ವಿಚಾರಣೆ ನಡೆಸಿದ ನ್ಯಾಯಾಧೀಶರು 11 ಆರೋಪಿಗಳ ಬಂಧನದ ಅವಧಿಯನ್ನು ಇದೇ ತಿಂಗಳ 28ರಂದು ವಿಸ್ತರಿಸಿ ಆದೇಶ ಹೊರಡಿಸಿದರು. ವಿಚಾರಣೆ ವಿಚಾರ ತಿಳಿದು ಆರೋಪಿಗಳ ಕುಟುಂಬಸ್ಥರು, ಸ್ನೇಹಿತರು ಹೆಚ್ಚಿನ ಸಂಖ್ಯೆಯಲ್ಲಿ ನ್ಯಾಯಾಲಯದ ಎದುರು ಜಮಾಯಿಸಿದ್ದರು. ನ್ಯಾಯಾಲಯದಿಂದ ಆದೇಶ ಹೊರ ಬೀಳುತ್ತಿದ್ದಂತೆ 6 ಆರೋಪಿಗಳನ್ನು ಕಾರವಾರ ಜೈಲಿಗೆ ಹಾಗೂ ಒಬ್ಬನನ್ನು ಮಂಗಳೂರು ಜೈಲಿಗೆ ಕರೆದೊಯ್ಯಲಾಯಿತು.