋತ್ಸವದ ಪ್ರದೇಶವಾರು ಉಸ್ತುವಾರಿ ವಹಿಸಲಾಗುವುದು~ ಎಂದರು. ಅಂದುಕೊಂಡಂತೆ ಆಗಿದ್ದರೆ ನಾಟಕೋತ್ಸವ ಕಂಬಾರರ ಹುಟ್ಟೂರು ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲಿ ಶಿವರಾತ್ರಿಯಂದೇ ಉದ್ಘಾಟನೆಯಾಗಬೇಕಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ರಾಜ್ಯ ನಾಟಕ ಅಕಾಡೆಮಿ ಆಯೋಜಿಸಲು ಉದ್ದೇಶಿಸಿರುವ, ಸಾಹಿತಿ ಡಾ. ಚಂದ್ರಶೇಖರ ಕಂಬಾರರ ಸರಣಿ ನಾಟಕ ಕಾರ್ಯಕ್ರಮ ವೀಕ್ಷಿಸಲು ರಂಗಾಸಕ್ತರು ಇನ್ನೂ ಕೆಲವು ಕಾಲ ಕಾಯಬೇಕು. ಈ ಕಾರ್ಯಕ್ರಮಕ್ಕೆ ಅಗತ್ಯವಿರುವ ಹಣವನ್ನು ರಾಜ್ಯ ಬಜೆಟ್ ಮಂಡನೆಯಾದ ನಂತರ ಬಿಡುಗಡೆ ಮಾಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಾಟಕ ಅಕಾಡೆಮಿಗೆ ತಿಳಿಸಿದೆ.<br /> <br /> `ಬಜೆಟ್ ಮಂಡನೆ ಆಗುವವರೆಗೆ ನಾಟಕೋತ್ಸವಕ್ಕೆ ಅಗತ್ಯ ಹಣ ನೀಡಲು ಆಗದು ಎಂದು ಇಲಾಖೆ ಹೇಳಿದೆ. ಅಲ್ಲದೆ, ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಕಾರ್ಯಕ್ರಮ ಆಯೋಜಿಸಬೇಕು ಎಂಬ ಸೂಚನೆಯೂ ಇಲಾಖೆಯಿಂದ ಬಂದಿದೆ~ ಎಂದು ಅಕಾಡೆಮಿ ಅಧ್ಯಕ್ಷೆ ಮಾಲತಿ ಸುಧೀರ್ `ಪ್ರಜಾವಾಣಿ~ಗೆ ಮಾಹಿತಿ ನೀಡಿದರು. ಕಂಬಾರರ ಒಟ್ಟು 17 ನಾಟಕಗಳ ಪೈಕಿ 8 ನಾಟಕಗಳನ್ನು ಈ ಉತ್ಸವಕ್ಕೆ ಆಯ್ಕೆ ಮಾಡಲಾಗಿದೆ. ರಾಜ್ಯದಾದ್ಯಂತ ಒಟ್ಟು 15 ನಾಟಕ ತಂಡಗಳನ್ನು ಗುರುತಿಸಿ, ಜಿಲ್ಲಾ ಕೇಂದ್ರಗಳಲ್ಲಿ ಒಂದು ಅಥವಾ ಎರಡು ದಿನ ಪ್ರದರ್ಶನ ನೀಡುವುದು ಅಕಾಡೆಮಿಯ ಉದ್ದೇಶ. ಯೋಜನೆಗೆ ರೂ 55 ಲಕ್ಷ ಹಣ ಬೇಕು ಎಂದು ಅಕಾಡೆಮಿ ಅಂದಾಜಿಸಿದೆ.<br /> <br /> `ಮೊದಲು ಆಯ್ಕೆ ಮಾಡಲಾಗಿದ್ದ 8 ನಾಟಕಗಳ ಪೈಕಿ ಒಂದೆರಡು ನಾಟಕಗಳನ್ನು ಕೈಬಿಡಬೇಕಾಗಿ ಬರಬಹುದು. ಅಲ್ಲದೆ, ಬಜೆಟ್ ಮಂಡನೆಯ ಬಳಿಕ ಅಕಾಡೆಮಿಗೆ ಸದಸ್ಯರ ನೇಮಕಾತಿಯೂ ಆಗಬಹುದು ಎಂಬ ವಿಶ್ವಾಸವಿದೆ. ಆಗ ಸದಸ್ಯರಿಗೆ ನಾಟಕೋತ್ಸವದ ಪ್ರದೇಶವಾರು ಉಸ್ತುವಾರಿ ವಹಿಸಲಾಗುವುದು~ ಎಂದರು. ಅಂದುಕೊಂಡಂತೆ ಆಗಿದ್ದರೆ ನಾಟಕೋತ್ಸವ ಕಂಬಾರರ ಹುಟ್ಟೂರು ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲಿ ಶಿವರಾತ್ರಿಯಂದೇ ಉದ್ಘಾಟನೆಯಾಗಬೇಕಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>