ಗ್ರಾಮದ ದೇವರಾಜು, ನಂದೀಶ್, ರವಿ, ಮರಣ್ಣ, ಶೇಖರ್ ಅವರು ಚಿರತೆ ಮರಿಗಳನ್ನು ಸೆರೆ ಹಿಡಿದರು. ಬನ್ನಂಗಾಡಿ, ಬಿಂಡಹಳ್ಳಿ, ಡಿಂಕಾ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆ ಹಾವಳಿ ಹೆಚ್ಚಿದೆ. ಎರಡು ತಿಂಗಳಲ್ಲಿ 5 ಕುರಿ, 3 ಮೇಕೆಯನ್ನು ಚಿರತೆ ತಿಂದುಹಾಕಿತ್ತು. ಚಿರತೆ ಸೆರೆ ಹಿಡಿಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.