<p><strong>ಬೆಂಗಳೂರು (ಪಿಟಿಐ):</strong> ನಟ ದರ್ಶನ್ ಕುಟುಂಬ ಕಲಹದ ಹಿನ್ನೆಲೆಯಲ್ಲಿ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘವು ನಟಿ ನಿಖಿತಾ ಮೇಲೆ ಹೇರಿದ್ದ ಮೂರು ವರ್ಷಗಳ ನಿಷೇಧವನ್ನು ಗುರುವಾರ ವಾಪಸ್ ತೆಗೆದುಕೊಂಡಿದೆ.<br /> <br /> ನಿಷೇಧ ಹೇರಿದ್ದ ಕ್ರಮಕ್ಕೆ ನಿಖಿತಾ ಅವರಲ್ಲಿ ಕ್ಷಮೆ ಕೇಳಿರುವ ಸಂಘವು ಇದೊಂದು ಆತುರದ ಕ್ರಮವೆಂದು ಹೇಳಿದೆ. <br /> <br /> ಸಂಘದ ಅಧ್ಯಕ್ಷ ಮುನಿರತ್ನ ನಾಯ್ಡು ಅವರು ನಿಖಿತಾ ಮೇಲೆ ನಿಷೇಧ ಹೇರಿದ್ದು ಆತುರದ ಹಾಗೂ ಮೂರ್ಖತನದ ಕ್ರಮವಾಗಿತ್ತು. ಒಳ್ಳೆಯ ನಡವಳಿಕೆ ಹೊಂದಿರುವ ಅವರು ಇದೀಗ ಕನ್ನಡ ಭಾಷೆಯ ಯಾವುದೇ ಸಿನಿಮಾದಲ್ಲೂ ನಟಿಸಬಹುದು ಎಂದು ಸುದ್ದಿಗಾರರಿಗೆ ತಿಳಿಸಿದರು.</p>.<p>ಪತ್ನಿ ಮೇಲೆ ಹಲ್ಲೆ ನಡೆಸಿ ನಟ ದರ್ಶನ್ ಬಂಧಿತರಾದ ನಂತರ <a href="http://www.prajavani.net/web/include/story.php?news=40135&section=2&menuid=10">ನಟಿ ನಿಖಿತಾ ಮೇಲೆ ನಿರ್ಮಾಪಕರ ಸಂಘವು ನಿಷೇಧ ಹೇರಿತ್ತು.</a> ನಂತರ ಇದಕ್ಕೆ ಭಾರಿ <a href="http://www.prajavani.net/web/include/story.php?news=40689&section=5&menuid=10">ವಿರೋಧ</a> ವ್ಯಕ್ತವಾಗಿತ್ತು. <a href="http://www.prajavani.net/web/include/story.php?news=40683&section=3&menuid=10">ನಟ ಶಿವರಾಜ್ ಕುಮಾರ್ ಸಹ ಈ ಕ್ರಮವನ್ನು ಖಂಡಿಸಿದ್ದರು.</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು (ಪಿಟಿಐ):</strong> ನಟ ದರ್ಶನ್ ಕುಟುಂಬ ಕಲಹದ ಹಿನ್ನೆಲೆಯಲ್ಲಿ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘವು ನಟಿ ನಿಖಿತಾ ಮೇಲೆ ಹೇರಿದ್ದ ಮೂರು ವರ್ಷಗಳ ನಿಷೇಧವನ್ನು ಗುರುವಾರ ವಾಪಸ್ ತೆಗೆದುಕೊಂಡಿದೆ.<br /> <br /> ನಿಷೇಧ ಹೇರಿದ್ದ ಕ್ರಮಕ್ಕೆ ನಿಖಿತಾ ಅವರಲ್ಲಿ ಕ್ಷಮೆ ಕೇಳಿರುವ ಸಂಘವು ಇದೊಂದು ಆತುರದ ಕ್ರಮವೆಂದು ಹೇಳಿದೆ. <br /> <br /> ಸಂಘದ ಅಧ್ಯಕ್ಷ ಮುನಿರತ್ನ ನಾಯ್ಡು ಅವರು ನಿಖಿತಾ ಮೇಲೆ ನಿಷೇಧ ಹೇರಿದ್ದು ಆತುರದ ಹಾಗೂ ಮೂರ್ಖತನದ ಕ್ರಮವಾಗಿತ್ತು. ಒಳ್ಳೆಯ ನಡವಳಿಕೆ ಹೊಂದಿರುವ ಅವರು ಇದೀಗ ಕನ್ನಡ ಭಾಷೆಯ ಯಾವುದೇ ಸಿನಿಮಾದಲ್ಲೂ ನಟಿಸಬಹುದು ಎಂದು ಸುದ್ದಿಗಾರರಿಗೆ ತಿಳಿಸಿದರು.</p>.<p>ಪತ್ನಿ ಮೇಲೆ ಹಲ್ಲೆ ನಡೆಸಿ ನಟ ದರ್ಶನ್ ಬಂಧಿತರಾದ ನಂತರ <a href="http://www.prajavani.net/web/include/story.php?news=40135&section=2&menuid=10">ನಟಿ ನಿಖಿತಾ ಮೇಲೆ ನಿರ್ಮಾಪಕರ ಸಂಘವು ನಿಷೇಧ ಹೇರಿತ್ತು.</a> ನಂತರ ಇದಕ್ಕೆ ಭಾರಿ <a href="http://www.prajavani.net/web/include/story.php?news=40689&section=5&menuid=10">ವಿರೋಧ</a> ವ್ಯಕ್ತವಾಗಿತ್ತು. <a href="http://www.prajavani.net/web/include/story.php?news=40683&section=3&menuid=10">ನಟ ಶಿವರಾಜ್ ಕುಮಾರ್ ಸಹ ಈ ಕ್ರಮವನ್ನು ಖಂಡಿಸಿದ್ದರು.</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>