<p><strong>ಹಾವೇರಿ: </strong>ಕವಿರಾಜಮಾರ್ಗದಲ್ಲಿ ಪ್ರಸ್ತಾಪಿಸಲಾದ `ತಿರುಳ್ಗನ್ನಡ ನಾಡು' ಯಾವುದು ಎಂಬುದಕ್ಕೆ ಇಲ್ಲಿವರೆಗೆ ನಡೆದ ಸಂಶೋಧನೆಗಳಿಂದ ಸ್ಪಷ್ಟ ಉತ್ತರ ದೊರೆತಿಲ್ಲ. ವಿದ್ವಾಂಸರು, ಸಂಶೋಧಕರು ಈ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸಿ ಹೊಸ ಹೊಳವು ನೀಡುವ ಅಗತ್ಯವಾಗಿದೆ ಎಂದು 17ನೇ ಸಂಸ್ಕೃತಿ ಸಮ್ಮೇಳನದ ಸರ್ವಾಧ್ಯಕ್ಷ, ಶಾಸನ ತಜ್ಞ ಡಾ. ಶ್ರೀನಿವಾಸ ರಿತ್ತಿ ಶನಿವಾರ ಹೇಳಿದರು.<br /> <br /> ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಡಾ. ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠ ಹಾಗೂ ಕೆರಿಮತ್ತಿಹಳ್ಳಿಯ ಕ.ವಿ.ವಿ ರಾಜೀವಗಾಂಧಿ ಸ್ನಾತಕೋತ್ತರ ಕೇಂದ್ರದ ಆಶ್ರಯದಲ್ಲಿ ಸಮ್ಮೇಳನವನ್ನು ಆಯೋಜಿಸಲಾಗಿತ್ತು. `ಸಂಶೋಧಕ ಡಾ.ಕಾಶೀನಾಥ ಪಾಠಕ್ ಕವಿರಾಜಮಾರ್ಗವನ್ನು ಪ್ರಕಟಿಸಿ ಒಂದು ಶತಮಾನದ ಗತಿಸಿದೆ. ಅದರಲ್ಲಿ ಪ್ರಸ್ತಾಪಿಸಿರುವ ತಿರುಳ್ಗನ್ನಡ ನಾಡು ಕುರಿತು ಅಂದಿನಿಂದ ಇಂದಿನವರೆಗೆ ಹಲವಾರು ವಿದ್ವಾಂಸರು ತಮಗೆ ದೊರೆತ ಆಧಾರಗಳ ಮೇಲೆ ಉತ್ತರವನ್ನು ಕಂಡುಕೊಳ್ಳಲು ಪ್ರಯತ್ನಿಸಿದ್ದಾರೆ.<br /> <br /> ಆದರೆ, ಅವುಗಳು ಸಮರ್ಪಕ ಉತ್ತರಗಳು ಎಂದು ನನಗೆ ಅನಿಸುತ್ತಿಲ್ಲ' ಎಂದರು. `ಗ್ರಂಥಕಾರ ಹೇಳುವಂತೆ ಕಿಸುವೊಳಲು (ಐಹೊಳೆ), ಕೋಪನಗರ (ಕೊಪ್ಪಳ), ಪುಲಿಗೆರೆ (ಲಕ್ಷ್ಮೇಶ್ವರ) ಹಾಗೂ ಒಂಕುಂದ (ಬೆಳಗಾವಿ) ಈ ನಾಲ್ಕು ಊರುಗಳ ನಡುವಿನ ಪ್ರದೇಶದ ನಾಡೇ ಕನ್ನಡದ ತಿರುಳ್ ಆಗಿದೆ. ಇದನ್ನೇ ತಿರುಳ್ಗನ್ನಡ ನಾಡು ಎಂದು ವಿದ್ವಾಂಸರು ಅರ್ಥ ಮಾಡಿಕೊಂಡಿದ್ದಾರೆ.</p>.