ಉಗ್ರಗಾಮಿ ಸಂಘಟನೆ ಜಮಾತ್–ಇ–ಇಸ್ಲಾಂನ ಬೆಂಬಲದೊಂದಿಗೆ, ಸರ್ಕಾರವನ್ನು ಉರುಳಿಸುವ ವಿರೋಧ ಪಕ್ಷಗಳ ಪ್ರಯತ್ನದಲ್ಲಿ ನೂರುಲ್ ಹಕ್ ನೂರ್ ಮುಂಚೂಣಿಯಲ್ಲಿದ್ದು, ಅವರು ಮತ್ತು ಅವರ ಸಹಚರರು ಶೇಖ್ ಹಸೀನಾ ನೇತೃತ್ವದ ಸರ್ಕಾರದ ಜಾತ್ಯತೀತ ನಿಲುವಿಗೆ ವಿರೋಧ ಹೊಂದಿದ್ದಾರೆ. ಹೀಗಾಗಿ, ಹಿಂದೂಗಳು ಮತ್ತು ಭಾರತದ ವಿರುದ್ಧ ದೂಷಣೆಗಳ ಸುರಿಮಳೆಗೈಯ್ಯುತ್ತಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
‘ಹಿಂದೂ ಧರ್ಮಗ್ರಂಥಗಳು ಯಾವುದೇ ನೈತಿಕ ಬೋಧನೆಯನ್ನು ಮಾಡುವುದಿಲ್ಲ. ಅವು ಅಶ್ಲೀಲ ಬರಹಗಳು’ ಎಂದು ಬಾಂಗ್ಲಾದೇಶದ ಗೋನೊ ಅಧಿಕಾರ್ ಪರಿಷತ್ನ ಜಂಟಿ ಸಂಚಾಲಕ ಮತ್ತು ನೂರುಲ್ ಹಕ್ ನೂರ್ ಅವರ ಆಪ್ತ ತಾರಿಕ್ ರೆಹಮಾನ್ ಫೇಸ್ಬುಕ್ ಲೈವ್ನಲ್ಲಿ ಹೇಳಿದ್ದು, ಹಿಂದೂ ಧರ್ಮದ ಬಗ್ಗೆ ಬಲವಾದ ವಿರೋಧ ವ್ಯಕ್ತಪಡಿಸಿದ್ದಾರೆ.