<p><strong>ಬೆಂಗಳೂರು: </strong>ಕನ್ನಡ ಸಾಹಿತ್ಯ ಪರಿಷತ್ತು 2014ನೇ ಸಾಲಿನ ವಿವಿಧ ದತ್ತಿ ಸ್ಪರ್ಧೆಗಳ ಪುಸ್ತಕ ಪ್ರಶಸ್ತಿಗಳನ್ನು ಪ್ರಕಟಿಸಿದೆ.<br /> ಪರಿಷತ್ತಿನಲ್ಲಿ ಇತ್ತೀಚೆಗೆ ನಡೆದ ಪ್ರಶಸ್ತಿ ಆಯ್ಕೆ ಸಮಿತಿ ಸಭೆಯಲ್ಲಿ ವಿವಿಧ ದತ್ತಿ ಸ್ಪರ್ಧೆಗಳ ವಿಜೇತರ ಹೆಸರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.<br /> <br /> ಲೇಖಕ ಡಾ.ಎಸ್.ಡಿ.ಶೆಟ್ಟಿ ಅವರ ‘ಶ್ರೀ ಸ್ವಾದಿ ದಿಗಂಬರ ಜೈನ ಸಂಸ್ಥಾನ ಮಠ ಪರಿಚಯ’ ಕೃತಿಯು ಹೊಳಲ್ಕೆರೆ ಪದ್ಮಾವತಮ್ಮ ಶ್ರೀಪಾಲಶೆಟ್ಟಿ ಡಾ.ಮದನಕೇಸರಿ ಜೈನ್ ದತ್ತಿ ಪ್ರಶಸ್ತಿಗೆ ಭಾಜನವಾಗಿದೆ. ಈ ಪ್ರಶಸ್ತಿಯು ₹ 7,500 ನಗದು ಪುರಸ್ಕಾರ ಒಳಗೊಂಡಿದೆ.<br /> <br /> ಕಾದಂಬರಿ ಪ್ರಕಾರಕ್ಕೆ ನೀಡುವ ವಸುದೇವ ಭೂಪಾಲಂ ದತ್ತಿ ಪ್ರಶಸ್ತಿಗೆ ಚೀಮನಹಳ್ಳಿ ರಮೇಶಬಾಬು ಅವರ ‘ಹದ’ ಹಾಗೂ ಬೀಳಗಿ ಪ್ರಥಮ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸವಿನೆನಪಿನ ದತ್ತಿ ಪ್ರಶಸ್ತಿಗೆ ಲಕ್ಷ್ಮಣ ಬಾದಾಮಿ ಅವರ ‘ಮನುಷ್ಯರು ಬೇಕಾಗಿದ್ದಾರೆ’ ಕೃತಿ ಆಯ್ಕೆಯಾಗಿವೆ. ಈ ಪ್ರಶಸ್ತಿಗಳು ತಲಾ ₹ 5,000 ನಗದು ಬಹುಮಾನ ಒಳಗೊಂಡಿವೆ.<br /> <br /> ಸಣ್ಣಕತೆ ಪ್ರಕಾರಕ್ಕೆ ನೀಡುವ ವಸುದೇವ ಭೂಪಾಲಂ ದತ್ತಿ ಪ್ರಶಸ್ತಿಗೆ (₹ 3,000 ನಗದು) ಟಿ.ಕೆ.ತ್ಯಾಗರಾಜ್ ಅವರ ‘ಭಾವಭಿತ್ತಿಯ ಚಿತ್ರಗಳು’ ಎಂಬ ಸಂಕಲನ, ಮಕ್ಕಳ ಸಾಹಿತ್ಯ ಕೃತಿಗೆ ನೀಡುವ ಅದೇ ಹೆಸರಿನ ಪ್ರಶಸ್ತಿಗೆ (₹ 2,000 ನಗದು) ಡಾ.ಟಿ.ಗೋವಿಂದರಾಜು ಅವರ ‘ಥೈ.. ತಕ.. ಥೈ!!’ ಹಾಗೂ ಅನುವಾದಿತ, ವೈಚಾರಿಕ ಲೇಖನಗಳಿಗೆ ನೀಡುವ ಅದೇ ಹೆಸರಿನ ಪ್ರಶಸ್ತಿಗೆ (₹ 2,000 ನಗದು) ಪಾರ್ವತಿ ಜಿ.ಐತಾಳ್ ಅವರ ‘ಉಪನಿಷತ್ ಚಿಂತನೆ’ ಕೃತಿ ಆಯ್ಕೆಯಾಗಿವೆ.<br /> <br /> ಸಾರಂಗಿ ವೆಂಕಟರಾಮಯ್ಯ ಶ್ರೀನಿವಾಸರಾವ್ ದತ್ತಿ ಪ್ರಶಸ್ತಿ- ಹ.ಸ. ಬ್ಯಾಕೋಡ ಅವರ ‘ಆಪರೇಷನ್ ಆನೆಮಲೆ’ ಕೃತಿ, ಪಳಕಳ ಸೀತಾರಾಮಭಟ್ಟ ದತ್ತಿ ಪುರಸ್ಕಾರಕ್ಕೆ ಎ.ಕೆ.ರಾಮೇಶ್ವರ ಅವರ ‘ಬೆಳಗುತ್ತಿರುವ ಭಾರತ’ ಕೃತಿ ಆಯ್ಕೆಯಾಗಿವೆ. ಈ ಪ್ರಶಸ್ತಿಗಳು ತಲಾ ₹ 2000 ನಗದು ಬಹುಮಾನ ಒಳಗೊಂಡಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಕನ್ನಡ ಸಾಹಿತ್ಯ ಪರಿಷತ್ತು 2014ನೇ ಸಾಲಿನ ವಿವಿಧ ದತ್ತಿ ಸ್ಪರ್ಧೆಗಳ ಪುಸ್ತಕ ಪ್ರಶಸ್ತಿಗಳನ್ನು ಪ್ರಕಟಿಸಿದೆ.