ಬೆಂಗಳೂರು: ‘ಪ್ರಜಾವಾಣಿ’ ಭೂಮಿಕಾ ಲಲಿತ ಪ್ರಬಂಧ ಸ್ಪರ್ಧೆಯ ಫಲಿತಾಂಶಗಳನ್ನು ಪ್ರಕಟವಾಗಿವೆ.
ನಾಡಿನ ಎಲ್ಲ ಪ್ರದೇಶಗಳಿಂದಲೂ ಸುಮಾರು ಐದುನೂರು ಪ್ರಬಂಧಗಳು ಸ್ಪರ್ಧೆಗೆ ಬಂದಿದ್ದವು. ವಿದ್ಯಾರ್ಥಿಗಳು, ಗೃಹಿಣಿಯರು, ಲೇಖಕಿಯರು, ಉದ್ಯೋಗಸ್ಥ ಮಹಿಳೆಯರು, ವಯೋವೃದ್ಧರು – ಹೀಗೆ ಸಮಾಜದ ಬೇರೆ ಬೇರೆ ಸ್ತರದ ಮಹಿಳೆಯರು ಭಾಗವಹಿಸಿದ್ದರು.
ಹಿರಿಯ ಲೇಖಕ ಶ್ರೀನಿವಾಸ ವೈದ್ಯ ಮತ್ತು ಕವಯಿತ್ರಿ–ಅಧ್ಯಾಪಕಿ ಗೀತಾ ವಸಂತ ತೀರ್ಪುಗಾರರಾಗಿದ್ದರು.
ಮೊದಲನೆಯ ಬಹುಮಾನ: ₹ 7, 500. ಎರಡನೆಯ ಬಹುಮಾನ: ₹ 5,000 ಮತ್ತು ಮೂರನೆಯ ಬಹುಮಾನ: ₹ 2,500.
ಬಹುಮಾನದ ವಿವರಗಳು
*ಮೊದಲನೆಯ ಬಹುಮಾನ:
ಹೂವು ಅರಸುವ ಕಾಲದ ನೆಲ/ ಆಶಾ ಜಗದೀಶ್
*ಎರಡನೆಯ ಬಹುಮಾನ:
ಎಲ್ಲಿಂದ ಬಂದೆವ್ವಾ/ ಹೇಮಲತಾ ಎಸ್. ಪೂಜಾರಿ
*ಮೂರನೆಯ ಬಹುಮಾನ:
ನನ್ನ ಬಾಲ್ಯ ಕದ್ದ ಕಾಗೆಗಳು/ ಗೀತಾ ಕುಂದಾಪುರ
ಮೆಚ್ಚಿಗೆ ಪಡೆದ ಪ್ರಬಂಧಗಳು:
1. ತಾರಸಿ ಮೇಲಿನ ಅನಂತ ನಡಿಗೆ/ ಮೀನಾಕ್ಷಿ ಹೆಂಗವಳ್ಳಿ
2. ಭಾವಚಿತ್ರಗಳ ಭಾವಲೋಕದಲ್ಲಿ/ ಸ್ಮಿತಾ ಅಮೃತರಾಜ್ ಸಂಪಾಜೆ
3. ನಾನ್ಹೇಗೆ ಮರೆಯಲಿ/ ಅಭಿಜ್ಞಾ ಸತೀಶ್
4. ಓಪನ್ ಕಿಚನ್ನ ಪ್ರವಚನ/ ಶ್ವೇತಾ ಸುರೇಶ ಪಾಟೀಲ
5. ಓಲೆಯ ಸರಬರ/ ಶಾರದಾ ವಿ. ಮೂರ್ತಿ
*
ಇಲ್ಲಿ ಆಯ್ಕೆಯಾದ ಬರಹಗಳು ಎಲ್ಲ ಮಿತಿಗಳ ಮಧ್ಯೆಯೂ ಒಳ-ಹೊರ ಜಗತ್ತುಗಳನ್ನು ಬೆಸೆದು ಕಟ್ಟುತ್ತಾ ಒಂದು ಮಾಡುವ ಅಚ್ಚರಿಯನ್ನು ಉಳಿಸುತ್ತವೆ. -ಗೀತಾ ವಸಂತ, ತೀರ್ಪುಗಾರರು
* ಮರೆತೇ ಹೋಗುತ್ತದೇನೋ ಎಂದು ಹೆದರಿಸಿದ್ದ ಲಲಿತಪ್ರಬಂಧ ಇತ್ತೀಚಿನ ವರ್ಷಗಳಲ್ಲಿ ಮತ್ತೆ ಮೆಲ್ಲನೇ ತಲೆ ಎತ್ತುತ್ತಿರುವುದೂ ಇದಕ್ಕೆ ಪ್ರಜಾವಾಣಿ ಪ್ರೋತ್ಸಾಹ ಕೊಡುತ್ತಿರುವುದೂ ಸಂತೋಷದ ಸಂಗತಿ.