ಹಸಿನಾ ಸರ್ಕಾರ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮಗಳಿಂದ ಅಲ್ಪಸಂಖ್ಯಾತರ ಬದುಕು ಸುಧಾರಣೆಗೊಂಡಿದೆ. ಕಳೆದ 12 ವರ್ಷಗಳಲ್ಲಿ ದೇಶದಲ್ಲಿ ದುರ್ಗಾ ಪೂಜಾ ಮಂಟಪಗಳ ಸಂಖ್ಯೆ 15,000 ಹೆಚ್ಚಾಗಿದ್ದು, ಒಟ್ಟು ಸಂಖ್ಯೆ ಸುಮಾರು 30,000ಕ್ಕೆ ತಲುಪಿದೆ. ಢಾಕೇಶ್ವರಿ ದೇವಸ್ಥಾನಕ್ಕೆ 1.5 ಎಕರೆ ಭೂಮಿ ವಾಪಾಸ್ ಸಿಕ್ಕಿದೆ ಎಂದು ಮೋನಿಂದರ್ ಹೇಳಿದ್ದಾರೆ.