<br /> ಪರಿಷತ್ತಿನಲ್ಲಿ ಇತ್ತೀಚೆಗೆ ನಡೆದ ಪ್ರಶಸ್ತಿ ಆಯ್ಕೆ ಸಮಿತಿ ಸಭೆಯಲ್ಲಿ ವಿವಿಧ ದತ್ತಿ ಸ್ಪರ್ಧೆಗಳ ವಿಜೇತರ ಹೆಸರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.<br /> <br /> ಲೇಖಕ ಡಾ.ಎಸ್.ಡಿ.ಶೆಟ್ಟಿ ಅವರ ‘ಶ್ರೀ ಸ್ವಾದಿ ದಿಗಂಬರ ಜೈನ ಸಂಸ್ಥಾನ ಮಠ ಪರಿಚಯ’ ಕೃತಿಯು ಹೊಳಲ್ಕೆರೆ ಪದ್ಮಾವತಮ್ಮ ಶ್ರೀಪಾಲಶೆಟ್ಟಿ ಡಾ.ಮದನಕೇಸರಿ ಜೈನ್ ದತ್ತಿ ಪ್ರಶಸ್ತಿಗೆ ಭಾಜನವಾಗಿದೆ. ಈ ಪ್ರಶಸ್ತಿಯು ₹ 7,500 ನಗದು ಪುರಸ್ಕಾರ ಒಳಗೊಂಡಿದೆ.<br /> <br /> ಕಾದಂಬರಿ ಪ್ರಕಾರಕ್ಕೆ ನೀಡುವ ವಸುದೇವ ಭೂಪಾಲಂ ದತ್ತಿ ಪ್ರಶಸ್ತಿಗೆ ಚೀಮನಹಳ್ಳಿ ರಮೇಶಬಾಬು ಅವರ ‘ಹದ’ ಹಾಗೂ ಬೀಳಗಿ ಪ್ರಥಮ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸವಿನೆನಪಿನ ದತ್ತಿ ಪ್ರಶಸ್ತಿಗೆ ಲಕ್ಷ್ಮಣ ಬಾದಾಮಿ ಅವರ ‘ಮನುಷ್ಯರು ಬೇಕಾಗಿದ್ದಾರೆ’ ಕೃತಿ ಆಯ್ಕೆಯಾಗಿವೆ. ಈ ಪ್ರಶಸ್ತಿಗಳು ತಲಾ ₹ 5,000 ನಗದು ಬಹುಮಾನ ಒಳಗೊಂಡಿವೆ.<br /> <br /> ಸಣ್ಣಕತೆ ಪ್ರಕಾರಕ್ಕೆ ನೀಡುವ ವಸುದೇವ ಭೂಪಾಲಂ ದತ್ತಿ ಪ್ರಶಸ್ತಿಗೆ (₹ 3,000 ನಗದು) ಟಿ.ಕೆ.ತ್ಯಾಗರಾಜ್ ಅವರ ‘ಭಾವಭಿತ್ತಿಯ ಚಿತ್ರಗಳು’ ಎಂಬ ಸಂಕಲನ, ಮಕ್ಕಳ ಸಾಹಿತ್ಯ ಕೃತಿಗೆ ನೀಡುವ ಅದೇ ಹೆಸರಿನ ಪ್ರಶಸ್ತಿಗೆ (₹ 2,000 ನಗದು) ಡಾ.ಟಿ.ಗೋವಿಂದರಾಜು ಅವರ ‘ಥೈ.. ತಕ.. ಥೈ!!’ ಹಾಗೂ ಅನುವಾದಿತ, ವೈಚಾರಿಕ ಲೇಖನಗಳಿಗೆ ನೀಡುವ ಅದೇ ಹೆಸರಿನ ಪ್ರಶಸ್ತಿಗೆ (₹ 2,000 ನಗದು) ಪಾರ್ವತಿ ಜಿ.ಐತಾಳ್ ಅವರ ‘ಉಪನಿಷತ್ ಚಿಂತನೆ’ ಕೃತಿ ಆಯ್ಕೆಯಾಗಿವೆ.<br /> <br /> ಸಾರಂಗಿ ವೆಂಕಟರಾಮಯ್ಯ ಶ್ರೀನಿವಾಸರಾವ್ ದತ್ತಿ ಪ್ರಶಸ್ತಿ- ಹ.ಸ. ಬ್ಯಾಕೋಡ ಅವರ ‘ಆಪರೇಷನ್ ಆನೆಮಲೆ’ ಕೃತಿ, ಪಳಕಳ ಸೀತಾರಾಮಭಟ್ಟ ದತ್ತಿ ಪುರಸ್ಕಾರಕ್ಕೆ ಎ.ಕೆ.ರಾಮೇಶ್ವರ ಅವರ ‘ಬೆಳಗುತ್ತಿರುವ ಭಾರತ’ ಕೃತಿ ಆಯ್ಕೆಯಾಗಿವೆ. ಈ ಪ್ರಶಸ್ತಿಗಳು ತಲಾ ₹ 2000 ನಗದು ಬಹುಮಾನ ಒಳಗೊಂಡಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>