<p><strong>ಬೆಂಗಳೂರು</strong>: ತೀವ್ರ ಕುತೂಹಲ ಕೆರಳಿಸಿದ್ದ ಹೆಬ್ಬಾಳ, ದೇವದುರ್ಗ ಹಾಗೂ ಬೀದರ್ ಕ್ಷೇತ್ರದ ಉಪ ಚುನಾವಣಾ ಫಲಿತಾಂಶ ಹೊರ ಬಿದ್ದಿದ್ದು, ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದೆ.<br /> <br /> ಫೆಬ್ರುವರಿ 13ರಂದು ಚುನಾವಣೆ ನಡೆದಿದ್ದ ಈ ಕ್ಷೇತ್ರಗಳಲ್ಲಿ ಜೆಡಿಎಸ್ ತೀವ್ರ ಹಿನ್ನಡೆ ಕಂಡಿದೆ. ಬೀದರಿನಲ್ಲಿ ಠೇವಣಿ ಕಳೆದುಕೊಂಡ ಬಗ್ಗೆ ವರದಿಯಾಗಿದೆ.<br /> <br /> <strong>ಹೆಬ್ಬಾಳ: </strong>ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣ ಸ್ವಾಮಿ ಅವರು 19,149 ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ. ಈ ಮೂಲಕ ಕೇಸರಿ ಪಕ್ಷವು ತನ್ನ ಸ್ಥಾನವನ್ನು ಉಳಿಸಿಕೊಂಡಿದೆ.<br /> <br /> ಆದರೆ, ಹೆಬ್ಬಾಳವನ್ನು ಪ್ರತಿಷ್ಠೆಯ ಕಣವಾಗಿ ಪರಿಗಣಿಸಿದ್ದ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ರೆಹಮಾನ್ ಷರೀಫ್ ಅವರು ಭಾರಿ ಅಂತರದಿಂದ ಸೋಲು ಕಂಡಿದ್ದಾರೆ.<br /> <br /> ಹೆಬ್ಬಾಳವು ಬಿಜೆಪಿ ಶಾಸಕ ಜಗದೀಶ್ ಕುಮಾರ್ ಅವರ ನಿಧನದಿಂದ ತೆರವಾಗಿತ್ತು. ಒಟ್ಟು 2,43,703 ಮತದಾರರ ಪೈಕಿ ಚುನಾವಣೆಯಲ್ಲಿ 1,08,337 ಜನರು ತಮ್ಮ ಹಕ್ಕು ಚಲಾಯಿಸಿದ್ದರು.<br /> <br /> <strong>ಪ್ರಮುಖ ಅಭ್ಯರ್ಥಿಗಳು ಪಡೆದ ಮತಗಳ ವಿವರ</strong><br /> ವೈ.ಎ.ನಾರಾಯಣಸ್ವಾಮಿ (ಬಿಜೆಪಿ): 60,367<br /> ರೆಹಮಾನ್ ಷರೀಫ್(ಕಾಂಗ್ರೆಸ್): 41,218<br /> ಇಸ್ಮಾಯಿಲ್ ಷರೀಫ್ (ಜೆಡಿಎಸ್): 3,666<br /> ನೋಟಾ ಮತಗಳು: 596<br /> <br /> <strong>ದೇವದುರ್ಗ</strong>: ಈ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್ ವಿಫಲವಾಗಿದ್ದು, ಬಿಜೆಪಿ ಮೇಲುಗೈ ಸಾಧಸಿದೆ. ಬಿಜೆಪಿಯ ಕೆ.ಶಿವನಗೌಡ ನಾಯಕ್ ಅವರು 16,871 ಮತಗಳಿಂದ ಗೆಲುವು ಕಂಡಿದ್ದಾರೆ.<br /> <br /> ರಾಯಚೂರಿನ ಇನ್ಸ್ಯಾಂಟ್ ಜಿಸಸ್ ಶೈಕ್ಷಣಿಕ ಸಂಸ್ಥೆಯ ಹೈಸ್ಕೂಲ್ನಲ್ಲಿ ನಡೆದ ಮತ ಎಣಿಕೆಯಲ್ಲಿ ಮೊದಲ ಸುತ್ತಿನಿಂದಲೂ ಮುನ್ನಡೆ ಪಡೆದಿದ್ದ ಶಿವನಗೌಡ ಅವರು ಕೊನೆಯ ಹಂತದ ವರೆಗೂ ಅಮೋಘ ಮುನ್ನಡೆ ಉಳಿಸಿಕೊಂಡು ಜಯಿಸಿದ್ದಾರೆ.<br /> <br /> ಕಾಂಗ್ರೆಸ್ ಅಭ್ಯರ್ಥಿ ಎ.ರಾಜಶೇಖರ್ ನಾಯಕ್ ಅವರು ಎರಡನೇ ಸ್ಥಾನ ಹಾಗೂ ಜೆಡಿಎಸ್ನ ಕರೆಮ್ಮ ಅವರು ಮೂರನೇ ಸ್ಥಾನದಲ್ಲಿದ್ದಾರೆ.<br /> ಕಾಂಗ್ರೆಸ್ ಶಾಸಕ ವೆಂಕಟೇಶ್ ನಾಯಕ್ ಅವರ ನಿಧನದಿಂದ ದೇವದುರ್ಗ ಕ್ಷೇತ್ರವು ಖಾಲಿಯಾಗಿತ್ತು. ಕಾಂಗ್ರೆಸ್ ವೆಂಕಟೇಶ್ ಅವರ ಪುತ್ರ ರಾಜಶೇಖರ್ ಅವರನ್ನು ಕಣಕ್ಕಿಳಿಸಿದರೂ ಅನುಕಂಪ ಗಿಟ್ಟಿಲ್ಲ.<br /> <br /> <strong>ಪ್ರಮುಖ ಅಭ್ಯರ್ಥಿಗಳು ಪಡೆದ ಮತಗಳ ವಿವರ</strong><br /> ಕೆ.ಶಿವನಗೌಡ ನಾಯಕ್ (ಬಿಜೆಪಿ): 72,647<br /> ಎ.ರಾಜಶೇಖರ್ ನಾಯಕ್(ಕಾಂಗ್ರೆಸ್): 55,776<br /> ಕರೆಮ್ಮ ನಾಯಕ್ (ಜೆಡಿಎಸ್): 9,156<br /> ನೋಟಾ: 1708<br /> ಅಂಚೆ ಮತ ತಿರಸ್ಕೃತ: 02<br /> <br /> <strong>ಬೀದರ್:</strong> ಕೆಜೆಪಿಯ ಗುರುಪಾದಪ್ಪ ನಾಗಮಾರಪಳ್ಳಿ ಅವರ ನಿಧನದಿಂದ ತೆರವಾಗಿದ್ದ ಸ್ಥಾನದಲ್ಲಿ ಕಾಂಗ್ರೆಸ್ ಜಯಿಸಿದೆ.<br /> <br /> ಬಿ.ವಿ. ಭೂಮರೆಡ್ಡಿ ಕಾಲೇಜಿನಲ್ಲಿ ನಡೆದ ಮತ ಎಣಿಕೆಯಲ್ಲಿ ಮೊದಲ ಸುತ್ತಿನಿಂದಲೂ ಮುನ್ನಡೆ ಕಾಯ್ದುಕೊಂಡು ಬಂದ ಕಾಂಗ್ರೆಸ್ನ ರಹೀಂ ಖಾನ್, 22,721 ಮತಗಳ ಅಂತರದಿಂದ ಅಮೋಘ ಗೆಲುವು ಕಂಡಿದ್ದಾರೆ.<br /> <br /> ಬಿಜೆಪಿ ಅಭ್ಯರ್ಥಿ ಪ್ರಕಾಶ್ ಖಂಡ್ರೆ ಎರಡನೇ ಸ್ಥಾನದಲ್ಲಿದ್ದಾರೆ. ಜೆಡಿಎಸ್ ಮೂರನೇ ಸ್ಥಾನದಲ್ಲಿದೆ.<br /> <br /> <strong>ಪ್ರಮುಖ ಅಭ್ಯರ್ಥಿಗಳು ಪಡೆದ ಮತ ವಿವರ</strong><br /> ರಹೀಂ ಖಾನ್ (ಕಾಂಗ್ರೆಸ್): 70,138<br /> ಪ್ರಕಾಶ್ ಖಂಡ್ರೆ (ಬಿಜೆಪಿ): 47,417<br /> ಮೊಹಮ್ಮದ್ ಅಯಾಜ್ ಖಾನ್(ಜೆಡಿಎಸ್): 4421</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ತೀವ್ರ ಕುತೂಹಲ ಕೆರಳಿಸಿದ್ದ ಹೆಬ್ಬಾಳ, ದೇವದುರ್ಗ ಹಾಗೂ ಬೀದರ್ ಕ್ಷೇತ್ರದ ಉಪ ಚುನಾವಣಾ ಫಲಿತಾಂಶ ಹೊರ ಬಿದ್ದಿದ್ದು, ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದೆ.<br /> <br /> ಫೆಬ್ರುವರಿ 13ರಂದು ಚುನಾವಣೆ ನಡೆದಿದ್ದ ಈ ಕ್ಷೇತ್ರಗಳಲ್ಲಿ ಜೆಡಿಎಸ್ ತೀವ್ರ ಹಿನ್ನಡೆ ಕಂಡಿದೆ. ಬೀದರಿನಲ್ಲಿ ಠೇವಣಿ ಕಳೆದುಕೊಂಡ ಬಗ್ಗೆ ವರದಿಯಾಗಿದೆ.<br /> <br /> <strong>ಹೆಬ್ಬಾಳ: </strong>ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣ ಸ್ವಾಮಿ ಅವರು 19,149 ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ. ಈ ಮೂಲಕ ಕೇಸರಿ ಪಕ್ಷವು ತನ್ನ ಸ್ಥಾನವನ್ನು ಉಳಿಸಿಕೊಂಡಿದೆ.<br /> <br /> ಆದರೆ, ಹೆಬ್ಬಾಳವನ್ನು ಪ್ರತಿಷ್ಠೆಯ ಕಣವಾಗಿ ಪರಿಗಣಿಸಿದ್ದ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ರೆಹಮಾನ್ ಷರೀಫ್ ಅವರು ಭಾರಿ ಅಂತರದಿಂದ ಸೋಲು ಕಂಡಿದ್ದಾರೆ.<br /> <br /> ಹೆಬ್ಬಾಳವು ಬಿಜೆಪಿ ಶಾಸಕ ಜಗದೀಶ್ ಕುಮಾರ್ ಅವರ ನಿಧನದಿಂದ ತೆರವಾಗಿತ್ತು. ಒಟ್ಟು 2,43,703 ಮತದಾರರ ಪೈಕಿ ಚುನಾವಣೆಯಲ್ಲಿ 1,08,337 ಜನರು ತಮ್ಮ ಹಕ್ಕು ಚಲಾಯಿಸಿದ್ದರು.<br /> <br /> <strong>ಪ್ರಮುಖ ಅಭ್ಯರ್ಥಿಗಳು ಪಡೆದ ಮತಗಳ ವಿವರ</strong><br /> ವೈ.ಎ.ನಾರಾಯಣಸ್ವಾಮಿ (ಬಿಜೆಪಿ): 60,367<br /> ರೆಹಮಾನ್ ಷರೀಫ್(ಕಾಂಗ್ರೆಸ್): 41,218<br /> ಇಸ್ಮಾಯಿಲ್ ಷರೀಫ್ (ಜೆಡಿಎಸ್): 3,666<br /> ನೋಟಾ ಮತಗಳು: 596<br /> <br /> <strong>ದೇವದುರ್ಗ</strong>: ಈ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್ ವಿಫಲವಾಗಿದ್ದು, ಬಿಜೆಪಿ ಮೇಲುಗೈ ಸಾಧಸಿದೆ. ಬಿಜೆಪಿಯ ಕೆ.ಶಿವನಗೌಡ ನಾಯಕ್ ಅವರು 16,871 ಮತಗಳಿಂದ ಗೆಲುವು ಕಂಡಿದ್ದಾರೆ.