<p><strong>ಮಂತ್ರಾಲಯ:</strong> ‘ವೃಕ್ಷ ಪ್ರಸಾದ’ ಹೆಸರಿ ನಲ್ಲಿ ಮಂತ್ರಾಲಯದಲ್ಲಿ ನಡೆಯುತ್ತಿರುವ ಸಸಿಗಳ ವಿತರಣಾ ಕಾರ್ಯಕ್ರಮವು ಪೂರ್ವಾರಾಧನೆಯ ದಿನವಾದ ಶುಕ್ರವಾರ ಆರಂಭಗೊಂಡಿತು. ಈ ಸಾರಿ 20 ಸಾವಿರದಷ್ಟು ಸಸಿಗಳನ್ನು ವಿತರಿಸುವ ಗುರಿ ಹೊಂದಲಾಗಿದೆ.<br /> <br /> ಆರಾಧನೆ ಸಮಯ ಮಂತ್ರಾಲಯಕ್ಕೆ ಬರುವ ಭಕ್ತರಿಗೆ ಉಚಿತವಾಗಿ ಒಂದು ಅಥವಾ ಎರಡು ಸಸಿಗಳನ್ನು ವಿತರಣೆ ಮಾಡಲಾಗುತ್ತಿದೆ. ಆರಾಧನೆಯ ಮೊದಲ ದಿನ 3,500 ಸಸಿಗಳನ್ನು ವಿತರಣೆಗೆ ಸಿದ್ಧ ಮಾಡಿಕೊಳ್ಳಲಾಗಿದೆ.<br /> <br /> ‘ವೃಕ್ಷ ಪ್ರಸಾದ’ ಸಸಿ ವಿತರಣೆಗೆ ಚಾಲನೆ ನೀಡಿದ ಶ್ರೀಸುಬುಧೇಂದ್ರ ತೀರ್ಥರು, ಸಸಿಗಳನ್ನು ಪಡೆದುಕೊಂಡ ಭಕ್ತರಿಂದ ಸಸಿಗಳನ್ನು ಬೆಳಸಿ, ಸಂರಕ್ಷಣೆ ಮಾಡುವುದು ಮತ್ತು ಮತ್ತೊಬ್ಬರಿಗೂ ಸಸಿ ವಿತರಣೆ ಮಾಡುವ ಕುರಿತು ಪ್ರಮಾಣ ಮಾಡಿಸಿದರು.<br /> <br /> ಮೂರು ದಿನಗಳಲ್ಲಿ 8 ವಿಧದ ಸಸಿಗಳನ್ನು ನೀಡಲಾಗುತ್ತದೆ ಎಂದು ಸಸಿ ವಿತರಣೆಯ ಉಸ್ತುವಾರಿ ನೋಡಿಕೊಳ್ಳು<br /> ತ್ತಿರುವ ರಾಜು ಹೇಳಿದರು.<br /> <br /> ಈ ‘ವೃಕ್ಷ ಪ್ರಸಾದ’ಸೇವೆಯನ್ನು ಬೆಂಗಳೂರಿನ ಉದ್ಯಮಿ ಎಂ.ಕೆ. ಅನಿಲ್ ಕುಮಾರ್ ಮತ್ತು ಅವರ ಪತ್ನಿ ಲಕ್ಷ್ಮಿ ಅವರು 4 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಇದಲ್ಲದೆ ಮಂತ್ರಾಲಯದಲ್ಲಿ ಎರಡು ಕಡೆ ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಶೌಚಾಲಯ ಸ್ಥಾಪಿಸಿ ಅದರ ನಿರ್ವಹಣೆಯನ್ನು ಮಾಡುತ್ತಿದ್ದಾರೆ. ಈ ಸಾರಿ ಆರಾಧನೆಯ ಸಮಯದಲ್ಲಿ ವಸತಿ ಗೃಹಗಳ ಬುಕಿಂಗ್ ಕೇಂದ್ರದ ಬಳಿ ಹೊಸದಾಗಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ್ದಾರೆ.<br /> <br /> ‘ಶ್ರೀಗುರುರಾಯರ ಪ್ರೇರಣೆ ಮತ್ತು ಮಂತ್ರಾಲಯ ಶ್ರೀ ಅವರ ಆಶೀರ್ವಾದದಿಂದ ‘ವೃಕ್ಷ ಪ್ರಸಾದ’ ಸೇವೆ ಮಾಡುತ್ತಿದ್ದೇವೆ. ಕಳೆದ ವರ್ಷ 10 ಸಾವಿರ ತುಳಿಸಿ ಸಸಿಗಳು ಸೇರಿದಂತೆ ಸುಮಾರು 24 ಸಾವಿರ ಸಸಿಗಳನ್ನು ವಿತರಣೆ ಮಾಡಲಾಗಿತ್ತು. ಈ ಸಾರಿ 20 ಸಾವಿರ ಸಸಿಗ<br /> ಳನ್ನು ವಿತರಣೆ ಮಾಡುವ ಉದ್ದೇಶ ಇದೆ’ ಎಂದು ಎಂ.