ಸದಾಶಿವ ನಗರದಲ್ಲಿನ ಪರಮೇಶ್ವರ್ ಅವರ ನಿವಾಸದ ಮುಂದೆಯೂ ಅಭಿಮಾನಿಗಳು ನೆರೆದಿದ್ದರು. ಅವರ ಮನೆಯನ್ನು ಹೂಗಳಿಂದ ಅಲಂಕರಿಸಲಾಗಿತ್ತು. ಬೆಳಗ್ಗೆಯಿಂದಲೂ ಪರಮೇಶ್ವರ್ ನಿವಾಸದಲ್ಲೂ ಪೂಜೆ ನಡೆಯುತ್ತಿತ್ತು. ಪರಮೇಶ್ವರ್ ಅವರಿಗೆ ಶುಭಾಶಯ ಕೋರಲು ಬರುತ್ತಿದ್ದ ಅಭಿಮಾನಿಗಳಿಗೆ ಅರ್ಚಕರು ಹಣೆಗೆ ತಿಲಕವಿಟ್ಟು ಪ್ರಸಾದ ನೀಡುತ್ತಿದ್ದರು.