<p>ಅಂದರೆ, ಈ ನಾಲ್ಕು ಊರುಗಳ ಮಧ್ಯದಲ್ಲಿ ನೈಜವಾದ, ಶಿಷ್ಟವಾದ, ಶ್ರೇಷ್ಠವಾದ, ಕೆಚ್ಚೆದೆಯ ಕನ್ನಡ ಬಳಕೆಯಲ್ಲಿ ಇತ್ತೆ? ಹಾಗಾದರೆ, ಉಳಿದ ಭಾಗಗಳಲ್ಲಿ ಇದ್ದ ಕನ್ನಡ ಯಾವುದು' ಎಂದು ಅವರು ಪ್ರಶ್ನಿಸಿದರು `ಅದು ಅಲ್ಲದೆ ಅಷ್ಟೊಂದು ಶ್ರೇಷ್ಠ ಕನ್ನಡ ಈ ಭಾಗದಲ್ಲಿ ಇದ್ದರೂ, ಆ ಸಮಯದಲ್ಲಿ ಯಾವುದೇ ಸಾಹಿತ್ಯಿಕ ಕೃತಿಗಳು ರಚನೆಯಾಗಲಿಲ್ಲವೇ?</p>.<p>ಅಥವಾ ರಚನೆ ಆಗಿದ್ದರೆ, ಆ ಸಾಹಿತ್ಯ ಕೃತಿಗಳಾವವು? ಆಗಿ ಹೋಗಿರುವ ಕೃತಿಕಾರರು ಯಾರು? ಎಂಬ ಪ್ರಶ್ನೆಗಳಿಗೆ ಉತ್ತರ ಇಲ್ಲದಾಗಿದೆ. ಕವಿರಾಜಮಾರ್ಗವನ್ನು ಆಳವಾಗಿ ಅಧ್ಯಯನ ಮಾಡಿರುವ ಡಾ. ಎಂ.ಎಂ.ಕಲಬುರ್ಗಿ, ಎಂ.ಚಿದಾನಂದಮೂರ್ತಿ, ರಾಜಪುರೋಹಿತ ಅವರಿಗೂ ಈ ಪ್ರಶ್ನೆಗಳು ಅಷ್ಟಾಗಿ ಕಾಡಿದಂತೆ ಕಾಣುತ್ತಿಲ್ಲ' ಎಂದು ಅಭಿಪ್ರಾಯಪಟ್ಟರು.<br /> <br /> `ಈ ನಾಲ್ಕು ಊರುಗಳ ಪ್ರದೇಶವು ಈಗಿನ ಧಾರವಾಡ ಜಿಲ್ಲೆಯ ಬಹುಭಾಗ (ಹುಬ್ಬಳ್ಳಿ, ಕಲಘಟಗಿ ತಾಲ್ಲೂಕು ಹೊರತುಪಡಿಸಿ), ಸಂಪೂರ್ಣ ಗದಗ ಜಿಲ್ಲೆ, ಬೆಳಗಾವಿ, ಬಾಗಲಕೋಟೆ ಮತ್ತು ಕೊಪ್ಪಳ ಜಿಲ್ಲೆಯ ವ್ಯಾಪ್ತಿಯಲ್ಲಿದೆ. ಕಾವೇರಿಯಿಂದ ಗೋದಾವರಿವರೆಗಿನ ವಿಶಾಲ ನಾಡಿನಲ್ಲಿ ಈ ಚಿಕ್ಕ ಭೂ ಪ್ರದೇಶವಷ್ಟೇ ತಿರುಳ್ಗನ್ನಡ ನಾಡು ಕರೆಸಿಕೊಂಡಿರುವುದು ವಿಚಿತ್ರವೇ ಸರಿ ಎಂದು ಹೇಳಿರುವ ಅವರು, ಕವಿರಾಜಮಾರ್ಗಕಾರ ಕೂಡಾ ಈ ಪ್ರದೇಶವನ್ನು ತಿರುಳ್ಗನ್ನಡ ಎಂದು ಹೇಳಿರುವುದು ಏಕೆ ಎಂಬುದನ್ನು ಸ್ಪಷ್ಟಪಡಿಸದೇ ಇರುವುದು ಈ ಪ್ರಶ್ನೆಗಳು ಉದ್ಭವಿಸಲು ಕಾರಣವಾಗಿದೆ' ಎಂದು ಹೇಳಿದರು.<br /> <br /> ಸಮ್ಮೇಳನವನ್ನು ಕವಿವಿ ಕುಲಪತಿ ಡಾ.ಎಚ್.ಬಿ.ವಾಲೀಕಾರ ಉದ್ಘಾಟಿಸಿದರು. ಸಮ್ಮೇಳನದ ಕಾರ್ಯಾಧ್ಯಕ್ಷ ಡಾ. ಜೆ.ಎಂ.ನಾಗಯ್ಯ, ಕಾರ್ಯದರ್ಶಿ ಡಾ.ಪಿ.ಕೆ.