<p><strong>ಬೆಂಗಳೂರು</strong>: ಪ್ರಸ್ತುತ ರಾಜಕೀಯ ಗೊಂದಲ ನಡುವೆಯು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ತಮ್ಮ ಚೊಚ್ಚಲ ಹಾಗೂ ಬಿಜೆಪಿ ಸರ್ಕಾರದ ಕೊನೆಯ 2013-14ನೇ ಸಾಲಿನ ರಾಜ್ಯ ಬಜೆಟ್ನ್ನು ಶುಕ್ರವಾರ ಮಂಡಿಸಿದರು. ಹಣಕಾಸು ಸಚಿವರೂ ಸಹ ಆಗಿರುವ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಮಧ್ಯಾಹ್ನ 12.30ಕ್ಕೆ ಸರಿಯಾಗಿ ಮೊದಲು ಕೃಷಿ ಮುಂಗಡಪತ್ರವನ್ನು ಮಂಡಿಸಿದರು.</p>.<p><strong>2013-14ನೇ ಸಾಲಿನ ಬಜೆಟ್ನ ಮುಖ್ಯಾಂಶಗಳು</strong></p>.<p>* 2013-14ನೇ ಸಾಲಿನ ಬಜೆಟ್ ಗಾತ್ರವು ಒಟ್ಟು ರೂ. 1ಲಕ್ಷದ 17 ಸಾವಿರ ಕೋಟಿ. ಇದರಲ್ಲಿ ರೂ. 22.310 ಕೋಟಿ ಕೃಷಿ ಬಜೆಟ್ನ್ನು ಒಳಗೊಂಡಿದೆ.<br /> * ಯೋಜನಾ ಗಾತ್ರ ರೂ. 42 ಸಾವಿರ ಕೋಟಿ. ಕಳೆದ ವರ್ಷದ ಬಜೆಟ್ಗಿಂತ ಶೇ 10ರಷ್ಟು ಹೆಚ್ಚಳ.<br /> * ಕೃಷಿ ಬಜೆಟ್ಗೆ ದೇಶದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಸದನದಲ್ಲಿ ಶ್ಲಾಘನೆ.<br /> * ವಾಡಿಕೆಗಿಂತ ಈ ಬಾರಿ ಶೇ 22ರಷ್ಟು ಮಳೆ ಕಡಿಮೆ ಬಿದ್ದಿದ್ದು, ಆದರೂ ಕೆಲವೆಡೆ ಉತ್ತಮ ಬೆಳೆ ಬಂದಿದೆ.<br /> * ಬರಗಾಲ ಪರಿಹಾರಕ್ಕಾಗಿ ಕೇಂದ್ರದಿಂದ ರೂ. 282 ಕೋಟಿ ಅನುಧಾನ ಬಿಡುಗಡೆ.<br /> * ಬರಗಾಲ ಪೀಡಿತ ಜಿಲ್ಲೆಗಳು ಸೇರಿದಂತೆ ರಾಜ್ಯದ ಪ್ರತಿ ಜಿಲ್ಲೆಗಳಿಗೂ ಸಮಾನವಾಗಿ ಅನುಧಾನ ಬಿಡುಗಡೆ.<br /> * 1.35ಕೋಟಿ ರೈತರಿಗೆ ಸರಿಯಾದ ಸಮಯದಲ್ಲಿ ಉತ್ತಮ ಬೀಜ ವಿತರಣೆ.<br /> * ಸಾವಯವ ಕೃಷಿಗೆ ರಾಜ್ಯ ಸರ್ಕಾರ ಹೆಚ್ಚು ಆಧ್ಯತೆ ನೀಡಿದ್ದು, ಇದಕ್ಕಾಗಿ ರೂ. 100ಕೋಟಿ ಮೀಸಲು.<br /> * ಪ್ರತ್ಯೇಕ ಕೃಷಿ ಆಯೋಗ ರಚನೆ ಹಾಗೂ ಆಯೋಗಕ್ಕಾಗಿ ರೂ. 19.660 ಕೋಟಿ ಮೀಸಲು.<br /> * ಹನಿ ಮತ್ತು ತುಂತುರು ನಿರಾವರಿ ಯೋಜನೆಗೆ ಹೆಚ್ಚು ಆಧ್ಯತೆ<br /> * ಪಶುಸಂಗೋಪನೆ ಮತ್ತು ಮೀನುಗಾರಿಕೆಗಾಗಿ ರೂ. 