ಇದನ್ನೂ ಓದಿ: Chandrayaan-3: ಲ್ಯಾಂಡ್ ಆದ ಬಳಿಕ ತೆಗೆದ ಚಿತ್ರಗಳನ್ನು ಹಂಚಿಕೊಂಡ ಇಸ್ರೊ
ರವೀಂದ್ರನಾಥ್ ಟ್ಯಾಗೋರ್ ಅವರ ಸಾಲು ಉಲ್ಲೇಖಿಸಿದ ದಕ್ಷಿಣ ಆಫ್ರಿಕಾ ಅಧ್ಯಕ್ಷ
ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರು ನೋಬೆಲ್ ಪುರಸ್ಕೃತ ಬರಹಗಾರ ರವೀಂದ್ರನಾಥ್ ಟ್ಯಾಗೋರ್ ಅವರು ಹೇಳಿದ ‘ಜೀವನದ ಪಯಣ ಅಂತ್ಯವಿಲ್ಲದಿದ್ದರೆ ಅದರ ಗುರಿ ಎಲ್ಲಿದೆ? ಎಂದರೆ ನಾವು ಅಂತ್ಯವಿಲ್ಲದ ಅರಮನೆಯಲ್ಲಿದ್ದೇವೆ, ಆದರೆ ನಾವು ತಲುಪಿದ್ದೇವೆ. ಇನ್ನು ಅನ್ವೇಷಿಸುವ ಮೂಲಕ ಮತ್ತು ಅದರೊಂದಿಗೆ ನಮ್ಮ ಸಂಬಂಧವನ್ನು ವಿಸ್ತರಿಸುವ ಮೂಲಕ, ಅದನ್ನು ಹೆಚ್ಚು ಹೆಚ್ಚು ನಮ್ಮದಾಗಿಸಿಕೊಳ್ಳುತ್ತೇವೆ’ ಎನ್ನುವ ಸಾಲನ್ನು ಉಲ್ಲೇಖಿಸಿ ಭಾರತಕ್ಕೆ ಅಭಿನಂದಿಸಿದ್ದಾರೆ.
ಈ ರೀತಿಯ ಅನೇಕ ಸಾಧನೆಗಳು ಸಮೃದ್ಧಿ, ಪ್ರಗತಿ ಮತ್ತು ಶಾಂತಿಯತ್ತ ಮುನ್ನಡೆಯಲು ನಮಗೆ ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳಿದ್ದಾರೆ.
ಬ್ರಿಕ್ಸ್ ಶೃಂಗಸಭೆಯು ಭಾರತದ ಈ ಯಶಸ್ಸನ್ನು ಸಾಧಿಸಲು ಮತ್ತೊಂದು ವೇದಿಕೆಯಾದಂತಾಗಿದೆ ಎಂದು ಖುಷಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Chandrayaan 3 | ಅಮೆರಿಕನ್ ಭಾರತೀಯರಲ್ಲೂ ಮನೆ ಮಾಡಿದ ಸಂಭ್ರಮ