<p><strong>ಚಾಮರಾಜನಗರ:</strong> `ಸಿನಿಮಾ ನಷ್ಟ ಅನುಭವಿಸಿದರೆ ಚಿತ್ರಮಂದಿರದ ಮಾಲೀಕರಿಗೆ ಮುಂಗಡ ಹಣ ವಾಪಸ್ ನೀಡಲು ನಿರ್ಮಾಪಕರು ಮತ್ತು ವಿತರಕರು ಸಿದ್ಧರಿಲ್ಲ. ಹೀಗಾಗಿ, ಸಂಕಷ್ಟ ಎದುರಿಸುವಂತಾಗಿದೆ~ ಎಂದು ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಳದ ಅಧ್ಯಕ್ಷ ಆರ್.ಆರ್. ಓದುಗೌಡರ್ ದೂರಿದರು.<br /> <br /> ತಾಲ್ಲೂಕಿನ ಹೊಂಡರಬಾಳು ಗ್ರಾಮದಲ್ಲಿ ಮಂಗಳವಾರ ನಡೆದ ಮಹಾಮಂಡಳದ 7ನೇ ತ್ರೈಮಾಸಿಕ ಸಭೆಗೂ ಮೊದಲು ಪತ್ರಕರ್ತರೊಂದಿಗೆ ಮಾತನಾಡಿದರು.<br /> <br /> `ಚಿತ್ರಮಂದಿರದಲ್ಲಿ ಯಾವುದೇ ಸಿನಿಮಾ ಪ್ರದರ್ಶನಕ್ಕೂ ಮೊದಲು ನಿರ್ಮಾಪಕರು ಮತ್ತು ವಿತರಕರಿಗೆ ಮುಂಗಡ ಹಣ ನೀಡಬೇಕಿದೆ. ಆದರೆ, ಕೆಲವು ಸಿನಿಮಾಗಳು ಉತ್ತಮ ಪ್ರದರ್ಶನ ಕಾಣುವುದಿಲ್ಲ. ಅಂತಹ ಸಿನಿಮಾಗಳನ್ನು ಚಿತ್ರಮಂದಿರದಿಂದ ತೆಗೆದು ಬೇರೆ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. <br /> <br /> ಕನಿಷ್ಠ ಮುಂಗಡ ಹಣ ವಾಪಸ್ ನೀಡಿದರೆ ಪ್ರದರ್ಶಕರು ಬದುಕುತ್ತಾರೆ. ಅಂತಹ ವಾತಾವರಣವೇ ಇಲ್ಲ. ಪ್ರದರ್ಶಕರ ಕೂಗಿಗೆ ನಿರ್ಮಾಪಕರು ಹಾಗೂ ವಿತರಕರು ಸ್ಪಂದಿಸುತ್ತಿಲ್ಲ~ ಎಂದು ದೂರಿದರು. <br /> <br /> ಕನಿಷ್ಠ 8 ವಾರಗಳ ಕಾಲ ಪ್ರದರ್ಶನ ಕಾಣುವ ಸಿನಿಮಾಗಳು ಬರುತ್ತಿರುವುದು ಅಪರೂಪ. ಯಾವುದೇ, ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದ್ದರೆ ಚಿತ್ರಮಂದಿರದಿಂದ ಎತ್ತಂಗಡಿ ಮಾಡುವುದಿಲ್ಲ. ಆದರೆ, ಕೆಲವು ವೇಳೆ ಬೇರೆ ಸಿನಿಮಾಗಳ ಪ್ರದರ್ಶನಕ್ಕೆ ಒಪ್ಪಂದವಾಗಿರುತ್ತದೆ. ಈ ಬಗ್ಗೆ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿರುವ ಸಿನಿಮಾದ ನಿರ್ಮಾಪಕರಿಗೂ ಮಾಹಿತಿ ನೀಡಿರುತ್ತೇವೆ. ಸತ್ಯ ಮರೆಮಾಚಿ ಪ್ರದರ್ಶಕರನ್ನು ಇಕ್ಕಟ್ಟಿಗೆ ಸಿಲುಕಿಸಲಾಗುತ್ತಿದೆ ಎಂದು ಟೀಕಿಸಿದರು. <br /> <br /> ಕನ್ನಡ ಚಿತ್ರರಂಗದಲ್ಲಿ `ಬ್ಯಾನ್~ ಪದಕ್ಕೆ ನಿಷೇಧ ಹೇರಬೇಕಿದೆ. ಯಾವುದೇ, ಕಲಾವಿದರಿಗೆ ನಿಷೇಧ ಹೇರುವುದಕ್ಕೆ ಮಹಾಮಂಡಳದ ವಿರೋಧವಿದೆ. ಈಗಾಗಲೇ, ನಟಿ ನಿಖಿತಾ ಮೇಲಿನ ನಿಷೇಧದ ವಿಚಾರ ಅಂತ್ಯ ಕಂಡಿದೆ. ಈ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಆದರೆ, ಹೆಂಡತಿ ಮೇಲೆ ನಟ ದರ್ಶನ್ ಅವರು ದೌರ್ಜನ್ಯ ನಡೆಸಿರುವುದನ್ನು ಮಹಾಮಂಡಳ ಖಂಡಿಸುತ್ತದೆ ಎಂದರು.<br /> <br /> ಪ್ರಸ್ತುತ ಪ್ರದರ್ಶಕರು ಮತ್ತು ಚಿತ್ರಮಂದಿರದ ಪರವಾನಗಿ ನವೀಕರಣ ಅವಧಿಯನ್ನು ಮೂರು ವರ್ಷಕ್ಕೆ ನಿಗದಿಪಡಿಸಲಾಗಿದೆ. ಇದನ್ನು ಎಷ್ಟು ವರ್ಷಕ್ಕೆ ಹೆಚ್ಚಿಸಬೇಕೆಂಬ ಬಗ್ಗೆ ಸಭೆಯಲ್ಲಿ ನಿರ್ಣಯಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ:</strong> `ಸಿನಿಮಾ ನಷ್ಟ ಅನುಭವಿಸಿದರೆ ಚಿತ್ರಮಂದಿರದ ಮಾಲೀಕರಿಗೆ ಮುಂಗಡ ಹಣ ವಾಪಸ್ ನೀಡಲು ನಿರ್ಮಾಪಕರು ಮತ್ತು ವಿತರಕರು ಸಿದ್ಧರಿಲ್ಲ. ಹೀಗಾಗಿ, ಸಂಕಷ್ಟ ಎದುರಿಸುವಂತಾಗಿದೆ~ ಎಂದು ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಳದ ಅಧ್ಯಕ್ಷ ಆರ್.ಆರ್. ಓದುಗೌಡರ್ ದೂರಿದರು.<br /> <br /> ತಾಲ್ಲೂಕಿನ ಹೊಂಡರಬಾಳು ಗ್ರಾಮದಲ್ಲಿ ಮಂಗಳವಾರ ನಡೆದ ಮಹಾಮಂಡಳದ 7ನೇ ತ್ರೈಮಾಸಿಕ ಸಭೆಗೂ ಮೊದಲು ಪತ್ರಕರ್ತರೊಂದಿಗೆ ಮಾತನಾಡಿದರು.<br /> <br /> `ಚಿತ್ರಮಂದಿರದಲ್ಲಿ ಯಾವುದೇ ಸಿನಿಮಾ ಪ್ರದರ್ಶನಕ್ಕೂ ಮೊದಲು ನಿರ್ಮಾಪಕರು ಮತ್ತು ವಿತರಕರಿಗೆ ಮುಂಗಡ ಹಣ ನೀಡಬೇಕಿದೆ. ಆದರೆ, ಕೆಲವು ಸಿನಿಮಾಗಳು ಉತ್ತಮ ಪ್ರದರ್ಶನ ಕಾಣುವುದಿಲ್ಲ. ಅಂತಹ ಸಿನಿಮಾಗಳನ್ನು ಚಿತ್ರಮಂದಿರದಿಂದ ತೆಗೆದು