<p><strong>ಮೈಸೂರು: </strong>ಹನುಮ ಜಯಂತಿ ವೇಳೆ ಹುಣಸೂರಿನಲ್ಲಿ ಸಂಸದ ಪ್ರತಾಪಸಿಂಹ ತೋರಿದ ವರ್ತನೆ ಹಾಗೂ ನಂತರ ಅವರು ಫೇಸ್ಬುಕ್ನಲ್ಲಿ ಹಾಕಿದ ಪೋಸ್ಟ್ಗಳಿಗೆ ನೆಟ್ಟಿಗರಿಂದ ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.</p>.<p>ಪ್ರತಾಪಸಿಂಹ ಅವರನ್ನು ‘ಅಂತ’ ಸಿನಿಮಾದಲ್ಲಿ ಸರಪಳಿಯಿಂದ ಬಂಧಿಯಾಗಿ ಜೈಲಿನ ಬಳಿ ನಿಂತಿರುವ ಕನ್ವರ್ಲಾಲ್ ರೂಪದಲ್ಲಿ ಬಹಳಷ್ಟು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ‘ಗೂಂಡಾ ಸಂಸದ, ಪ್ರತಾಪನ ಅವಾಂತರ’ ಎಂದೂ ಟೀಕಾ ಪ್ರಹಾರ ನಡೆಸಿದ್ದಾರೆ.</p>.<p>‘ಸಿಂಹ ಎಂಬುದು ನಿಮ್ಮ ಮನೆಯವರು ಇಟ್ಟ ಹೆಸರು, ಸಿಂಗಂ ಎಂದು ಜನರು ಇಟ್ಟ ಹೆಸರು’ ಎಂದು ಪ್ರತಾಪಸಿಂಹ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ಅವರ ಭಾವಚಿತ್ರ ಹಾಕಿ ಪೋಸ್ಟ್ ಮಾಡಿದ್ದಾರೆ.</p>.<p>ಪ್ರತಾಪಸಿಂಹ ಮಂಗಳವಾರ ಫೇಸ್ಬುಕ್ನಲ್ಲಿ ರವಿ ಡಿ.ಚನ್ನಣ್ಣನವರನ್ನು ಟೀಕಿಸಿ ಹಾಕಿದ ವಿಡಿಯೊವನ್ನು ‘ಮತ್ತೊಮ್ಮೆ ಸಿದ್ದರಾಮಯ್ಯ–2018’ ಬಳಗದಲ್ಲಿ ‘ಉಗಿದು ಶೇರ್ ಮಾಡಿ’ ಎಂಬ ಶೀರ್ಷಿಕೆ ಬಳಸಿ ಶೇರ್ ಮಾಡಲಾಗಿದೆ.</p>.<p>‘ಪ್ರತಾಪ ಸಿಮ್ಮರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಹಾಗೆಯೇ ಸಂಸತ್ ಸದಸ್ಯರು’ ಎಂಬ ಸ್ಟೇಟಸ್ಗೆ ಕೆಲವರು ‘ಹಾಗೆನೇ ಭಾರಿಕೇಡಿಗ’ ಎಂದು ಕಾಲೆಳೆದಿದ್ದಾರೆ.</p>.<p>‘ಒಗ್ಗಟ್ಟಿನಲ್ಲಿ ಬಲ? ಇಕ್ಕಟ್ಟಿನಲ್ಲಿ ತಾಪತ್ರಯ? ಹುಣಸೂರಿನ ಹನುಮ ಇದೀಗ ಅನಾಥ?’ ಎಂಬ ಸ್ಟೇಟಸ್ಗಳ ಜತೆಗೆ ಪ್ರತಾಪಸಿಂಹ ಅವರನ್ನು ಅವಹೇಳನ ಮಾಡುವ ಸಾಕಷ್ಟು ಟ್ರೋಲ್ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.</p>.