ಕೆ. ಅನಿಲ್ಕುಮಾರ್ ತಿಳಿಸಿದರು.<br /> <br /> ‘ಒಂದು ಸಸಿಗೆ ಸಾಗಣೆ ವೆಚ್ಚವೂ ಸೇರಿ ₹12ರಿಂದ ₹15 ವೆಚ್ಚವಾಗುತ್ತದೆ. ಆದಷ್ಟೂ ಮಂತ್ರಾಲಯದ ಸಮೀಪದಲ್ಲೇ ಖಾಸಗಿ ಮತ್ತು ಸರ್ಕಾರಿ ನರ್ಸರಿಗಳಿಂದ ಸಸಿಗಳನ್ನು ಖರೀದಿ ಮಾಡುತ್ತೇವೆ. ಬೆಂಗಳೂರಿನಿಂದಲೂ ಸಸಿಗಳನ್ನು ತಂದಿದ್ದೇವೆ. ಮಂತ್ರಾಲಯ ಮಠದ ಸಮೀಪದಲ್ಲಿ ಸಸಿಗಳ ವಿತರಣೆಗೆ ಶಾಶ್ವತವಾದ ಕೌಂಟರ್ ತೆರೆಯುವ ಆಲೋಚನೆ ಕೂಡ ಇದೆ’ ಎಂದರು.<br /> <br /> 14 ವರ್ಷದಿಂದ ಆರಾಧನೆ ಸಮಯ ಮಂತ್ರಾಲಯಕ್ಕೆ ಬರುತ್ತಿದ್ದೇನೆ. ಆದರೆ, ‘ವೃಕ್ಷ ಪ್ರಸಾದ’ ತೆಗೆದುಕೊಂಡಿರಲಿಲ್ಲ. ಈ ಸಾರಿ ಎರಡು ಸಸಿ ಕೊಂಡೊಯ್ಯುವೆ.<br /> -ಮುನಿರತ್ನ, ಬಂಗಾರಪೇಟೆ ಭಕ್ತ<br /> <br /> <strong>ಮುಖ್ಯಾಂಶಗಳು</strong><br /> * 4 ವರ್ಷಗಳಿಂದ ‘ವೃಕ್ಷ ಪ್ರಸಾದ’<br /> * ಸಸಿ ವಿತರಣೆಗೆ ಶಾಶ್ವತ ಕೌಂಟರ್ ತೆರೆಯುವ ಚಿಂತನೆ<br /> * ಕಳೆದ ವರ್ಷ 24 ಸಾವಿರಕ್ಕೂ ಹೆಚ್ಚು ಸಸಿಗಳ ವಿತರಣೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂತ್ರಾಲಯ:</strong> ‘ವೃಕ್ಷ ಪ್ರಸಾದ’ ಹೆಸರಿ ನಲ್ಲಿ ಮಂತ್ರಾಲಯದಲ್ಲಿ ನಡೆಯುತ್ತಿರುವ ಸಸಿಗಳ ವಿತರಣಾ ಕಾರ್ಯಕ್ರಮವು ಪೂರ್ವಾರಾಧನೆಯ ದಿನವಾದ ಶುಕ್ರವಾರ ಆರಂಭಗೊಂಡಿತು. ಈ ಸಾರಿ 20 ಸಾವಿರದಷ್ಟು ಸಸಿಗಳನ್ನು ವಿತರಿಸುವ ಗುರಿ ಹೊಂದಲಾಗಿದೆ.<br /> <br /> ಆರಾಧನೆ ಸಮಯ ಮಂತ್ರಾಲಯಕ್ಕೆ ಬರುವ ಭಕ್ತರಿಗೆ ಉಚಿತವಾಗಿ ಒಂದು ಅಥವಾ ಎರಡು ಸಸಿಗಳನ್ನು ವಿತರಣೆ ಮಾಡಲಾಗುತ್ತಿದೆ. ಆರಾಧನೆಯ ಮೊದಲ ದಿನ 3,500 ಸಸಿಗಳನ್ನು ವಿತರಣೆಗೆ ಸಿದ್ಧ ಮಾಡಿಕೊಳ್ಳಲಾಗಿದೆ.<br /> <br /> ‘ವೃಕ್ಷ ಪ್ರಸಾದ’ ಸಸಿ ವಿತರಣೆಗೆ ಚಾಲನೆ ನೀಡಿದ ಶ್ರೀಸುಬುಧೇಂದ್ರ ತೀರ್ಥರು, ಸಸಿಗಳನ್ನು ಪಡೆದುಕೊಂಡ ಭಕ್ತರಿಂದ ಸಸಿಗಳನ್ನು ಬೆಳಸಿ, ಸಂರಕ್ಷಣೆ ಮಾಡುವುದು ಮತ್ತು ಮತ್ತೊಬ್ಬರಿಗೂ ಸಸಿ ವಿತರಣೆ ಮಾಡುವ ಕುರಿತು ಪ್ರಮಾಣ ಮಾಡಿಸಿದರು.<br /> <br /> ಮೂರು ದಿನಗಳಲ್ಲಿ 8 ವಿಧದ ಸಸಿಗಳನ್ನು ನೀಡಲಾಗುತ್ತದೆ ಎಂದು ಸಸಿ ವಿತರಣೆಯ ಉಸ್ತುವಾರಿ ನೋಡಿಕೊಳ್ಳು<br /> ತ್ತಿರುವ ರಾಜು ಹೇಳಿದರು.