ಬೇರೆ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. <br /> <br /> ಕನಿಷ್ಠ ಮುಂಗಡ ಹಣ ವಾಪಸ್ ನೀಡಿದರೆ ಪ್ರದರ್ಶಕರು ಬದುಕುತ್ತಾರೆ. ಅಂತಹ ವಾತಾವರಣವೇ ಇಲ್ಲ. ಪ್ರದರ್ಶಕರ ಕೂಗಿಗೆ ನಿರ್ಮಾಪಕರು ಹಾಗೂ ವಿತರಕರು ಸ್ಪಂದಿಸುತ್ತಿಲ್ಲ~ ಎಂದು ದೂರಿದರು. <br /> <br /> ಕನಿಷ್ಠ 8 ವಾರಗಳ ಕಾಲ ಪ್ರದರ್ಶನ ಕಾಣುವ ಸಿನಿಮಾಗಳು ಬರುತ್ತಿರುವುದು ಅಪರೂಪ. ಯಾವುದೇ, ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದ್ದರೆ ಚಿತ್ರಮಂದಿರದಿಂದ ಎತ್ತಂಗಡಿ ಮಾಡುವುದಿಲ್ಲ. ಆದರೆ, ಕೆಲವು ವೇಳೆ ಬೇರೆ ಸಿನಿಮಾಗಳ ಪ್ರದರ್ಶನಕ್ಕೆ ಒಪ್ಪಂದವಾಗಿರುತ್ತದೆ. ಈ ಬಗ್ಗೆ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿರುವ ಸಿನಿಮಾದ ನಿರ್ಮಾಪಕರಿಗೂ ಮಾಹಿತಿ ನೀಡಿರುತ್ತೇವೆ. ಸತ್ಯ ಮರೆಮಾಚಿ ಪ್ರದರ್ಶಕರನ್ನು ಇಕ್ಕಟ್ಟಿಗೆ ಸಿಲುಕಿಸಲಾಗುತ್ತಿದೆ ಎಂದು ಟೀಕಿಸಿದರು. <br /> <br /> ಕನ್ನಡ ಚಿತ್ರರಂಗದಲ್ಲಿ `ಬ್ಯಾನ್~ ಪದಕ್ಕೆ ನಿಷೇಧ ಹೇರಬೇಕಿದೆ. ಯಾವುದೇ, ಕಲಾವಿದರಿಗೆ ನಿಷೇಧ ಹೇರುವುದಕ್ಕೆ ಮಹಾಮಂಡಳದ ವಿರೋಧವಿದೆ. ಈಗಾಗಲೇ, ನಟಿ ನಿಖಿತಾ ಮೇಲಿನ ನಿಷೇಧದ ವಿಚಾರ ಅಂತ್ಯ ಕಂಡಿದೆ. ಈ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಆದರೆ, ಹೆಂಡತಿ ಮೇಲೆ ನಟ ದರ್ಶನ್ ಅವರು ದೌರ್ಜನ್ಯ ನಡೆಸಿರುವುದನ್ನು ಮಹಾಮಂಡಳ ಖಂಡಿಸುತ್ತದೆ ಎಂದರು.<br /> <br /> ಪ್ರಸ್ತುತ ಪ್ರದರ್ಶಕರು ಮತ್ತು ಚಿತ್ರಮಂದಿರದ ಪರವಾನಗಿ ನವೀಕರಣ ಅವಧಿಯನ್ನು ಮೂರು ವರ್ಷಕ್ಕೆ ನಿಗದಿಪಡಿಸಲಾಗಿದೆ. ಇದನ್ನು ಎಷ್ಟು ವರ್ಷಕ್ಕೆ ಹೆಚ್ಚಿಸಬೇಕೆಂಬ ಬಗ್ಗೆ ಸಭೆಯಲ್ಲಿ ನಿರ್ಣಯಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>