ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಶ್ರೀನಿವಾಸ್ ಮಾತನಾಡಿ, ‘ಕಾಂಗ್ರೆಸ್ ಅಧಿಕಾರಕ್ಕೆ ಬರಲು ಹಿರಿಯ ಕಾರ್ಯಕರ್ತರ ಅನುಭವಗಳು ಯುವ ಕಾರ್ಯಕರ್ತರ ಪಡೆಗೆ ಬೇಕಾಗಿದೆ. ಪಕ್ಷಕ್ಕೆ ಹಿಂದಿರುಗಿ ಬರುವಂತೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಿಗೆ ಮನವಿ ಮಾಡಲಾಗಿತ್ತು. ಬಿಜೆಪಿಯಲ್ಲಿ ಉಸಿರುಕಟ್ಟಿದ ವಾತಾವರಣವಿದ್ದುದರಿಂದ ಅವರು ಪುನಃ ಕಾಂಗ್ರೆಸ್ಗೆ ಹಿಂದಿರುಗಿದ್ದಾರೆ. ಶೃಂಗೇರಿಯಲ್ಲಿ ಶನಿವಾರ ನಡೆಯುವ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರ ಸಮ್ಮುಖದಲ್ಲಿ ಕಾಂಗ್ರೆಸ್ ಗೆ ಸುಬ್ರಹ್ಮಣ್ಯ ಅವರು ಸೇರ್ಪಡೆಯಾಗಲಿದ್ದಾರೆ‘ ಎಂದರು.
ಕಾಂಗ್ರೆಸ್ ಸೇರ್ಪಡೆಯಾದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಎಸ್.ಸುಬ್ರಹ್ಮಣ್ಯ ಮಾತನಾಡಿ, ‘ಅನಿವಾರ್ಯ ಕಾರಣಗಳಿಂದ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರ್ಪಡೆಯಾಗಿದ್ದೆ. ಬಿಜೆಪಿ ವಾತಾವರಣಕ್ಕೂ ಕಾಂಗ್ರೆಸ್ ವಾತಾವರಣಕ್ಕೂ ವ್ಯತ್ಯಾಸವಿದೆ. ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಸರ್ವಾಧಿಕಾರಿ ಧೋರಣೆಯಿದ್ದು ಒಬ್ಬ ವ್ಯಕ್ತಿ ಹೇಳಿದ್ದನ್ನು ಎಲ್ಲರೂ ಕೇಳುವ ಸ್ಥಿತಿ ಇದೆ. ಅಭಿಪ್ರಾಯ ಹಂಚಿಕೊಳ್ಳಲು ಮುಕ್ತ ಸ್ವಾತಂತ್ರ್ಯವಿಲ್ಲ’ ಎಂದರು.
ಕೆಪಿಸಿಸಿ ಸದಸ್ಯ ಪಿ.ಆರ್.ಸದಾಶಿವ ಮಾತನಾಡಿದರು. ತಾಲ್ಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಗೇರುಬೈಲು ನಟರಾಜ್, ಮುಖಂಡರಾದ ಕೆ.ಎಂ.ಸುಂದರೇಶ್, ಅಬೂಬಕರ್, ಉಪೇಂದ್ರ, ಸುನಿಲ್ ಕುಮಾರ್, ಎಲ್ದೋಸ್, ಏಲಿಯಾಸ್, ವಿಜು, ನಿಥಿನ್, ಸತೀಶ್, ಮಂಜು,ನರೇಂದ್ರ, ಸಾಜು, ಪ್ರಶಾಂತ್ ಶೆಟ್ಟಿ, ಜುಬೇದಾ, ಮೂರ್ತಿ, ಮಾಳೂರು ದಿಣ್ಣೆರಮೇಶ್, ಹೊನಗಾರ್ ರಮೇಶ್, ಸಂತೋಷ್, ಈ.ಸಿ.ಜೋಯಿ ಮತ್ತಿತರರಿದ್ದರು.