ಬೆಂಗಳೂರು: ಕೆಳಹಂತದ ನ್ಯಾಯಾಲಯಗಳಲ್ಲಿ ಕನ್ನಡದಲ್ಲಿ ಆದೇಶ ನೀಡಿದ ರಾಜ್ಯದ 48 ನ್ಯಾಯಾಧೀಶರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಸನ್ಮಾನಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರಈ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಸನ್ಮಾನಿತರಿಗೆ ಶಾಲು ಹೊದಿಸಿ, ತಲಾ ₨ 10 ಸಾವಿರ ಪುರಸ್ಕಾರ ಮತ್ತು ಫಲಕ ನೀಡಲಾಯಿತು.