<p><strong>ಸಾಗರ: </strong>‘ಪ್ರಶಸ್ತಿ ಬಂದಿರುವುದು ಸಂತೋಷ ತಂದಿರುವುದರ ಜೊತೆಗೆ ನನಗಿಂತ ಅರ್ಹರಿಗೆ ಪ್ರಶಸ್ತಿ ತಪ್ಪಿರ ಬಹುದೇನೋ’ ಎನ್ನುವ ಅಳುಕು ಕೂಡ ಕಾಡುತ್ತಿದೆ ಎಂದು ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತ ರಾದ ರಂಗಕರ್ಮಿ ಹೆಗ್ಗೋಡಿನ ನೀನಾಸಂನ ಅಕ್ಷರ ಕೆ.ವಿ. ಪ್ರತಿಕ್ರಿ ಯಿಸಿದ್ದಾರೆ.<br /> <br /> ಭಾರತದಲ್ಲಿ ಹಲವು ಭಾಷೆ, ಸಂಸ್ಕೃತಿ ಗಳು ಇವೆ. ಅದೇ ರೀತಿ ಅನೇಕ ಪ್ರಕಾರ ಗಳ ನೃತ್ಯ, ರಂಗಭೂಮಿ, ಬಯಲಾಟ ಸೇರಿದಂತೆ ಹಲವು ಕಲೆಗಳು ಇವೆ. ಈ ಕಲಾ ಕ್ಷೇತ್ರಗಳಲ್ಲಿ ಅಸಂಖ್ಯಾತ ಜನರು ಕೆಲಸ ಮಾಡುತ್ತಿದ್ದಾರೆ. ಪ್ರತಿ ವರ್ಷ 300 ಕಲಾವಿದರಿಗೆ ಪ್ರಶಸ್ತಿ ನೀಡಿದರೂ ಅರ್ಹರು ಇನ್ನೂ ಉಳಿಯುತ್ತಾರೆಂದರು.<br /> <br /> <strong>ಮುಜುಗರ ತಪ್ಪಿಸಬೇಕು: </strong>ಪ್ರಶಸ್ತಿ ಪುರಸ್ಕೃತರಾದ ಚಿದಂಬರರಾವ್ ಜಂಬೆ ಪ್ರತಿಕ್ರಿಯಿಸಿ ‘ಪ್ರಶಸ್ತಿ ಬಂದಿರುವುದು ಸಹಜವಾಗಿ ಸಂತಸ ತಂದಿದೆ. ಆದರೆ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಯಂತಹ ಜವಾಬ್ದಾರಿಯುತ ಸಂಸ್ಥೆ ಪ್ರಶಸ್ತಿ ನೀಡುವಾಗ ಪ್ರಾದೇಶಿಕ ಹಾಗೂ ಸಮುದಾಯದ ಸಮತೋಲನವನ್ನು ಕಾಪಾಡಬೇಕು.<br /> <br /> ಒಂದೇ ಪ್ರದೇಶದ, ಒಂದೇ ಸಮು ದಾಯಕ್ಕೆ ಸೇರಿದವರಿಗೆ ಪ್ರಶಸ್ತಿ ನೀಡುವುದರಿಂದ ಸಂಭ್ರಮಕ್ಕೆ ಸ್ವಲ್ಪ ಮಟ್ಟಿಗೆ ಮುಜುಗರ ಉಂಟಾಗುತ್ತದೆ. ಇದನ್ನು ಅಕಾಡೆಮಿ ತಪ್ಪಿಸಬಹುದಿತ್ತು’ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಗರ: </strong>‘ಪ್ರಶಸ್ತಿ ಬಂದಿರುವುದು ಸಂತೋಷ ತಂದಿರುವುದರ ಜೊತೆಗೆ ನನಗಿಂತ ಅರ್ಹರಿಗೆ ಪ್ರಶಸ್ತಿ ತಪ್ಪಿರ ಬಹುದೇನೋ’ ಎನ್ನುವ ಅಳುಕು ಕೂಡ ಕಾಡುತ್ತಿದೆ ಎಂದು ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತ ರಾದ ರಂಗಕರ್ಮಿ ಹೆಗ್ಗೋಡಿನ ನೀನಾಸಂನ ಅಕ್ಷರ ಕೆ.ವಿ. ಪ್ರತಿಕ್ರಿ ಯಿಸಿದ್ದಾರೆ.<br /> <br /> ಭಾರತದಲ್ಲಿ ಹಲವು ಭಾಷೆ, ಸಂಸ್ಕೃತಿ ಗಳು ಇವೆ. ಅದೇ ರೀತಿ ಅನೇಕ ಪ್ರಕಾರ ಗಳ ನೃತ್ಯ, ರಂಗಭೂಮಿ, ಬಯಲಾಟ ಸೇರಿದಂತೆ ಹಲವು ಕಲೆಗಳು ಇವೆ. ಈ ಕಲಾ ಕ್ಷೇತ್ರಗಳಲ್ಲಿ ಅಸಂಖ್ಯಾತ ಜನರು ಕೆಲಸ ಮಾಡುತ್ತಿದ್ದಾರೆ. ಪ್ರತಿ ವರ್ಷ 300 ಕಲಾವಿದರಿಗೆ ಪ್ರಶಸ್ತಿ ನೀಡಿದರೂ ಅರ್ಹರು ಇನ್ನೂ ಉಳಿಯುತ್ತಾರೆಂದರು.<br /> <br /> <strong>ಮುಜುಗರ ತಪ್ಪಿಸಬೇಕು: </strong>ಪ್ರಶಸ್ತಿ ಪುರಸ್ಕೃತರಾದ ಚಿದಂಬರರಾವ್ ಜಂಬೆ ಪ್ರತಿಕ್ರಿಯಿಸಿ ‘ಪ್ರಶಸ್ತಿ ಬಂದಿರುವುದು ಸಹಜವಾಗಿ ಸಂತಸ ತಂದಿದೆ. ಆದರೆ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಯಂತಹ ಜವಾಬ್ದಾರಿಯುತ ಸಂಸ್ಥೆ ಪ್ರಶಸ್ತಿ ನೀಡುವಾಗ ಪ್ರಾದೇಶಿಕ ಹಾಗೂ ಸಮುದಾಯದ ಸಮತೋಲನವನ್ನು ಕಾಪಾಡಬೇಕು.<br /> <br /> ಒಂದೇ ಪ್ರದೇಶದ, ಒಂದೇ ಸಮು ದಾಯಕ್ಕೆ ಸೇರಿದವರಿಗೆ ಪ್ರಶಸ್ತಿ ನೀಡುವುದರಿಂದ ಸಂಭ್ರಮಕ್ಕೆ ಸ್ವಲ್ಪ ಮಟ್ಟಿಗೆ ಮುಜುಗರ ಉಂಟಾಗುತ್ತದೆ. ಇದನ್ನು ಅಕಾಡೆಮಿ ತಪ್ಪಿಸಬಹುದಿತ್ತು’ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>