<p><strong>ಬೆಂಗಳೂರು: ‘</strong>ಸರ್ವಜ್ಞ ಹಾಗೂ ಪರಮಾರ್ಥ’ ಇವರೆಡೂ ಸರ್ವಜ್ಞನ ವಚನಗಳ ಅಂಕಿತ ಎಂಬ ವಾದ ಇದೆ. ಆದರೆ, ಪರಮಾರ್ಥವೆಂಬ ಅಂಕಿತವೇ ಸೂಕ್ತ ಎಂದು ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಪ್ರತಿಪಾದಿಸಿದರು.<br /> <br /> ‘ಕವಿ ಸರ್ವಜ್ಞ’ ಜಯಂತಿ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಲ್ಲಿ ಗುರುವಾರ ಆಯೋಜಿಸಿದ್ದ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.<br /> <br /> ‘ಸರ್ವಜ್ಞಮೂರ್ತಿ ಎಂಬ ಹೆಸರಿನ ಕವಿಯ ವಚನಗಳ ಅಂಕಿತವನ್ನು ‘ಸರ್ವಜ್ಞ’ವೆಂದೇ ಗುರುತಿಸಲಾಗುತ್ತಿದೆ. ಆದರೆ, ಪರಮಾರ್ಥವೆಂಬುದು ಹೆಚ್ಚು ಸೂಕ್ತವೆಂಬುದನ್ನು ಆತನ ವಚನಗಳೇ ಸಾರುತ್ತವೆ’ ಎಂದು ಅಭಿಪ್ರಾಯಪಟ್ಟರು.<br /> <br /> ‘ಜನಪದ ಸಾಹಿತ್ಯವು ಸಾರ್ವಜನಿಕ ಆಸ್ತಿಯಾಗಿತ್ತು. ಸರ್ವಜ್ಞನ ಕಾಲದಲ್ಲಿ ಸಾಹಿತ್ಯ ಅರೆ ಖಾಸಗಿ ಸ್ವತ್ತಾಗಿತ್ತು. ಹಾಗಾಗಿ ಆತನ ನಂತರವೂ ಸರ್ವಜ್ಞ ಹೆಸರಿನಲ್ಲಿ ಹಲವರು ವಚನಗಳನ್ನು ರಚಿಸಿದ್ದಾರೆ. ಈಗ ಸರ್ವಜ್ಞನ ಮೂಲ ವಚನಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆಯಬೇಕಿದೆ’ ಎಂದು ತಿಳಿಸಿದರು.<br /> <br /> ಹಿರಿಯ ಸಾಹಿತಿ ಡಾ.ಹಂಪ ನಾಗರಾಜಯ್ಯ, ‘ಸರ್ವಜ್ಞನ ಜನಪ್ರಿಯ ಮಾದರಿಯನ್ನು ಅನುಸರಿಸಿ ಕೆಲವರು ಅವನ ಖಾತೆಗೆ ಹಲವು ವಚನಗಳನ್ನು ಜಮಾ ಮಾಡಿದ್ದಾರೆ. ಅವುಗಳನ್ನು ಅಗತ್ಯವಾಗಿ ಬೇರ್ಪಡಿಸಬೇಕಿದೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: ‘</strong>ಸರ್ವಜ್ಞ ಹಾಗೂ ಪರಮಾರ್ಥ’ ಇವರೆಡೂ ಸರ್ವಜ್ಞನ ವಚನಗಳ ಅಂಕಿತ ಎಂಬ ವಾದ ಇದೆ. ಆದರೆ, ಪರಮಾರ್ಥವೆಂಬ ಅಂಕಿತವೇ ಸೂಕ್ತ ಎಂದು ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಪ್ರತಿಪಾದಿಸಿದರು.<br /> <br /> ‘ಕವಿ ಸರ್ವಜ್ಞ’ ಜಯಂತಿ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಲ್ಲಿ ಗುರುವಾರ ಆಯೋಜಿಸಿದ್ದ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.<br /> <br /> ‘ಸರ್ವಜ್ಞಮೂರ್ತಿ ಎಂಬ ಹೆಸರಿನ ಕವಿಯ ವಚನಗಳ ಅಂಕಿತವನ್ನು ‘ಸರ್ವಜ್ಞ’ವೆಂದೇ ಗುರುತಿಸಲಾಗುತ್ತಿದೆ. ಆದರೆ, ಪರಮಾರ್ಥವೆಂಬುದು ಹೆಚ್ಚು ಸೂಕ್ತವೆಂಬುದನ್ನು ಆತನ ವಚನಗಳೇ ಸಾರುತ್ತವೆ’ ಎಂದು ಅಭಿಪ್ರಾಯಪಟ್ಟರು.<br /> <br /> ‘ಜನಪದ ಸಾಹಿತ್ಯವು ಸಾರ್ವಜನಿಕ ಆಸ್ತಿಯಾಗಿತ್ತು. ಸರ್ವಜ್ಞನ ಕಾಲದಲ್ಲಿ ಸಾಹಿತ್ಯ ಅರೆ ಖಾಸಗಿ ಸ್ವತ್ತಾಗಿತ್ತು. ಹಾಗಾಗಿ ಆತನ ನಂತರವೂ ಸರ್ವಜ್ಞ ಹೆಸರಿನಲ್ಲಿ ಹಲವರು ವಚನಗಳನ್ನು ರಚಿಸಿದ್ದಾರೆ. ಈಗ ಸರ್ವಜ್ಞನ ಮೂಲ ವಚನಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆಯಬೇಕಿದೆ’ ಎಂದು ತಿಳಿಸಿದರು.<br /> <br /> ಹಿರಿಯ ಸಾಹಿತಿ ಡಾ.ಹಂಪ ನಾಗರಾಜಯ್ಯ, ‘ಸರ್ವಜ್ಞನ ಜನಪ್ರಿಯ ಮಾದರಿಯನ್ನು ಅನುಸರಿಸಿ ಕೆಲವರು ಅವನ ಖಾತೆಗೆ ಹಲವು ವಚನಗಳನ್ನು ಜಮಾ ಮಾಡಿದ್ದಾರೆ. ಅವುಗಳನ್ನು ಅಗತ್ಯವಾಗಿ ಬೇರ್ಪಡಿಸಬೇಕಿದೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>