<p>ರವಿ ಡಿ.ಚನ್ನಣ್ಣನವರ್ ಅವರತ್ತಲೂ ನೆಟ್ಟಿಗರು ಟೀಕಾ ಪ್ರಹಾರ ನಡೆಸಿದ್ದಾರೆ. ‘ಪ್ರತಾಪಸಿಂಹ ಅವರ ಜಾಗದಲ್ಲಿ ಬೇರೊಬ್ಬ ಸಾಮಾನ್ಯ ಪ್ರಜೆ ಇದ್ದರೆ ಏನು ಮಾಡುತ್ತಿದ್ದೀರಿ’ ಎಂದು ಪ್ರಶ್ನಿಸಿದ್ದಾರೆ. ಪ್ರತಾಪಸಿಂಹ ಹಾಗೂ ರವಿ ಡಿ.ಚನ್ನಣ್ಣನವರ್ ಅವರ ಭಾವಚಿತ್ರಗಳನ್ನು ಅಕ್ಕಪಕ್ಕ ಹಾಕಿ ‘ಯಾರು ಹಿತವರು ಈ ಇಬ್ಬರೊಳಗೆ’ ಎಂದು ಟ್ರೋಲ್ ಮಾಡಲಾಗಿದೆ. ‘ಕೇಸ್ ಹಾಕಿದ್ದು ಓಕೆ... ಆದರೆ ಬಿಲ್ಡಪ್ ಯಾಕೆ? ಇಟ್ಸ್ ನಾಟ್ ಓಕೆ.... ಅಧಿಕಾರಿಗಳೇ ಜೋಕೆ?’ ಎಂಬ ಸ್ಟೇಟಸ್ ಕೂಡ ಇದೆ.</p>.<p>ಇಂತಹ ಟ್ರೋಲ್ಗಳ ಜತೆಗೆ ಹಲವು ಸಭ್ಯ ಪೋಸ್ಟ್ಗಳೂ ಇವೆ. ‘ಕರ್ತವ್ಯ ನಿರ್ವಹಿಸಿದ ಮೈಸೂರು ಜಿಲ್ಲೆಯ ಎಸ್ಪಿ ರವಿ ಚನ್ನಣ್ಣನವರನ್ನು ದೂಷಿಸುವುದು ನ್ಯಾಯಸಮ್ಮತವಲ್ಲ’ ಎಂದು ಸ್ಟೇಟಸ್ ಹಾಕಿದ್ದಾರೆ. ‘ಪ್ರತಾಪಸಿಂಹ ಹುಣಸೂರಿನ ವಿಧಾನಸಭೆಗೆ ಸ್ಪರ್ಧಿಸಲು ಯೋಚಿಸುತ್ತಿದ್ದಾರೆಯೆ?’ ಎಂದು ಕೆಲವರು ಪ್ರಶ್ನಿಸಿದ್ದಾರೆ.</p>.<p><strong>ಸಿಂಹಗೂ ಲೈಕ್ಗಳು:</strong></p>.<p>ಪ್ರತಾಪಸಿಂಹ ಅವರು ಮಂಗಳವಾರ ಎಸ್ಪಿ ರವಿ ಡಿ.ಚನ್ನಣ್ಣನವರ್ ಅವರನ್ನು ಗುರಿಯಾಗಿಸಿಕೊಂಡು ಹಾಕಿದ ಫೇಸ್ ಬುಕ್ ವಿಡಿಯೊಗೆ 500ಕ್ಕೂ ಹೆಚ್ಚಿನ ‘ಲೈಕ್’ಗಳು ಲಭಿಸಿವೆ.</p>.<p>‘ನಿಮ್ಮ ಕೆಲಸವನ್ನು ಬೆಂಬಲಿಸುತ್ತೇವೆ, ಒಳ್ಳೆಯ ಕೆಲಸ ಮಾಡಿದ್ದೀರಿ’ ಎಂದು ಹಲವರು ಶ್ಲಾಘಿಸಿದ್ದಾರೆ. ‘ಇಂತಹ ಸಂಸದ ನಮಗೆ ಬೇಕು’ ಎಂದು ಸ್ಟೇಟಸ್ ಹಾಕಿದ್ದಾರೆ.</p>.<p>‘ನನ್ನ ರಾಜಕೀಯ ಭವಿಷ್ಯಕ್ಕಿಂತ ನನ್ನ ಧರ್ಮ ಹಾಗೂ ಆಚರಣೆಗಳನ್ನು ಕಾಪಾಡುವುದೇ ಅತಿ ಮುಖ್ಯ’ ಎಂಬ ಪ್ರತಾಪಸಿಂಹ ಅವರ ಹೇಳಿಕೆಯನ್ನು ಭಾವಚಿತ್ರ ಸಹಿತ ಪೋಸ್ಟ್ ಮಾಡಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ಹನುಮ ಜಯಂತಿ ವೇಳೆ ಹುಣಸೂರಿನಲ್ಲಿ ಸಂಸದ ಪ್ರತಾಪಸಿಂಹ ತೋರಿದ ವರ್ತನೆ ಹಾಗೂ ನಂತರ ಅವರು ಫೇಸ್ಬುಕ್ನಲ್ಲಿ ಹಾಕಿದ ಪೋಸ್ಟ್ಗಳಿಗೆ ನೆಟ್ಟಿಗರಿಂದ ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.</p>.<p>ಪ್ರತಾಪಸಿಂಹ ಅವರನ್ನು ‘ಅಂತ’ ಸಿನಿಮಾದಲ್ಲಿ ಸರಪಳಿಯಿಂದ ಬಂಧಿಯಾಗಿ ಜೈಲಿನ ಬಳಿ ನಿಂತಿರುವ ಕನ್ವರ್ಲಾಲ್ ರೂಪದಲ್ಲಿ ಬಹಳಷ್ಟು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ‘ಗೂಂಡಾ ಸಂಸದ, ಪ್ರತಾಪನ ಅವಾಂತರ’ ಎಂದೂ ಟೀಕಾ ಪ್ರಹಾರ ನಡೆಸಿದ್ದಾರೆ.</p>.<p>‘ಸಿಂಹ ಎಂಬುದು ನಿಮ್ಮ ಮನೆಯವರು ಇಟ್ಟ ಹೆಸರು, ಸಿಂಗಂ ಎಂದು ಜನರು ಇಟ್ಟ ಹೆಸರು’ ಎಂದು ಪ್ರತಾಪಸಿಂಹ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ಅವರ ಭಾವಚಿತ್ರ ಹಾಕಿ ಪೋಸ್ಟ್ ಮಾಡಿದ್ದಾರೆ.</p>.<p>ಪ್ರತಾಪಸಿಂಹ ಮಂಗಳವಾರ ಫೇಸ್ಬುಕ್ನಲ್ಲಿ ರವಿ ಡಿ.ಚನ್ನಣ್ಣನವರನ್ನು ಟೀಕಿಸಿ ಹಾಕಿದ ವಿಡಿಯೊವನ್ನು ‘ಮತ್ತೊಮ್ಮೆ ಸಿದ್ದರಾಮಯ್ಯ–2018’ ಬಳಗದಲ್ಲಿ ‘ಉಗಿದು ಶೇರ್ ಮಾಡಿ’ ಎಂಬ ಶೀರ್ಷಿಕೆ ಬಳಸಿ ಶೇರ್ ಮಾಡಲಾಗಿದೆ.</p>.<p>‘ಪ್ರತಾಪ ಸಿಮ್ಮರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಹಾಗೆಯೇ ಸಂಸತ್ ಸದಸ್ಯರು’ ಎಂಬ ಸ್ಟೇಟಸ್ಗೆ ಕೆಲವರು ‘ಹಾಗೆನೇ ಭಾರಿಕೇಡಿಗ’ ಎಂದು ಕಾಲೆಳೆದಿದ್ದಾರೆ.</p>.<p>‘ಒಗ್ಗಟ್ಟಿನಲ್ಲಿ ಬಲ? ಇಕ್ಕಟ್ಟಿನಲ್ಲಿ ತಾಪತ್ರಯ? ಹುಣಸೂರಿನ ಹನುಮ ಇದೀಗ ಅನಾಥ?’ ಎಂಬ ಸ್ಟೇಟಸ್ಗಳ ಜತೆಗೆ ಪ್ರತಾಪಸಿಂಹ ಅವರನ್ನು ಅವಹೇಳನ ಮಾಡುವ ಸಾಕಷ್ಟು ಟ್ರೋಲ್ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.</p>.<p>ರವಿ ಡಿ.