ಶಿವಮೊಗ್ಗ: ಭೂಗತ ಪಾತಕಿ ರವಿ ಪೂಜಾರಿ, ತೀರ್ಥಹಳ್ಳಿಯ ವರ್ತಕರಿಗೆ ಕರೆ ಮಾಡಿ ಭಾರೀ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ.
ಚಿನ್ನ ಬೆಳ್ಳಿ ಉದ್ಯಮಿಯೊಬ್ಬರನ್ನು ಗುರಿಯಾಗಿಸಿಕೊಂಡಿದ್ದಾನೆ. ಕಳೆದ ಕೆಲ ದಿನಗಳಿಂದ ತೀರ್ಥಹಳ್ಳಿಯ ಹೆಸರಾಂತ ಚಿನ್ನ ಬೆಳ್ಳಿ ವರ್ತಕರ ಕುಟುಂಬಕ್ಕೆ ದೂರವಾಣಿ ಕರೆ ಮಾಡಿರುವ ರವಿ ₹25 ಕೋಟಿ ನೀಡುವಂತೆ ಸೂಚಿಸಿದ್ದಾನೆ.
ಈ ಬಗ್ಗೆ ವರ್ತಕರ ಕುಟುಂಬ ಪೊಲೀಸ್ ಠಾಣೆಗೆ ದೂರು ನೀಡಲು ಹಿಂದೇಟು ಹಾಕಿದ್ದರೂ, ಅಂತಿಮವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ಅವರ ಭರವಸೆ ಮೇರೆಗೆ ದೂರು ನೀಡಿದೆ.