‘ಈ ದೇವಾಲಯದಲ್ಲಿ 20 ವರ್ಷಗಳ ಕಾಲ ಪಾರುಪತ್ಯಗಾರನಾಗಿ ಕೆಲಸ ಮಾಡಿದ್ದೇನೆ. ಆ ಸಮಯದಲ್ಲಿ ಕೈಬಿಟ್ಟು ಹೋಗುತ್ತಿದ್ದ ಐತಿಹಾಸಿಕ ದೇವಾಲಯದ ಆಸ್ತಿಯನ್ನು ಉಳಿಸಿದ್ದೇನೆ. ಇಷ್ಟಾದರೂ ನನ್ನ ಹಿರಿತನಕ್ಕೆ ಕಾರ್ಯನಿರ್ವಾಹಕ ಅಧಿಕಾರಿ ಗೌರವ ಕೊಡುತ್ತಿಲ್ಲ. ವಿನಾಕಾರಣ ಗೈರುಹಾಜರಿ ಹಾಕುವುದು, ಪ್ರಶ್ನಿಸುವುದು ಮಾಡಿ ಮುಜುಗರ ಉಂಟು ಮಾಡಿದ್ದಾರೆ. ಸಾಂಪ್ರದಾಯಿಕ ಪೂಜಾ ವಿಧಾನಗಳು ಗೊತ್ತಿಲ್ಲದವರು ಸ್ವಾಮಿ (ಶ್ರೀರಂಗನಾಥಸ್ವಾಮಿ) ಮತ್ತು ಅಮ್ಮ (ರಂಗನಾಯಕಿ) ಅವರನ್ನು ಮುಟ್ಟಲು ಅವಕಾಶ ನೀಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.