ಹುಬ್ಬಳ್ಳಿ: ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ನಮ್ಮ ಆಲೋಚನೆ. ನಮ್ಮ ಕನಸು "ಹೊಸ ಭಾರತ". ನಮ್ಮ ಕನಸು "ಹೊಸ ಕರ್ನಾಟಕ'. ನಾವು ಬಯಸುವ ಹೊಸ ಭಾರತದಲ್ಲಿ ಬಡವರ ಬದುಕು ಸರಳವಾಗಿ, ನೆಮ್ಮದಿಯಾಗಿ ಇರುತ್ತದೆ. ಯುವಕರಿಗೆ ಉದ್ಯೋಗ, ಸಮಾನತೆ ಇರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದರು.
ಭೇದಭಾವ ಇಲ್ಲದೆ ಇಡೀ ಭಾರತ ಒಂದೇ ಭಾರತ, ಶ್ರೇಷ್ಠ ಭಾರತ ಎನ್ನುವ ನ್ಯೂ ಇಂಡಿಯಾ ನನ್ನ ಕನಸು. ಯಾವುದೇ ನಗರ- ಹಳ್ಳಿ ಹಿಂದೆ ಉಳಿಯಬಾರದು. 2022ಕ್ಕೆ ಇಂತಹ ನ್ಯೂ ಇಂಡಿಯಾ ರೂಪಿಸುವುದು ನನ್ನ ಕನಸು ಎಂದರು.
ಇದು ನನ್ನ ಕನಸು. ನಾನು ಕಾಂಗ್ರೆಸ್ನವರಿಗೆ ಕೇಳ್ತೀನಿ. ನಿಮ್ಮ ಕನಸು ಏನು? ಕುಟುಂಬದಿಂದ ಆಚೆಗೆ ಏನಾದರೂ ಯೋಚನೆ ಮಾಡಲು ಸಾಧ್ಯವೇ? ಕುಟುಂಬದಿಂದ ಶುರುವಾಗಿ, ಕುಟುಂಬದಲ್ಲೇ ನಿಮ್ಮ ಆಲೋಚನೆ ಮುಗಿಯುತ್ತದೆ ಎಂದು ವ್ಯಂಗ್ಯವಾಡಿದರು.