<p><strong>ಕಠ್ಮಂಡು:</strong> ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್.ಜೈಶಂಕರ್ ಅವರು ನೇಪಾಳದ ಪ್ರಸಿದ್ಧ ಪಶುಪತಿನಾಥ ದೇವಾಲಯದ ಆವರಣದಲ್ಲಿ ಇಂದು (ಶುಕ್ರವಾರ) ರುದ್ರಾಕ್ಷಿ ಗಿಡ ನೆಟ್ಟು ಪ್ರಾರ್ಥನೆ ಸಲ್ಲಿಸಿದ್ದಾರೆ.</p><p>ಜೈಶಂಕರ್ ಅವರು ಈ ವರ್ಷ ಕೈಗೊಂಡಿರುವ ಮೊದಲ ವಿದೇಶ ಭೇಟಿ ಇದಾಗಿದೆ. ಅವರು ಗುರುವಾರವಷ್ಟೇ ಕಠ್ಮಂಡು ತಲುಪಿದ್ದಾರೆ.</p><p>ರಾಜತಾಂತ್ರಿಕ ಭೇಟಿಯ ನಿಗದಿತ ಕಾರ್ಯಕ್ರಮಗಳು ಪ್ರಾರಂಭವಾಗುವುದಕ್ಕೂ ಮುನ್ನ ದೇವಾಲಯಕ್ಕೆ ತೆರಳಿದ ಅವರು, ಎರಡೂ ದೇಶಗಳ ಜನರ ಶ್ರೇಯ ಮತ್ತು ಉಭಯ ರಾಷ್ಟ್ರಗಳ ಸಂಬಂಧ ವೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.</p><p>ಹಿಂದೂ ದೈವವಾದ ಶಿವನು ಪ್ರಾಣಿಗಳ ರಕ್ಷಣೆಗಾಗಿ 'ಪಶುಪತಿ'ಯಾಗಿ ಅವತಾರವೆತ್ತಿದ ಎಂಬ ನಂಬಿಕೆ ಇದೆ. ಅದರಂತೆ ಪಶುಪತಿನಾಥನನ್ನು ಶತಮಾನಗಳಿಂದಲೂ ಆರಾಧಿಸಲಾಗುತ್ತಿದೆ.</p><p>ಕಠ್ಮಂಡು ಹೊರವಲಯದಲ್ಲಿ ಹರಿಯುವ ಬಾಗ್ಮತಿ ನದಿ ದಂಡೆಯಲ್ಲಿ ಈ ಹಿಂದೂ ದೇವಾಲಯವಿದೆ. ಪ್ರತಿವರ್ಷ ಲಕ್ಷಾಂತರ ಯಾತ್ರಿಕರು ಇಲ್ಲಿಗೆ ಭೇಟಿ ನೀಡುತ್ತಾರೆ.</p><p><strong>ನೇಪಾಳ ಪ್ರಧಾನಿಯೊಂದಿಗೆ ಮಾತುಕತೆ<br></strong>ನೇಪಾಳ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಅವರನ್ನು ಗುರುವಾರವೇ ಭೇಟಿಯಾದ ಜೈಶಂಕರ್, ಭಾರತ ಮತ್ತು ನೇಪಾಳ ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿದರು. ದೇವುಬಾ ಜೊತೆಗಿನ ಚಿತ್ರವನ್ನು ತಮ್ಮ ಎಕ್ಸ್/ಟ್ವಿಟರ್ ಪುಟದಲ್ಲಿ ಹಂಚಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಠ್ಮಂಡು:</strong> ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್.ಜೈಶಂಕರ್ ಅವರು ನೇಪಾಳದ ಪ್ರಸಿದ್ಧ ಪಶುಪತಿನಾಥ ದೇವಾಲಯದ ಆವರಣದಲ್ಲಿ ಇಂದು (ಶುಕ್ರವಾರ) ರುದ್ರಾಕ್ಷಿ ಗಿಡ ನೆಟ್ಟು ಪ್ರಾರ್ಥನೆ ಸಲ್ಲಿಸಿದ್ದಾರೆ.</p><p>ಜೈಶಂಕರ್ ಅವರು ಈ ವರ್ಷ ಕೈಗೊಂಡಿರುವ ಮೊದಲ ವಿದೇಶ ಭೇಟಿ ಇದಾಗಿದೆ. ಅವರು ಗುರುವಾರವಷ್ಟೇ ಕಠ್ಮಂಡು ತಲುಪಿದ್ದಾರೆ.</p><p>ರಾಜತಾಂತ್ರಿಕ ಭೇಟಿಯ ನಿಗದಿತ ಕಾರ್ಯಕ್ರಮಗಳು ಪ್ರಾರಂಭವಾಗುವುದಕ್ಕೂ ಮುನ್ನ ದೇವಾಲಯಕ್ಕೆ ತೆರಳಿದ ಅವರು, ಎರಡೂ ದೇಶಗಳ ಜನರ ಶ್ರೇಯ ಮತ್ತು ಉಭಯ ರಾಷ್ಟ್ರಗಳ ಸಂಬಂಧ ವೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.</p><p>ಹಿಂದೂ ದೈವವಾದ ಶಿವನು ಪ್ರಾಣಿಗಳ ರಕ್ಷಣೆಗಾಗಿ 'ಪಶುಪತಿ'ಯಾಗಿ ಅವತಾರವೆತ್ತಿದ ಎಂಬ ನಂಬಿಕೆ ಇದೆ. ಅದರಂತೆ ಪಶುಪತಿನಾಥನನ್ನು ಶತಮಾನಗಳಿಂದಲೂ ಆರಾಧಿಸಲಾಗುತ್ತಿದೆ.</p><p>ಕಠ್ಮಂಡು ಹೊರವಲಯದಲ್ಲಿ ಹರಿಯುವ ಬಾಗ್ಮತಿ ನದಿ ದಂಡೆಯಲ್ಲಿ ಈ ಹಿಂದೂ ದೇವಾಲಯವಿದೆ. ಪ್ರತಿವರ್ಷ ಲಕ್ಷಾಂತರ ಯಾತ್ರಿಕರು ಇಲ್ಲಿಗೆ ಭೇಟಿ ನೀಡುತ್ತಾರೆ.</p><p><strong>ನೇಪಾಳ ಪ್ರಧಾನಿಯೊಂದಿಗೆ ಮಾತುಕತೆ<br></strong>ನೇಪಾಳ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಅವರನ್ನು ಗುರುವಾರವೇ ಭೇಟಿಯಾದ ಜೈಶಂಕರ್, ಭಾರತ ಮತ್ತು ನೇಪಾಳ ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿದರು. ದೇವುಬಾ ಜೊತೆಗಿನ ಚಿತ್ರವನ್ನು ತಮ್ಮ ಎಕ್ಸ್/ಟ್ವಿಟರ್ ಪುಟದಲ್ಲಿ ಹಂಚಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>