1.357ಕೋಟಿ ಅನುಧಾನ ಬಿಡುಗಡೆ.<br /> * ಸಾವಯವ ಕೃಷಿಯನ್ನು ಹೆಚ್ಚು ಅನುಷ್ಠಾನಕ್ಕೆ ತಂದ ಕೀರ್ತಿ ರಾಜ್ಯಕ್ಕೆ ಸಲ್ಲುತ್ತದೆ.<br /> * ಕೃಷಿ ಮತ್ತು ತೋಟಗಾರಿಕೆ ವಲಯದಲ್ಲಿ ರಾಜ್ಯ ಮುಂಚೂಣಿಯಲ್ಲಿದೆ.<br /> * ಸುಮಾರು 89 ಲಕ್ಷ ಎಮ್ಮೆ , ದನ -ಜಾನುವಾರಗಳ ಕಾಲು ಬಾಯಿ ಜ್ವರಕ್ಕೆ ಲಸಿಕೆ ಹಾಕಿಸಲಾಗಿದೆ.<br /> * 1.10 ಲಕ್ಷ ಜನರಿಗೆ ಮೇವು ಬೆಳೆಯಲು ಅವಕಾಶ ನೀಡಲಾಗಿದೆ.<br /> * 3.91.600 ಪಶುವೈದ್ಯರ ನೇಮಕ.<br /> * ರೇಷ್ಮೆ ಉತ್ಪಾದನೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ.<br /> * ಸ್ತ್ರೀ ಶಕ್ತಿ ಸಂಘಟನೆಗಳ ಮೂಲಕ ಮಹಿಳೆಯರಿಗಾಗಿ ಶೇ 4ರ ಬಡ್ಡಿದರದಲ್ಲಿ ಸಾಲ ಮಂಜೂರು.<br /> * ರೈತರ ಹೊಲಗಳಿಗೆ ನೇರವಾಗಿ ಸಂಪರ್ಕ ಕಲ್ಪಿಸುವ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ.<br /> * ರೂ. 25 ಕೋಟಿ ವೆಚ್ಚದಲ್ಲಿ ಸಾರ್ವಜನಿಕ ಶೌಚಾಲಯಗಳ ನಿರ್ಮಾಣಕ್ಕೆ ಆದ್ಯತೆ.<br /> * ಕಡಿಮೆ ಬಡ್ಡಿ ದರದಲ್ಲಿ ಕೃಷಿ ಬೆಳೆಗಾರರಿಗೆ ಸಾಲ ವಿತರಣೆ.<br /> * ರಾಜ್ಯದಲ್ಲಿ ಅಂತರ್ಜಲ ಹೆಚ್ಚಿಸಲು ಕ್ರಮ.<br /> * ರೇಷ್ಮೆ ಉತ್ಪಾದನೆಯನ್ನು ಹೆಚ್ಚಿಸಲು ಅಗತ್ಯ ಕ್ರಮ.<br /> * ಬಾಗಲಕೋಟೆ, ಧಾರವಾಡ, ಬೀದರ್ ಮತ್ತು ಗುಲ್ಬರ್ಗ ಜಿಲ್ಲೆಗಳಲ್ಲಿ ತೋಟಗಾರಿಕೆ ಉತ್ಪನ್ನಗಳ ಮಾರುಕಟ್ಟೆ ಸ್ಥಾಪನೆಗೆ ಚಿಂತನೆ.<br /> * ದೇಶದಲ್ಲಿಯೇ ಮೊದಲ ಬಾರಿಗೆ ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನಂತೆ ರೈತರ ಆಯೋಗ ರಚನೆ.<br /> * ಭೂ ಚೇತನ ಯೋಜನೆ ಮುಂದುವರೆಯುವಿಕೆ.<br /> * ರೈತರಿಗೆ ಉತ್ತಮ ಹಾಗೂ ಹೆಚ್ಚು ಇಳುವರಿ ಬರುವ ಬೆಳೆ ಬೆಳೆಯಲು ಮೊಬೈಲ್ ಮೂಲಕ ಮಾಹಿತಿ ನೀಡುವುದು. ಸುಮಾರು 57 ಲಕ್ಷ ರೈತರಿಗೆ ಇದರ ಉಪಯೋಗ.<br /> * ಸುವರ್ಣ ಭೂಮಿ ಯೋಜನೆ ಮುಂದುವರೆಯುವಿಕೆ.<br /> * ದಾವಣಗೆರೆ ಮತ್ತು ತುಮಕೂರಿನಲ್ಲಿ ಲಾಲ್ಬಾಗ್ ಮಾದರಿಯಲ್ಲಿ ಉದ್ಯಾನ ನಿರ್ಮಾಣ ಚಿಂತನೆ<br /> * 5 ತೆಂಗು ಉದ್ಯಾನ ಸ್ಥಾಪನೆ.<br /> * ಅಥಣಿಯಲ್ಲಿ ಕೃಷಿ ಕಾಲೇಜು ಸ್ಥಾಪನೆ.<br /> * ಹಾಲಿನ ಪ್ರೋತ್ಸಾಹ ದರ ರೂ. 2 ಮುಂದುವರೆಯುವಿಕೆ.<br /> * ಭಟ್ಕಳ ಮತ್ತು ಕಾರವಾರದಲ್ಲಿ ಮೀನುಗಾರಿಕೆ ಪ್ರದೇಶ ವಿಸ್ತರಣೆ.<br /> * ಬಾಗಲಕೋಟೆಯಲ್ಲಿ ಕೃಷಿ ವಿ.ವಿ. ಸ್ಥಾಪನೆ.<br /> * ಸಾಂಬಾರು ಪದಾರ್ಥ ಅಭಿವೃದ್ಧಿ ಮಂಡಳಿ ಸ್ಥಾಪನೆ.<br /> * 43 ಹೊಸ ತಾಲ್ಲೂಕುಗಳ ಘೋಷಣೆ.<br /> * ಬಡವರಿಗೆ ರೂ. 2 ಕೆಜಿ ಅಕ್ಕಿ ವಿತರಣೆ.<br /> * ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗೆ ರೂ. 200 ಕೋಟಿ ಮೀಸಲು.</p>.<p><strong>ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.....</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಪ್ರಸ್ತುತ ರಾಜಕೀಯ ಗೊಂದಲ ನಡುವೆಯು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ತಮ್ಮ ಚೊಚ್ಚಲ ಹಾಗೂ ಬಿಜೆಪಿ ಸರ್ಕಾರದ ಕೊನೆಯ 2013-14ನೇ ಸಾಲಿನ ರಾಜ್ಯ ಬಜೆಟ್ನ್ನು ಶುಕ್ರವಾರ ಮಂಡಿಸಿದರು. ಹಣಕಾಸು ಸಚಿವರೂ ಸಹ ಆಗಿರುವ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಮಧ್ಯಾಹ್ನ 12.30ಕ್ಕೆ ಸರಿಯಾಗಿ ಮೊದಲು ಕೃಷಿ ಮುಂಗಡಪತ್ರವನ್ನು ಮಂಡಿಸಿದರು.</p>.<p><strong>2013-14ನೇ ಸಾಲಿನ ಬಜೆಟ್ನ ಮುಖ್ಯಾಂಶಗಳು</strong></p>.<p>* 2013-14ನೇ ಸಾಲಿನ ಬಜೆಟ್ ಗಾತ್ರವು ಒಟ್ಟು ರೂ. 1ಲಕ್ಷದ 17 ಸಾವಿರ ಕೋಟಿ. ಇದರಲ್ಲಿ ರೂ. 22.310 ಕೋಟಿ ಕೃಷಿ ಬಜೆಟ್ನ್ನು ಒಳಗೊಂಡಿದೆ.<br /> * ಯೋಜನಾ ಗಾತ್ರ ರೂ. 42 ಸಾವಿರ ಕೋಟಿ. ಕಳೆದ ವರ್ಷದ ಬಜೆಟ್ಗಿಂತ ಶೇ 10ರಷ್ಟು ಹೆಚ್ಚಳ.<br /> * ಕೃಷಿ ಬಜೆಟ್ಗೆ ದೇಶದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಸದನದಲ್ಲಿ ಶ್ಲಾಘನೆ.<br /> * ವಾಡಿಕೆಗಿಂತ ಈ ಬಾರಿ ಶೇ 22ರಷ್ಟು ಮಳೆ ಕಡಿಮೆ ಬಿದ್ದಿದ್ದು, ಆದರೂ ಕೆಲವೆಡೆ ಉತ್ತಮ ಬೆಳೆ ಬಂದಿದೆ.<br /> * ಬರಗಾಲ ಪರಿಹಾರಕ್ಕಾಗಿ ಕೇಂದ್ರದಿಂದ ರೂ. 282 ಕೋಟಿ ಅನುಧಾನ ಬಿಡುಗಡೆ.<br /> * ಬರಗಾಲ ಪೀಡಿತ ಜಿಲ್ಲೆಗಳು ಸೇರಿದಂತೆ ರಾಜ್ಯದ ಪ್ರತಿ ಜಿಲ್ಲೆಗಳಿಗೂ ಸಮಾನವಾಗಿ ಅನುಧಾನ ಬಿಡುಗಡೆ.<br /> * 1.35ಕೋಟಿ ರೈತರಿಗೆ ಸರಿಯಾದ ಸಮಯದಲ್ಲಿ ಉತ್ತಮ ಬೀಜ ವಿತರಣೆ.<br /> * ಸಾವಯವ ಕೃಷಿಗೆ ರಾಜ್ಯ ಸರ್ಕಾರ ಹೆಚ್ಚು ಆಧ್ಯತೆ ನೀಡಿದ್ದು, ಇದಕ್ಕಾಗಿ ರೂ. 100ಕೋಟಿ ಮೀಸಲು.<br /> * ಪ್ರತ್ಯೇಕ ಕೃಷಿ ಆಯೋಗ ರಚನೆ ಹಾಗೂ ಆಯೋಗಕ್ಕಾಗಿ ರೂ. 19.660 ಕೋಟಿ ಮೀಸಲು.<br /> * ಹನಿ ಮತ್ತು ತುಂತುರು ನಿರಾವರಿ ಯೋಜನೆಗೆ ಹೆಚ್ಚು ಆಧ್ಯತೆ<br /> * ಪಶುಸಂಗೋಪನೆ ಮತ್ತು ಮೀನುಗಾರಿಕೆಗಾಗಿ ರೂ. 1.357ಕೋಟಿ ಅನುಧಾನ ಬಿಡುಗಡೆ.<br /> * ಸಾವಯವ ಕೃಷಿಯನ್ನು ಹೆಚ್ಚು ಅನುಷ್ಠಾನಕ್ಕೆ ತಂದ ಕೀರ್ತಿ ರಾಜ್ಯಕ್ಕೆ ಸಲ್ಲುತ್ತದೆ.<br /> * ಕೃಷಿ ಮತ್ತು ತೋಟಗಾರಿಕೆ ವಲಯದಲ್ಲಿ ರಾಜ್ಯ ಮುಂಚೂಣಿಯಲ್ಲಿದೆ.<br /> * ಸುಮಾರು 89 ಲಕ್ಷ ಎಮ್ಮೆ , ದನ -ಜಾನುವಾರಗಳ ಕಾಲು ಬಾಯಿ ಜ್ವರಕ್ಕೆ ಲಸಿಕೆ ಹಾಕಿಸಲಾಗಿದೆ.<br /> * 1.10 ಲಕ್ಷ ಜನರಿಗೆ ಮೇವು ಬೆಳೆಯಲು ಅವಕಾಶ ನೀಡಲಾಗಿದೆ.<br /> * 3.91.600 ಪಶುವೈದ್ಯರ ನೇಮಕ.<br /> * ರೇಷ್ಮೆ ಉತ್ಪಾದನೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ.<br /> * ಸ್ತ್ರೀ ಶಕ್ತಿ ಸಂಘಟನೆಗಳ ಮೂಲಕ ಮಹಿಳೆಯರಿಗಾಗಿ ಶೇ 4ರ ಬಡ್ಡಿದರದಲ್ಲಿ ಸಾಲ ಮಂಜೂರು.<br /> * ರೈತರ ಹೊಲಗಳಿಗೆ ನೇರವಾಗಿ ಸಂಪರ್ಕ ಕಲ್ಪಿಸುವ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ.<br /> * ರೂ. 