ರಾಠೋಡ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ: </strong>ಕವಿರಾಜಮಾರ್ಗದಲ್ಲಿ ಪ್ರಸ್ತಾಪಿಸಲಾದ `ತಿರುಳ್ಗನ್ನಡ ನಾಡು' ಯಾವುದು ಎಂಬುದಕ್ಕೆ ಇಲ್ಲಿವರೆಗೆ ನಡೆದ ಸಂಶೋಧನೆಗಳಿಂದ ಸ್ಪಷ್ಟ ಉತ್ತರ ದೊರೆತಿಲ್ಲ. ವಿದ್ವಾಂಸರು, ಸಂಶೋಧಕರು ಈ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸಿ ಹೊಸ ಹೊಳವು ನೀಡುವ ಅಗತ್ಯವಾಗಿದೆ ಎಂದು 17ನೇ ಸಂಸ್ಕೃತಿ ಸಮ್ಮೇಳನದ ಸರ್ವಾಧ್ಯಕ್ಷ, ಶಾಸನ ತಜ್ಞ ಡಾ. ಶ್ರೀನಿವಾಸ ರಿತ್ತಿ ಶನಿವಾರ ಹೇಳಿದರು.<br /> <br /> ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಡಾ. ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠ ಹಾಗೂ ಕೆರಿಮತ್ತಿಹಳ್ಳಿಯ ಕ.ವಿ.ವಿ ರಾಜೀವಗಾಂಧಿ ಸ್ನಾತಕೋತ್ತರ ಕೇಂದ್ರದ ಆಶ್ರಯದಲ್ಲಿ ಸಮ್ಮೇಳನವನ್ನು ಆಯೋಜಿಸಲಾಗಿತ್ತು. `ಸಂಶೋಧಕ ಡಾ.ಕಾಶೀನಾಥ ಪಾಠಕ್ ಕವಿರಾಜಮಾರ್ಗವನ್ನು ಪ್ರಕಟಿಸಿ ಒಂದು ಶತಮಾನದ ಗತಿಸಿದೆ. ಅದರಲ್ಲಿ ಪ್ರಸ್ತಾಪಿಸಿರುವ ತಿರುಳ್ಗನ್ನಡ ನಾಡು ಕುರಿತು ಅಂದಿನಿಂದ ಇಂದಿನವರೆಗೆ ಹಲವಾರು ವಿದ್ವಾಂಸರು ತಮಗೆ ದೊರೆತ ಆಧಾರಗಳ ಮೇಲೆ ಉತ್ತರವನ್ನು ಕಂಡುಕೊಳ್ಳಲು ಪ್ರಯತ್ನಿಸಿದ್ದಾರೆ.<br /> <br /> ಆದರೆ, ಅವುಗಳು ಸಮರ್ಪಕ ಉತ್ತರಗಳು ಎಂದು ನನಗೆ ಅನಿಸುತ್ತಿಲ್ಲ' ಎಂದರು. `ಗ್ರಂಥಕಾರ ಹೇಳುವಂತೆ ಕಿಸುವೊಳಲು (ಐಹೊಳೆ), ಕೋಪನಗರ (ಕೊಪ್ಪಳ), ಪುಲಿಗೆರೆ (ಲಕ್ಷ್ಮೇಶ್ವರ) ಹಾಗೂ ಒಂಕುಂದ (ಬೆಳಗಾವಿ) ಈ ನಾಲ್ಕು ಊರುಗಳ ನಡುವಿನ ಪ್ರದೇಶದ ನಾಡೇ ಕನ್ನಡದ ತಿರುಳ್ ಆಗಿದೆ. ಇದನ್ನೇ ತಿರುಳ್ಗನ್ನಡ ನಾಡು ಎಂದು ವಿದ್ವಾಂಸರು ಅರ್ಥ ಮಾಡಿಕೊಂಡಿದ್ದಾರೆ.</p>.