ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು ‘ಮಾಧ್ಯಮಗಳಿಗೆ ನನ್ನಿಂದ ವಿವಾದಾತ್ಮಕ ಹೇಳಿಕೆಗಳು ದೊರೆಯುವುದಿಲ್ಲ. ಹಿಂದೆ ನಾನು ಯಾವುದೇ ಟೀಕೆಗಳಿಗೆ ಉತ್ತರ ಕೊಟ್ಟಿಲ್ಲ. ಮುಂದೆಯೂ ನಾನು ನಾನಾಗೇ ಉಳಿಯುತ್ತೇನೆ. ಜಿಲ್ಲೆಯಲ್ಲಿ ಬರ ಇದೆ, ಕುಡಿಯುವ ನೀರಿನ ಸಮಸ್ಯೆ ಇದೆ. ರಾಜಕಾರಣ ಮಾಡುವ ಸಮಯ ಇದಲ್ಲ’ ಎಂದರು.