ದೊರೈಸ್ವಾಮಿ ಅವರು ಗುರುದ್ವಾರಕ್ಕೆ ಭೇಟಿ ನೀಡುವುದನ್ನು ವಿರೋಧಿಸಿ ಸ್ಥಳದಲ್ಲಿ ಶಾಂತಿಯುತವಾಗಿ ಮತ್ತು ಕಾನೂನು ಬದ್ಧವಾಗಿ ಪ್ರತಿಭಟನೆ ನಡೆಸಲಾಗುತ್ತಿತ್ತು. ದೊರೈಸ್ವಾಮಿ ಅವರು ಕಾರಿನಲ್ಲಿಯೇ ಸುರಕ್ಷಿತವಾಗಿದ್ದರು ಮತ್ತು ಸಿಖ್ ಸಮುದಾಯದ ತರ್ಕಬದ್ಧ ಪ್ರಶ್ನೆಗಳಿಗೂ ಅವರು ಉತ್ತರಿಸದೇ ಅಲ್ಲಿಂದ ನಿರ್ಗಮಿಸಲು ನಿರ್ಧರಿಸಿದರು. ಆದರೆ ಈಗ ಘಟನೆ ಕುರಿತು ಸುಳ್ಳು ಮಾಹಿತಿ ಹರಿದಾಡುತ್ತಿದೆ ಎಂದು ಸಂಘಟನೆಯು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದೆ.