<p><strong>ಧಾರವಾಡ:</strong> ಭಾನುವಾರ ಸಂಜೆ ಇಲ್ಲಿನ ಸೃಜನಾ ರಂಗಮಂದಿರದಲ್ಲಿ ನಡೆಯಬೇಕಿದ್ದ ಕೆ.ಎಸ್.ಪವಿತ್ರಾ ಅವರ ‘ಕ್ರಿಸ್ತಕಾವ್ಯ’ ನೃತ್ಯ ರೂಪಕವನ್ನು ಕೆಲ ಬಲಪಂಥೀಯ ಸಂಘಟನೆಗಳ ಬೆದರಿಕೆಯ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ.<br /> <br /> ಶಿವಮೊಗ್ಗದ ಶ್ರೀ ವಿಜಯ ಕಲಾನಿಕೇತನ ಹಾಗೂ ಧಾರವಾಡದ ಇಂಟ್ಯಾಕ್ ಸಂಸ್ಥೆಯ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.<br /> <br /> ಎರಡು ದಿನಗಳ ಹಿಂದೆ ಆಯೋಜಕರಿಗೆ ಕರೆ ಮಾಡಿದ ಕೆಲವರು, ಬಲಪಂಥೀಯ ಸಂಘಟನೆಯೊಂದರ ಹೆಸರು ಹೇಳಿ, ‘ಕ್ರಿಸ್ತಕಾವ್ಯ ನೃತ್ಯ ಮಾಡಿದರೆ ರಂಗಮಂದಿರದ ಎದುರು ಪ್ರತಿಭಟನೆ ನಡೆಸುತ್ತೇವೆ’ ಎಂದು ಬೆದರಿಕೆ ಒಡ್ಡಿದ್ದರಿಂದ ಬೇಸರಗೊಂಡ ಆಯೋಜಕರು ಕಾರ್ಯಕ್ರಮ ರದ್ದುಗೊಳಿಸಿದ್ದಾರೆ.<br /> <br /> ‘ನಾವು ಅವರಿಗೆ ಹೆದರಿ ಈ ಕಾರ್ಯಕ್ರಮ ರದ್ದುಗೊಳಿಸುತ್ತಿಲ್ಲ. ಆದರೆ, ಅವರ ಬೆದರಿಕೆಯನ್ನು ಖಂಡಿಸುವುದಕ್ಕಾಗಿ ಈ ನಿರ್ಣಯ ಕೈಗೊಂಡಿದ್ದೇವೆ. ಇದರಲ್ಲಿ ಕ್ರಿಸ್ತನ ಜೀವನಕ್ಕಿಂತ ಒಟ್ಟಾರೆ ಮಾನವ ಧರ್ಮ, ಮೌಲ್ಯದ ಕುರಿತು ವಿವರಣೆಯಿತ್ತು. ಡಾ. ದ.ರಾ.ಬೇಂದ್ರೆ, ಡಾ.ಚನ್ನವೀರ ಕಣವಿ ಸೇರಿದಂತೆ ಹಲವು ಕನ್ನಡ ಕವಿಗಳ ಕವಿತೆಗಳನ್ನೇ ಬಳಸಿಕೊಂಡಿದ್ದೆವು. ಆದರೂ ಇದಕ್ಕೆ ವಿರೋಧ ವ್ಯಕ್ತವಾಗುತ್ತಿರುವುದು ಬೇಸರ ತಂದಿದೆ’ ಎಂದು ಆಯೋಜಕರು ಹೇಳಿದ್ದಾರೆ.<br /> <br /> ಈ ನೃತ್ಯ ಕಾರ್ಯಕ್ರಮದ ಸಂಘಟಕರಲ್ಲೊಬ್ಬರಾದ ಇಂಟ್ಯಾಕ್ ಸಂಸ್ಥೆಯ ಧಾರವಾಡ ಘಟಕದ ಸಂಯೋಜಕ ಎನ್.ಪಿ.ಭಟ್, ‘ಕಲೆಯು ಜಾತಿ, ಭಾಷೆ, ಧರ್ಮಗಳ ಎಲ್ಲೆಯನ್ನೂ ಮೀರಿರುತ್ತದೆ. ಆದರೆ, ಈ ನೃತ್ಯಕ್ಕೆ ಪ್ರತಿರೋಧ ಒಡ್ಡಿದವರ ಮನಸ್ಥಿತಿಯನ್ನು ಕಂಡು ಬೇಸರವಾಗಿದೆ. ಇದು ಸಾಂಸ್ಕೃತಿಕ ನಗರಿ ಧಾರವಾಡಕ್ಕೆ ಶೋಭೆ ತರುವ ಸಂಗತಿಯಲ್ಲ’ ಎಂದು ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ:</strong> ಭಾನುವಾರ ಸಂಜೆ ಇಲ್ಲಿನ ಸೃಜನಾ ರಂಗಮಂದಿರದಲ್ಲಿ ನಡೆಯಬೇಕಿದ್ದ ಕೆ.ಎಸ್.ಪವಿತ್ರಾ ಅವರ ‘ಕ್ರಿಸ್ತಕಾವ್ಯ’ ನೃತ್ಯ ರೂಪಕವನ್ನು ಕೆಲ ಬಲಪಂಥೀಯ ಸಂಘಟನೆಗಳ ಬೆದರಿಕೆಯ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ.<br /> <br /> ಶಿವಮೊಗ್ಗದ ಶ್ರೀ ವಿಜಯ ಕಲಾನಿಕೇತನ ಹಾಗೂ ಧಾರವಾಡದ ಇಂಟ್ಯಾಕ್ ಸಂಸ್ಥೆಯ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.<br /> <br /> ಎರಡು ದಿನಗಳ ಹಿಂದೆ ಆಯೋಜಕರಿಗೆ ಕರೆ ಮಾಡಿದ ಕೆಲವರು, ಬಲಪಂಥೀಯ ಸಂಘಟನೆಯೊಂದರ ಹೆಸರು ಹೇಳಿ, ‘ಕ್ರಿಸ್ತಕಾವ್ಯ ನೃತ್ಯ ಮಾಡಿದರೆ ರಂಗಮಂದಿರದ ಎದುರು ಪ್ರತಿಭಟನೆ ನಡೆಸುತ್ತೇವೆ’ ಎಂದು ಬೆದರಿಕೆ ಒಡ್ಡಿದ್ದರಿಂದ ಬೇಸರಗೊಂಡ ಆಯೋಜಕರು ಕಾರ್ಯಕ್ರಮ ರದ್ದುಗೊಳಿಸಿದ್ದಾರೆ.<br /> <br /> ‘ನಾವು ಅವರಿಗೆ ಹೆದರಿ ಈ ಕಾರ್ಯಕ್ರಮ ರದ್ದುಗೊಳಿಸುತ್ತಿಲ್ಲ. ಆದರೆ, ಅವರ ಬೆದರಿಕೆಯನ್ನು ಖಂಡಿಸುವುದಕ್ಕಾಗಿ ಈ ನಿರ್ಣಯ ಕೈಗೊಂಡಿದ್ದೇವೆ. ಇದರಲ್ಲಿ ಕ್ರಿಸ್ತನ ಜೀವನಕ್ಕಿಂತ ಒಟ್ಟಾರೆ ಮಾನವ ಧರ್ಮ, ಮೌಲ್ಯದ ಕುರಿತು ವಿವರಣೆಯಿತ್ತು. ಡಾ. ದ.ರಾ.ಬೇಂದ್ರೆ, ಡಾ.ಚನ್ನವೀರ ಕಣವಿ ಸೇರಿದಂತೆ ಹಲವು ಕನ್ನಡ ಕವಿಗಳ ಕವಿತೆಗಳನ್ನೇ ಬಳಸಿಕೊಂಡಿದ್ದೆವು. ಆದರೂ ಇದಕ್ಕೆ ವಿರೋಧ ವ್ಯಕ್ತವಾಗುತ್ತಿರುವುದು ಬೇಸರ ತಂದಿದೆ’ ಎಂದು ಆಯೋಜಕರು ಹೇಳಿದ್ದಾರೆ.<br /> <br /> ಈ ನೃತ್ಯ ಕಾರ್ಯಕ್ರಮದ ಸಂಘಟಕರಲ್ಲೊಬ್ಬರಾದ ಇಂಟ್ಯಾಕ್ ಸಂಸ್ಥೆಯ ಧಾರವಾಡ ಘಟಕದ ಸಂಯೋಜಕ ಎನ್.ಪಿ.ಭಟ್, ‘ಕಲೆಯು ಜಾತಿ, ಭಾಷೆ, ಧರ್ಮಗಳ ಎಲ್ಲೆಯನ್ನೂ ಮೀರಿರುತ್ತದೆ. ಆದರೆ, ಈ ನೃತ್ಯಕ್ಕೆ ಪ್ರತಿರೋಧ ಒಡ್ಡಿದವರ ಮನಸ್ಥಿತಿಯನ್ನು ಕಂಡು ಬೇಸರವಾಗಿದೆ. ಇದು ಸಾಂಸ್ಕೃತಿಕ ನಗರಿ ಧಾರವಾಡಕ್ಕೆ ಶೋಭೆ ತರುವ ಸಂಗತಿಯಲ್ಲ’ ಎಂದು ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>