ಬೆಂಗಳೂರು: ಕತೆಗಾರ ಬಸವಣ್ಣೆಪ್ಪಾ ಕಂಬಾರ ಅವರ ಕಥಾಸಂಕಲನದ ಹಸ್ತಪ್ರತಿಗೆ ಈ ಸಾಲಿನ `ಛಂದ ಪುಸ್ತಕ~ ಬಹುಮಾನ ಲಭಿಸಿದೆ. ಬೆಳಗಾವಿ ಜಿಲ್ಲೆಯ ಘೋಡಗೇರಿಯವರಾದ ಕಂಬಾರರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಪಠ್ಯಪುಸ್ತಕ ಸಹ ಮೇಲ್ವಿಚಾರಕರಾಗಿದ್ದಾರೆ.
`ಛಂದ ಪುಸ್ತಕ~ವು ಈ ಪುಸ್ತಕವನ್ನು ಪ್ರಕಟಿಸಿ, ಕತೆಗಾರರಿಗೆ ಹತ್ತು ಸಾವಿರ ರೂಪಾಯಿ ಬಹುಮಾನ, ಪ್ರಶಸ್ತಿ ಪತ್ರ ಮತ್ತು ಪಾರಿತೋಷಕವನ್ನು ನೀಡುತ್ತದೆ. ಮಾರ್ಚ್ ಎರಡನೇ ವಾರದಲ್ಲಿ ಬೆಂಗಳೂರಿನಲ್ಲಿ ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ.
ಈ ಸ್ಪರ್ಧೆಗೆ ಸುಮಾರು 61 ಹಸ್ತಪ್ರತಿಗಳು ಬಂದಿದ್ದವು. ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ತೀರ್ಪುಗಾರರಾಗಿದ್ದರು.