<br /> <br /> ಈ ‘ವೃಕ್ಷ ಪ್ರಸಾದ’ಸೇವೆಯನ್ನು ಬೆಂಗಳೂರಿನ ಉದ್ಯಮಿ ಎಂ.ಕೆ. ಅನಿಲ್ ಕುಮಾರ್ ಮತ್ತು ಅವರ ಪತ್ನಿ ಲಕ್ಷ್ಮಿ ಅವರು 4 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಇದಲ್ಲದೆ ಮಂತ್ರಾಲಯದಲ್ಲಿ ಎರಡು ಕಡೆ ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಶೌಚಾಲಯ ಸ್ಥಾಪಿಸಿ ಅದರ ನಿರ್ವಹಣೆಯನ್ನು ಮಾಡುತ್ತಿದ್ದಾರೆ. ಈ ಸಾರಿ ಆರಾಧನೆಯ ಸಮಯದಲ್ಲಿ ವಸತಿ ಗೃಹಗಳ ಬುಕಿಂಗ್ ಕೇಂದ್ರದ ಬಳಿ ಹೊಸದಾಗಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ್ದಾರೆ.<br /> <br /> ‘ಶ್ರೀಗುರುರಾಯರ ಪ್ರೇರಣೆ ಮತ್ತು ಮಂತ್ರಾಲಯ ಶ್ರೀ ಅವರ ಆಶೀರ್ವಾದದಿಂದ ‘ವೃಕ್ಷ ಪ್ರಸಾದ’ ಸೇವೆ ಮಾಡುತ್ತಿದ್ದೇವೆ. ಕಳೆದ ವರ್ಷ 10 ಸಾವಿರ ತುಳಿಸಿ ಸಸಿಗಳು ಸೇರಿದಂತೆ ಸುಮಾರು 24 ಸಾವಿರ ಸಸಿಗಳನ್ನು ವಿತರಣೆ ಮಾಡಲಾಗಿತ್ತು. ಈ ಸಾರಿ 20 ಸಾವಿರ ಸಸಿಗ<br /> ಳನ್ನು ವಿತರಣೆ ಮಾಡುವ ಉದ್ದೇಶ ಇದೆ’ ಎಂದು ಎಂ.ಕೆ. ಅನಿಲ್ಕುಮಾರ್ ತಿಳಿಸಿದರು.<br /> <br /> ‘ಒಂದು ಸಸಿಗೆ ಸಾಗಣೆ ವೆಚ್ಚವೂ ಸೇರಿ ₹12ರಿಂದ ₹15 ವೆಚ್ಚವಾಗುತ್ತದೆ. ಆದಷ್ಟೂ ಮಂತ್ರಾಲಯದ ಸಮೀಪದಲ್ಲೇ ಖಾಸಗಿ ಮತ್ತು ಸರ್ಕಾರಿ ನರ್ಸರಿಗಳಿಂದ ಸಸಿಗಳನ್ನು ಖರೀದಿ ಮಾಡುತ್ತೇವೆ. ಬೆಂಗಳೂರಿನಿಂದಲೂ ಸಸಿಗಳನ್ನು ತಂದಿದ್ದೇವೆ. ಮಂತ್ರಾಲಯ ಮಠದ ಸಮೀಪದಲ್ಲಿ ಸಸಿಗಳ ವಿತರಣೆಗೆ ಶಾಶ್ವತವಾದ ಕೌಂಟರ್ ತೆರೆಯುವ ಆಲೋಚನೆ ಕೂಡ ಇದೆ’ ಎಂದರು.<br /> <br /> 14 ವರ್ಷದಿಂದ ಆರಾಧನೆ ಸಮಯ ಮಂತ್ರಾಲಯಕ್ಕೆ ಬರುತ್ತಿದ್ದೇನೆ. ಆದರೆ, ‘ವೃಕ್ಷ ಪ್ರಸಾದ’ ತೆಗೆದುಕೊಂಡಿರಲಿಲ್ಲ. ಈ ಸಾರಿ ಎರಡು ಸಸಿ ಕೊಂಡೊಯ್ಯುವೆ.<br /> -ಮುನಿರತ್ನ, ಬಂಗಾರಪೇಟೆ ಭಕ್ತ<br /> <br /> <strong>ಮುಖ್ಯಾಂಶಗಳು</strong><br /> * 4 ವರ್ಷಗಳಿಂದ ‘ವೃಕ್ಷ ಪ್ರಸಾದ’<br /> * ಸಸಿ ವಿತರಣೆಗೆ ಶಾಶ್ವತ ಕೌಂಟರ್ ತೆರೆಯುವ ಚಿಂತನೆ<br /> * ಕಳೆದ ವರ್ಷ 24 ಸಾವಿರಕ್ಕೂ ಹೆಚ್ಚು ಸಸಿಗಳ ವಿತರಣೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>