<br /> <br /> ರಾಯಚೂರಿನ ಇನ್ಸ್ಯಾಂಟ್ ಜಿಸಸ್ ಶೈಕ್ಷಣಿಕ ಸಂಸ್ಥೆಯ ಹೈಸ್ಕೂಲ್ನಲ್ಲಿ ನಡೆದ ಮತ ಎಣಿಕೆಯಲ್ಲಿ ಮೊದಲ ಸುತ್ತಿನಿಂದಲೂ ಮುನ್ನಡೆ ಪಡೆದಿದ್ದ ಶಿವನಗೌಡ ಅವರು ಕೊನೆಯ ಹಂತದ ವರೆಗೂ ಅಮೋಘ ಮುನ್ನಡೆ ಉಳಿಸಿಕೊಂಡು ಜಯಿಸಿದ್ದಾರೆ.<br /> <br /> ಕಾಂಗ್ರೆಸ್ ಅಭ್ಯರ್ಥಿ ಎ.ರಾಜಶೇಖರ್ ನಾಯಕ್ ಅವರು ಎರಡನೇ ಸ್ಥಾನ ಹಾಗೂ ಜೆಡಿಎಸ್ನ ಕರೆಮ್ಮ ಅವರು ಮೂರನೇ ಸ್ಥಾನದಲ್ಲಿದ್ದಾರೆ.<br /> ಕಾಂಗ್ರೆಸ್ ಶಾಸಕ ವೆಂಕಟೇಶ್ ನಾಯಕ್ ಅವರ ನಿಧನದಿಂದ ದೇವದುರ್ಗ ಕ್ಷೇತ್ರವು ಖಾಲಿಯಾಗಿತ್ತು. ಕಾಂಗ್ರೆಸ್ ವೆಂಕಟೇಶ್ ಅವರ ಪುತ್ರ ರಾಜಶೇಖರ್ ಅವರನ್ನು ಕಣಕ್ಕಿಳಿಸಿದರೂ ಅನುಕಂಪ ಗಿಟ್ಟಿಲ್ಲ.<br /> <br /> <strong>ಪ್ರಮುಖ ಅಭ್ಯರ್ಥಿಗಳು ಪಡೆದ ಮತಗಳ ವಿವರ</strong><br /> ಕೆ.ಶಿವನಗೌಡ ನಾಯಕ್ (ಬಿಜೆಪಿ): 72,647<br /> ಎ.ರಾಜಶೇಖರ್ ನಾಯಕ್(ಕಾಂಗ್ರೆಸ್): 55,776<br /> ಕರೆಮ್ಮ ನಾಯಕ್ (ಜೆಡಿಎಸ್): 9,156<br /> ನೋಟಾ: 1708<br /> ಅಂಚೆ ಮತ ತಿರಸ್ಕೃತ: 02<br /> <br /> <strong>ಬೀದರ್:</strong> ಕೆಜೆಪಿಯ ಗುರುಪಾದಪ್ಪ ನಾಗಮಾರಪಳ್ಳಿ ಅವರ ನಿಧನದಿಂದ ತೆರವಾಗಿದ್ದ ಸ್ಥಾನದಲ್ಲಿ ಕಾಂಗ್ರೆಸ್ ಜಯಿಸಿದೆ.<br /> <br /> ಬಿ.ವಿ. ಭೂಮರೆಡ್ಡಿ ಕಾಲೇಜಿನಲ್ಲಿ ನಡೆದ ಮತ ಎಣಿಕೆಯಲ್ಲಿ ಮೊದಲ ಸುತ್ತಿನಿಂದಲೂ ಮುನ್ನಡೆ ಕಾಯ್ದುಕೊಂಡು ಬಂದ ಕಾಂಗ್ರೆಸ್ನ ರಹೀಂ ಖಾನ್, 22,721 ಮತಗಳ ಅಂತರದಿಂದ ಅಮೋಘ ಗೆಲುವು ಕಂಡಿದ್ದಾರೆ.<br /> <br /> ಬಿಜೆಪಿ ಅಭ್ಯರ್ಥಿ ಪ್ರಕಾಶ್ ಖಂಡ್ರೆ ಎರಡನೇ ಸ್ಥಾನದಲ್ಲಿದ್ದಾರೆ. ಜೆಡಿಎಸ್ ಮೂರನೇ ಸ್ಥಾನದಲ್ಲಿದೆ.<br /> <br /> <strong>ಪ್ರಮುಖ ಅಭ್ಯರ್ಥಿಗಳು ಪಡೆದ ಮತ ವಿವರ</strong><br /> ರಹೀಂ ಖಾನ್ (ಕಾಂಗ್ರೆಸ್): 70,138<br /> ಪ್ರಕಾಶ್ ಖಂಡ್ರೆ (ಬಿಜೆಪಿ): 47,417<br /> ಮೊಹಮ್ಮದ್ ಅಯಾಜ್ ಖಾನ್(ಜೆಡಿಎಸ್): 4421</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>