ಉಪೇಂದ್ರ ಕನ್ನಡ ಸಿನಿಮಾದ ವಿಭಿನ್ನ ಪ್ರಯೋಗಗಳ ನಟ, ನಿರ್ದೇಶಕ ಹಾಗೂ ರಾಜಕಾರಣಿ. ‘ಪ್ರಜಾವಾಣಿ’ಯ ಸಂದರ್ಶನದಲ್ಲಿ ತಮ್ಮ ಮೂರು ದಶಕದ ಸಿನಿಮಾ ಬದುಕಿನ ಸಂಗತಿಗಳನ್ನು ತೆರೆದಿಟ್ಟರು. ಅವರ ನಟನೆಯ ಬಹುನಿರೀಕ್ಷೆಯ ಸಿನಿಮಾ ‘ಐ ಲವ್ ಯು’ ಮತ್ತು ಕನಸಿನ ಕೂಸು ಉತ್ತಮ ಪ್ರಜಾಕೀಯ ಪಾರ್ಟಿ(ಯುಪಿಪಿ) ಬಗ್ಗೆಯೂ ಇಲ್ಲಿ ಮಾತನಾಡಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಸುಳಿವನ್ನೂ ನೀಡಿದರು.