<p>ಅಂದರೆ, ಈ ನಾಲ್ಕು ಊರುಗಳ ಮಧ್ಯದಲ್ಲಿ ನೈಜವಾದ, ಶಿಷ್ಟವಾದ, ಶ್ರೇಷ್ಠವಾದ, ಕೆಚ್ಚೆದೆಯ ಕನ್ನಡ ಬಳಕೆಯಲ್ಲಿ ಇತ್ತೆ? ಹಾಗಾದರೆ, ಉಳಿದ ಭಾಗಗಳಲ್ಲಿ ಇದ್ದ ಕನ್ನಡ ಯಾವುದು' ಎಂದು ಅವರು ಪ್ರಶ್ನಿಸಿದರು `ಅದು ಅಲ್ಲದೆ ಅಷ್ಟೊಂದು ಶ್ರೇಷ್ಠ ಕನ್ನಡ ಈ ಭಾಗದಲ್ಲಿ ಇದ್ದರೂ, ಆ ಸಮಯದಲ್ಲಿ ಯಾವುದೇ ಸಾಹಿತ್ಯಿಕ ಕೃತಿಗಳು ರಚನೆಯಾಗಲಿಲ್ಲವೇ?</p>.<p>ಅಥವಾ ರಚನೆ ಆಗಿದ್ದರೆ, ಆ ಸಾಹಿತ್ಯ ಕೃತಿಗಳಾವವು? ಆಗಿ ಹೋಗಿರುವ ಕೃತಿಕಾರರು ಯಾರು? ಎಂಬ ಪ್ರಶ್ನೆಗಳಿಗೆ ಉತ್ತರ ಇಲ್ಲದಾಗಿದೆ. ಕವಿರಾಜಮಾರ್ಗವನ್ನು ಆಳವಾಗಿ ಅಧ್ಯಯನ ಮಾಡಿರುವ ಡಾ. ಎಂ.ಎಂ.ಕಲಬುರ್ಗಿ, ಎಂ.ಚಿದಾನಂದಮೂರ್ತಿ, ರಾಜಪುರೋಹಿತ ಅವರಿಗೂ ಈ ಪ್ರಶ್ನೆಗಳು ಅಷ್ಟಾಗಿ ಕಾಡಿದಂತೆ ಕಾಣುತ್ತಿಲ್ಲ' ಎಂದು ಅಭಿಪ್ರಾಯಪಟ್ಟರು.<br /> <br /> `ಈ ನಾಲ್ಕು ಊರುಗಳ ಪ್ರದೇಶವು ಈಗಿನ ಧಾರವಾಡ ಜಿಲ್ಲೆಯ ಬಹುಭಾಗ (ಹುಬ್ಬಳ್ಳಿ, ಕಲಘಟಗಿ ತಾಲ್ಲೂಕು ಹೊರತುಪಡಿಸಿ), ಸಂಪೂರ್ಣ ಗದಗ ಜಿಲ್ಲೆ, ಬೆಳಗಾವಿ, ಬಾಗಲಕೋಟೆ ಮತ್ತು ಕೊಪ್ಪಳ ಜಿಲ್ಲೆಯ ವ್ಯಾಪ್ತಿಯಲ್ಲಿದೆ. ಕಾವೇರಿಯಿಂದ ಗೋದಾವರಿವರೆಗಿನ ವಿಶಾಲ ನಾಡಿನಲ್ಲಿ ಈ ಚಿಕ್ಕ ಭೂ ಪ್ರದೇಶವಷ್ಟೇ ತಿರುಳ್ಗನ್ನಡ ನಾಡು ಕರೆಸಿಕೊಂಡಿರುವುದು ವಿಚಿತ್ರವೇ ಸರಿ ಎಂದು ಹೇಳಿರುವ ಅವರು, ಕವಿರಾಜಮಾರ್ಗಕಾರ ಕೂಡಾ ಈ ಪ್ರದೇಶವನ್ನು ತಿರುಳ್ಗನ್ನಡ ಎಂದು ಹೇಳಿರುವುದು ಏಕೆ ಎಂಬುದನ್ನು ಸ್ಪಷ್ಟಪಡಿಸದೇ ಇರುವುದು ಈ ಪ್ರಶ್ನೆಗಳು ಉದ್ಭವಿಸಲು ಕಾರಣವಾಗಿದೆ' ಎಂದು ಹೇಳಿದರು.<br /> <br /> ಸಮ್ಮೇಳನವನ್ನು ಕವಿವಿ ಕುಲಪತಿ ಡಾ.ಎಚ್.ಬಿ.ವಾಲೀಕಾರ ಉದ್ಘಾಟಿಸಿದರು. ಸಮ್ಮೇಳನದ ಕಾರ್ಯಾಧ್ಯಕ್ಷ ಡಾ. ಜೆ.ಎಂ.ನಾಗಯ್ಯ, ಕಾರ್ಯದರ್ಶಿ ಡಾ.ಪಿ.ಕೆ.ರಾಠೋಡ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>