25 ಕೋಟಿ ವೆಚ್ಚದಲ್ಲಿ ಸಾರ್ವಜನಿಕ ಶೌಚಾಲಯಗಳ ನಿರ್ಮಾಣಕ್ಕೆ ಆದ್ಯತೆ.<br /> * ಕಡಿಮೆ ಬಡ್ಡಿ ದರದಲ್ಲಿ ಕೃಷಿ ಬೆಳೆಗಾರರಿಗೆ ಸಾಲ ವಿತರಣೆ.<br /> * ರಾಜ್ಯದಲ್ಲಿ ಅಂತರ್ಜಲ ಹೆಚ್ಚಿಸಲು ಕ್ರಮ.<br /> * ರೇಷ್ಮೆ ಉತ್ಪಾದನೆಯನ್ನು ಹೆಚ್ಚಿಸಲು ಅಗತ್ಯ ಕ್ರಮ.<br /> * ಬಾಗಲಕೋಟೆ, ಧಾರವಾಡ, ಬೀದರ್ ಮತ್ತು ಗುಲ್ಬರ್ಗ ಜಿಲ್ಲೆಗಳಲ್ಲಿ ತೋಟಗಾರಿಕೆ ಉತ್ಪನ್ನಗಳ ಮಾರುಕಟ್ಟೆ ಸ್ಥಾಪನೆಗೆ ಚಿಂತನೆ.<br /> * ದೇಶದಲ್ಲಿಯೇ ಮೊದಲ ಬಾರಿಗೆ ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನಂತೆ ರೈತರ ಆಯೋಗ ರಚನೆ.<br /> * ಭೂ ಚೇತನ ಯೋಜನೆ ಮುಂದುವರೆಯುವಿಕೆ.<br /> * ರೈತರಿಗೆ ಉತ್ತಮ ಹಾಗೂ ಹೆಚ್ಚು ಇಳುವರಿ ಬರುವ ಬೆಳೆ ಬೆಳೆಯಲು ಮೊಬೈಲ್ ಮೂಲಕ ಮಾಹಿತಿ ನೀಡುವುದು. ಸುಮಾರು 57 ಲಕ್ಷ ರೈತರಿಗೆ ಇದರ ಉಪಯೋಗ.<br /> * ಸುವರ್ಣ ಭೂಮಿ ಯೋಜನೆ ಮುಂದುವರೆಯುವಿಕೆ.<br /> * ದಾವಣಗೆರೆ ಮತ್ತು ತುಮಕೂರಿನಲ್ಲಿ ಲಾಲ್ಬಾಗ್ ಮಾದರಿಯಲ್ಲಿ ಉದ್ಯಾನ ನಿರ್ಮಾಣ ಚಿಂತನೆ<br /> * 5 ತೆಂಗು ಉದ್ಯಾನ ಸ್ಥಾಪನೆ.<br /> * ಅಥಣಿಯಲ್ಲಿ ಕೃಷಿ ಕಾಲೇಜು ಸ್ಥಾಪನೆ.<br /> * ಹಾಲಿನ ಪ್ರೋತ್ಸಾಹ ದರ ರೂ. 2 ಮುಂದುವರೆಯುವಿಕೆ.<br /> * ಭಟ್ಕಳ ಮತ್ತು ಕಾರವಾರದಲ್ಲಿ ಮೀನುಗಾರಿಕೆ ಪ್ರದೇಶ ವಿಸ್ತರಣೆ.<br /> * ಬಾಗಲಕೋಟೆಯಲ್ಲಿ ಕೃಷಿ ವಿ.ವಿ. ಸ್ಥಾಪನೆ.<br /> * ಸಾಂಬಾರು ಪದಾರ್ಥ ಅಭಿವೃದ್ಧಿ ಮಂಡಳಿ ಸ್ಥಾಪನೆ.<br /> * 43 ಹೊಸ ತಾಲ್ಲೂಕುಗಳ ಘೋಷಣೆ.<br /> * ಬಡವರಿಗೆ ರೂ. 2 ಕೆಜಿ ಅಕ್ಕಿ ವಿತರಣೆ.<br /> * ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗೆ ರೂ. 200 ಕೋಟಿ ಮೀಸಲು.</p>.<p><strong>ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.....</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>