ಪುಟ್ಟಸ್ವಾಮಿ ಆರೋಪ ನಿರಾಧಾರ: ‘ತಮ್ಮ ಪುತ್ರನ ವಿರುದ್ಧ ಬಿಜೆಪಿ ಮುಖಂಡ ಬಿ.ಜೆ.ಪುಟ್ಟಸ್ವಾಮಿ ಮಾಡಿರುವ ಆರೋಪ ನಿರಾಧಾರ. ಆರೋಪ ಮಾಡಿದವರು ಸಾಕ್ಷ್ಯ ನೀಡಬೇಕು. ಆರೋಪ ಸುಳ್ಳಾದರೆ ವಿಧಾನಸೌಧದ ಎದುರು ಆತ್ಯಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಅವರು ಹೇಳಿದ್ದಾರೆ. ಸಾಕ್ಷ್ಯ ನೀಡದೇ ಇದ್ದರೆ, ಆರೋಪ ಸುಳ್ಳು ಎಂದಾಗುತ್ತದೆ. ಆಗ ಅವರು ಏನು ಮಾಡಬೇಕು ಹೇಳಿ?’ ಎಂದು ಕೇಳಿದರು. ಅವರು, ‘ವಿಧಾನಸೌಧದ ಎದುರು ನೇತುಹಾಕಿಕೊಳ್ಳಲಿ ಬಿಡಿ’ ಎಂದು ಹೇಳಿದ ಸಿದ್ದರಾಮಯ್ಯ, ನಂತರ ಮಾತು ಬದಲಿಸಿ, ‘ಹಾಗೆಂದು ಅವರಿಗೆ ಆತ್ಮಹತ್ಯೆ ಮಾಡಿಕೊಳ್ಳಿ ಎಂದು ಹೇಳಬಾರದು’ ಎಂದರು.