ಚನ್ನಣ್ಣನವರ್ ಅವರತ್ತಲೂ ನೆಟ್ಟಿಗರು ಟೀಕಾ ಪ್ರಹಾರ ನಡೆಸಿದ್ದಾರೆ. ‘ಪ್ರತಾಪಸಿಂಹ ಅವರ ಜಾಗದಲ್ಲಿ ಬೇರೊಬ್ಬ ಸಾಮಾನ್ಯ ಪ್ರಜೆ ಇದ್ದರೆ ಏನು ಮಾಡುತ್ತಿದ್ದೀರಿ’ ಎಂದು ಪ್ರಶ್ನಿಸಿದ್ದಾರೆ. ಪ್ರತಾಪಸಿಂಹ ಹಾಗೂ ರವಿ ಡಿ.ಚನ್ನಣ್ಣನವರ್ ಅವರ ಭಾವಚಿತ್ರಗಳನ್ನು ಅಕ್ಕಪಕ್ಕ ಹಾಕಿ ‘ಯಾರು ಹಿತವರು ಈ ಇಬ್ಬರೊಳಗೆ’ ಎಂದು ಟ್ರೋಲ್ ಮಾಡಲಾಗಿದೆ. ‘ಕೇಸ್ ಹಾಕಿದ್ದು ಓಕೆ... ಆದರೆ ಬಿಲ್ಡಪ್ ಯಾಕೆ? ಇಟ್ಸ್ ನಾಟ್ ಓಕೆ.... ಅಧಿಕಾರಿಗಳೇ ಜೋಕೆ?’ ಎಂಬ ಸ್ಟೇಟಸ್ ಕೂಡ ಇದೆ.</p>.<p>ಇಂತಹ ಟ್ರೋಲ್ಗಳ ಜತೆಗೆ ಹಲವು ಸಭ್ಯ ಪೋಸ್ಟ್ಗಳೂ ಇವೆ. ‘ಕರ್ತವ್ಯ ನಿರ್ವಹಿಸಿದ ಮೈಸೂರು ಜಿಲ್ಲೆಯ ಎಸ್ಪಿ ರವಿ ಚನ್ನಣ್ಣನವರನ್ನು ದೂಷಿಸುವುದು ನ್ಯಾಯಸಮ್ಮತವಲ್ಲ’ ಎಂದು ಸ್ಟೇಟಸ್ ಹಾಕಿದ್ದಾರೆ. ‘ಪ್ರತಾಪಸಿಂಹ ಹುಣಸೂರಿನ ವಿಧಾನಸಭೆಗೆ ಸ್ಪರ್ಧಿಸಲು ಯೋಚಿಸುತ್ತಿದ್ದಾರೆಯೆ?’ ಎಂದು ಕೆಲವರು ಪ್ರಶ್ನಿಸಿದ್ದಾರೆ.</p>.<p><strong>ಸಿಂಹಗೂ ಲೈಕ್ಗಳು:</strong></p>.<p>ಪ್ರತಾಪಸಿಂಹ ಅವರು ಮಂಗಳವಾರ ಎಸ್ಪಿ ರವಿ ಡಿ.ಚನ್ನಣ್ಣನವರ್ ಅವರನ್ನು ಗುರಿಯಾಗಿಸಿಕೊಂಡು ಹಾಕಿದ ಫೇಸ್ ಬುಕ್ ವಿಡಿಯೊಗೆ 500ಕ್ಕೂ ಹೆಚ್ಚಿನ ‘ಲೈಕ್’ಗಳು ಲಭಿಸಿವೆ.</p>.<p>‘ನಿಮ್ಮ ಕೆಲಸವನ್ನು ಬೆಂಬಲಿಸುತ್ತೇವೆ, ಒಳ್ಳೆಯ ಕೆಲಸ ಮಾಡಿದ್ದೀರಿ’ ಎಂದು ಹಲವರು ಶ್ಲಾಘಿಸಿದ್ದಾರೆ. ‘ಇಂತಹ ಸಂಸದ ನಮಗೆ ಬೇಕು’ ಎಂದು ಸ್ಟೇಟಸ್ ಹಾಕಿದ್ದಾರೆ.</p>.<p>‘ನನ್ನ ರಾಜಕೀಯ ಭವಿಷ್ಯಕ್ಕಿಂತ ನನ್ನ ಧರ್ಮ ಹಾಗೂ ಆಚರಣೆಗಳನ್ನು ಕಾಪಾಡುವುದೇ ಅತಿ ಮುಖ್ಯ’ ಎಂಬ ಪ್ರತಾಪಸಿಂಹ ಅವರ ಹೇಳಿಕೆಯನ್ನು ಭಾವಚಿತ್ರ ಸಹಿತ ಪೋಸ್ಟ್ ಮಾಡಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>